ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪತಿ ಹಬ್ಬ ನಿರ್ಬಂಧಿಸಲು ಬಿಡುವುದಿಲ್ಲ: ಶಾಸಕ ಯತ್ನಾಳ

Last Updated 21 ಆಗಸ್ಟ್ 2021, 18:51 IST
ಅಕ್ಷರ ಗಾತ್ರ

ವಿಜಯಪುರ: ‘ಕೋವಿಡ್‌ ನೆಪದಲ್ಲಿ ಗಣಪತಿ ಹಬ್ಬ, ಹಿಂದೂ ಆಚರಣೆಗಳ ಮೇಲೆ ನಿರ್ಬಂಧ ಹೇರಿದರೆ ವಿಜಯಪುರದಲ್ಲಿ ಜಾರಿಗೊಳಿಸಲು ಬಿಡುವುದಿಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ, ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು.

ವಿಜಯಪುರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 50 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು

‘ಭಾಳಾದ್ರ, ನನಗೆ ಗುಂಡು ಹೊಡೆಯಬಹುದು. ಹಾಗಾದರೆ, ಇಡೀ ಕರ್ನಾಟಕದ ತುಂಬಾ ಬೆಂಕಿ ಹತ್ತೈತಿ. ಸತ್ತರೂ ಹೆಸರು ತೆಗೆದುಕೊಂಡು ಹೋಗುವೆ’ ಎಂದು ಹೇಳಿದರು.

‘ಗಣಪತಿ ಹಬ್ಬ, ದೀಪಾವಳಿ, ಸಂಕ್ರಾಂತಿ ಮಾಡಬೇಡಿ ಎಂದು ನೀವೇ ಹೇಳಿದರೆ ಹೇಗೆ? ಉಳಿದವರಿಗೆ ಅನುವು ಮಾಡಿಕೊಟ್ಟು, ನಮಗೆ ಬೇಡ ಎಂದರೆ ನಡೆಯುವುದಿಲ್ಲ ಎಂದು ಬೊಮ್ಮಾಯಿ ಅವರಿಗೆ ಸ್ಪಷ್ಟಪಡಿಸಿದ್ದೇನೆ’ ಎಂದರು.

‘ಗಣಪತಿ ಹಬ್ಬದ ಆಚರಣೆಗೆ ಯಾರೂ ತೊಂದರೆ ಮಾಡಬಾರದು ಎಂದು ಸಿಎಂ ಆದೇಶಿಸಿದ್ದಾರೆ. ಹಬ್ಬವನ್ನಾಚರಿಸಲು ಯಾರೂ ಹೆದರಬೇಕಾಗಿಲ್ಲ’ ಎಂದು ಹೇಳಿದರು.

ವಾರಾಂತ್ಯ ಕರ್ಫ್ಯೂಗೆ ವಿರೋಧ: ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಯತ್ನಾಳತೀವ್ರ ವಿರೋಧ ವ್ಯಕ್ತಪಡಿಸಿದರು. ಶನಿವಾರ, ಭಾನುವಾರ ಮಾತ್ರ ಕೊರೊನಾ ವಿಜಯ
ಪುರದಲ್ಲಿ ಅಡ್ಡಾಡುತ್ತಾ. ರಾತ್ರಿ ಮಾತ್ರ ಅಡ್ಡಾಡುತ್ತಾ? ಇದರಲ್ಲಿ ವೈಜ್ಞಾನಿಕತೆ ಎಲ್ಲಿದೆ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT