ಯಾದಗಿರಿ: ಪ್ರಧಾನಿ ಮೋದಿಯವರು ವಿವಿಧ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ನಗರದಾದ್ಯಂತ ಕಟ್ಟುನಿಟ್ಟಿನ ಭದ್ರತೆಯನ್ನು ಮಾಡಲಾಗಿದೆ.
ಪ್ರವೇಶ ದ್ವಾರಗಳಲ್ಲಿ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ಪ್ರತಿಯೊಬ್ಬರನ್ನು ಏಳೆಂಟು ಜನ ಪೊಲೀಸರು ಭದ್ರತಾ ತಪಾಸಣೆ ಕೈಗೊಂಡು ಒಳಗೆ ಬಿಡುತ್ತಿದ್ದಾರೆ. ಕಪ್ಪು ಕೈವಸ್ತ್ರ, ಕಪ್ಪು ವೇಲ್, ಕಪ್ಪು ಬಟ್ಟೆಗಳನ್ನು ಧರಿಸಿದವರನ್ನು ವಾಪಸ್ ಕಳಿಸುತ್ತಿದ್ದಾರೆ.
ಕಪ್ಪು ಬಟ್ಟೆಗಳನ್ನು ಇಡಲು ಪ್ರತ್ಯೇಕ ಮಳಿಗೆ ಮಾಡಲಾಗಿದೆ.
ಹಲವರು ಊಟ ಸೇವಿಸಿ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಎಲ್ಲಿ ನೋಡಿದರೂ ಜನ ಜನಜಂಗುಳಿ ಕಂಡುಬರುತ್ತಿದೆ. ಕಾರ್ಯಕ್ರಮದ ಹೊರ ಭಾಗದಲ್ಲಿ ಪೇರಲ, ಕಲ್ಲಂಗಡಿ, ಅನಾನಸ್ ವ್ಯಾಪಾರ ಭರ್ಜರಿ ನಡೆದಿದೆ.