‘2018 ರಲ್ಲಿ ನನ್ನನ್ನು ಸೋಲಿಸಲು ಎಲ್ಲಾ ಶಕ್ತಿಗಳು ಒಂದಾಗಿದ್ದವು. ಆಗ ಏನಾಯಿತು? ಮಾಜಿ ಪ್ರಧಾನಿದೇವೇಗೌಡರೇ ನನ್ನನ್ನು ಸೋಲಿಸುವುದಾಗಿ ಹೇಳಿದ್ದರು. ಆದರೆ ಅವರ ಸವಾಲು ಏನಾಯಿತು? ನನ್ನನ್ನು ಸೋಲಿಸಲು ದೇವೇಗೌಡರೇ ಮುಸ್ಲಿಂ ಆಗಲು ಹೊರಟಿದ್ದರು. ಕರ್ನಾಟಕದ ಮುಸ್ಲಿಮರು ಆಗಲ್ಲ ಎಂದರೆ ಜಮ್ಮು ಕಾಶ್ಮೀರದಿಂದ ಫಾರೂಕ್ ಅಬ್ದುಲ್ಲಾ ಅವರನ್ನು ತಂದು ನಿಲ್ಲಿಸಿ ಎಂದಿದ್ದೆ. ಆದೂ ಆಗಲ್ಲ ಎಂದರೆ ಕುಮಾರಸ್ವಾಮಿ, ರೇವಣ್ಣನ ತಂದು ನಿಲ್ಲಿಸಿ ಎಂದೆ. ಒಂದು ವೇಳೆ ನಾನು ಸೋತರೆ ನನ್ನ ತಲೆ ಕತ್ತರಿಸಿ ತಂದು ಕೊಡ್ತೀನಿ ಎಂದು ಹೇಳಿದೆ. ಆದರೆ, ನನ್ನನ್ನು ಸೋಲಿಸಲು ಆಗಲಿಲ್ಲ. ನನ್ನ ಲೀಡ್ ಜಾಸ್ತಿ ಆಯಿತು’ ಎಂದರು.