<p><strong>ವಡಗೇರಾ: </strong>ತಾಲ್ಲೂಕಿನ ಗೋನಾಲ ಗ್ರಾಮದ ಕೃಷ್ಣಾ ನದಿ ತಟದ ಮೇಲಿರುವ ದುರ್ಗಾದೇವಿ ದೇವಸ್ಥಾನಕ್ಕೆ ವಿದೇಶಗಳಿಂದಲೂ ಭಕ್ತರು ಬರುತ್ತಾರೆ. ಇಲ್ಲಿನ ದೇವರನ್ನು ಗಡೆ ದುರ್ಗಾದೇವಿ ಎಂತಲೂ ಕರೆಯಲಾಗುತ್ತದೆ.</p>.<p>ಈ ಕ್ಷೇತ್ರ ತಾಲ್ಲೂಕು ಕೇಂದ್ರದಿಂದ 35 ಕಿ.ಮೀ ದೂರದಲ್ಲಿದೆ.</p>.<p class="Subhead"><strong>ದೇವಿಯ ಹಿನ್ನೆಲೆ</strong></p>.<p class="Subhead">ದೇವಿಯ ಮೂಲ ಸ್ಥಳ ಗದಗ ಜಿಲ್ಲೆಯ ಗಜೇಂದ್ರಗಡ. ಗೋನಾಲ ಗ್ರಾಮದ ನಾಗಪ್ಪ ತಾತ ಎನ್ನುವವರು ಸುಮಾರು 500 ವರ್ಷಗಳ ಹಿಂದೆ ಸುಗ್ಗಿ ಮಾಡಲು ಗಜೇಂದ್ರಗಡಕ್ಕೆ ತೆರಳಿದ್ದರು. ಆ ವೇಳೆ ಅವರ ಭಕ್ತಿ ಮೆಚ್ಚಿ ದೇವಿ ಗೋನಾಲ ಗ್ರಾಮಕ್ಕೆ ಬಂದು ನೆಲೆಸಿದರು ಎನ್ನುವ ಪ್ರತೀತಿ ಇದೆ.</p>.<p>ನಾಗಪ್ಪ ತಾತನವರ ಮಗ ಮರಿಯಪ್ಪ, ಕನಕಪ್ಪ ತಾತನವರ ಕಾಲದಲ್ಲಿ ದೇಗುಲ ಅಷ್ಟಾಗಿ ಪ್ರಸಿದ್ಧಿ ಪಡೆಯಲಿಲ್ಲ. ಗುರು ಮರಿಲಿಂಗಪ್ಪ ಸ್ವಾಮಿ ಎಂಬುವವರಿಂದ ಈ ದೇಗುಲದ ಮಹಿಮೆ ರಾಜ್ಯದ ಗಡಿ ದಾಟಿತು. ಆಗಿನಿಂದಲೂ ಇಲ್ಲಿ ಜಾತ್ರೆ ನಡೆಯುತ್ತಿದೆ. ಪ್ರಸ್ತುತ ಮಹಾದೇವಪ್ಪ ಪೂಜಾರಿ, ಮರಿಯಪ್ಪ ಪೂಜಾರಿ ಅವರ ನೇತೃತ್ವದಲ್ಲಿ ಜಾತ್ರೆ ನಡೆಯುತ್ತದೆ.</p>.<p class="Subhead"><strong>ದೇವಿಯ ಜಾತ್ರೆ</strong></p>.<p class="Subhead">ಪ್ರತಿವರ್ಷ ಅವರಾತ್ರಿ ಅಮಾವಾಸ್ಯೆ ನಂತರದ ಮಂಗಳವಾರ ದೇವಿ ಜಾತ್ರೆ ನಡೆಯುತ್ತದೆ. ಜಾತ್ರೆಗೆ ಸುತ್ತಮುತ್ತಲಿನ ಗ್ರಾಮದವರು, ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳೂ ಸೇರಿದಂತೆ ಲಂಡನ್, ದುಬೈ, ಕಾಂಗೊನಿಂದಲೂ ಭಕ್ತರು ಬರುತ್ತಾರೆ.</p>.<p class="Subhead"><strong>ಪತ್ರಗಳ ಮೂಲಕ ಬೇಡಿಕೆ</strong></p>.<p class="Subhead">ದೇವಿ ದರ್ಶನಕ್ಕೆ ಬರುವ ರಾಜ್ಯದ ವಿವಿಧ ರಾಜಕಾರಣಿಗಳು ತಮ್ಮ ಬೇಡಿಕೆಗಳನ್ನು ಪತ್ರದಲ್ಲಿ ಬರೆದು ದೇವಿ ಮುಂದೆ ಇಡುತ್ತಾರೆ. ಡಿ.ಕೆ ಶಿವಕುಮಾರ್ ಹಾಗೂ ಬಿ.ಶ್ರೀರಾಮುಲು ಅವರು ಬೇಡಿಕೆ ಬರೆದು ದೇವಿ ಮುಂದೆ ಇಟ್ಟು ಪೂಜೆ ಸಲ್ಲಿಸಿದ್ದರು.</p>.<p class="Subhead"><strong>ಅಭಿವೃದ್ಧಿಯ ನಿರೀಕ್ಷೆಯಲ್ಲಿ</strong></p>.<p class="Subhead">ಗೋನಾಲ ದುರ್ಗಾದೇವಿ ದೇವಸ್ಥಾನದಲ್ಲಿ ಸೌಕರ್ಯ ಕೊರತೆ ಇದೆ. ಬೇರೆ ಕಡೆಯಿಂದ ಬರುವ ಭಕ್ತರಿಗೆ ಉಳಿದುಕೊಳ್ಳಲು ಯಾತ್ರಿ ನಿವಾಸ, ಸಮುದಾಯ ಭವನ ನಿರ್ಮಾಣದ ಅಗತ್ಯ ಇದೆ. ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಕಲ್ಪಿಸಬೇಕು ಎಂದು ಭಕ್ತರು ಒತ್ತಾಯಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಡಗೇರಾ: </strong>ತಾಲ್ಲೂಕಿನ ಗೋನಾಲ ಗ್ರಾಮದ ಕೃಷ್ಣಾ ನದಿ ತಟದ ಮೇಲಿರುವ ದುರ್ಗಾದೇವಿ ದೇವಸ್ಥಾನಕ್ಕೆ ವಿದೇಶಗಳಿಂದಲೂ ಭಕ್ತರು ಬರುತ್ತಾರೆ. ಇಲ್ಲಿನ ದೇವರನ್ನು ಗಡೆ ದುರ್ಗಾದೇವಿ ಎಂತಲೂ ಕರೆಯಲಾಗುತ್ತದೆ.</p>.<p>ಈ ಕ್ಷೇತ್ರ ತಾಲ್ಲೂಕು ಕೇಂದ್ರದಿಂದ 35 ಕಿ.ಮೀ ದೂರದಲ್ಲಿದೆ.</p>.<p class="Subhead"><strong>ದೇವಿಯ ಹಿನ್ನೆಲೆ</strong></p>.<p class="Subhead">ದೇವಿಯ ಮೂಲ ಸ್ಥಳ ಗದಗ ಜಿಲ್ಲೆಯ ಗಜೇಂದ್ರಗಡ. ಗೋನಾಲ ಗ್ರಾಮದ ನಾಗಪ್ಪ ತಾತ ಎನ್ನುವವರು ಸುಮಾರು 500 ವರ್ಷಗಳ ಹಿಂದೆ ಸುಗ್ಗಿ ಮಾಡಲು ಗಜೇಂದ್ರಗಡಕ್ಕೆ ತೆರಳಿದ್ದರು. ಆ ವೇಳೆ ಅವರ ಭಕ್ತಿ ಮೆಚ್ಚಿ ದೇವಿ ಗೋನಾಲ ಗ್ರಾಮಕ್ಕೆ ಬಂದು ನೆಲೆಸಿದರು ಎನ್ನುವ ಪ್ರತೀತಿ ಇದೆ.</p>.<p>ನಾಗಪ್ಪ ತಾತನವರ ಮಗ ಮರಿಯಪ್ಪ, ಕನಕಪ್ಪ ತಾತನವರ ಕಾಲದಲ್ಲಿ ದೇಗುಲ ಅಷ್ಟಾಗಿ ಪ್ರಸಿದ್ಧಿ ಪಡೆಯಲಿಲ್ಲ. ಗುರು ಮರಿಲಿಂಗಪ್ಪ ಸ್ವಾಮಿ ಎಂಬುವವರಿಂದ ಈ ದೇಗುಲದ ಮಹಿಮೆ ರಾಜ್ಯದ ಗಡಿ ದಾಟಿತು. ಆಗಿನಿಂದಲೂ ಇಲ್ಲಿ ಜಾತ್ರೆ ನಡೆಯುತ್ತಿದೆ. ಪ್ರಸ್ತುತ ಮಹಾದೇವಪ್ಪ ಪೂಜಾರಿ, ಮರಿಯಪ್ಪ ಪೂಜಾರಿ ಅವರ ನೇತೃತ್ವದಲ್ಲಿ ಜಾತ್ರೆ ನಡೆಯುತ್ತದೆ.</p>.<p class="Subhead"><strong>ದೇವಿಯ ಜಾತ್ರೆ</strong></p>.<p class="Subhead">ಪ್ರತಿವರ್ಷ ಅವರಾತ್ರಿ ಅಮಾವಾಸ್ಯೆ ನಂತರದ ಮಂಗಳವಾರ ದೇವಿ ಜಾತ್ರೆ ನಡೆಯುತ್ತದೆ. ಜಾತ್ರೆಗೆ ಸುತ್ತಮುತ್ತಲಿನ ಗ್ರಾಮದವರು, ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳೂ ಸೇರಿದಂತೆ ಲಂಡನ್, ದುಬೈ, ಕಾಂಗೊನಿಂದಲೂ ಭಕ್ತರು ಬರುತ್ತಾರೆ.</p>.<p class="Subhead"><strong>ಪತ್ರಗಳ ಮೂಲಕ ಬೇಡಿಕೆ</strong></p>.<p class="Subhead">ದೇವಿ ದರ್ಶನಕ್ಕೆ ಬರುವ ರಾಜ್ಯದ ವಿವಿಧ ರಾಜಕಾರಣಿಗಳು ತಮ್ಮ ಬೇಡಿಕೆಗಳನ್ನು ಪತ್ರದಲ್ಲಿ ಬರೆದು ದೇವಿ ಮುಂದೆ ಇಡುತ್ತಾರೆ. ಡಿ.ಕೆ ಶಿವಕುಮಾರ್ ಹಾಗೂ ಬಿ.ಶ್ರೀರಾಮುಲು ಅವರು ಬೇಡಿಕೆ ಬರೆದು ದೇವಿ ಮುಂದೆ ಇಟ್ಟು ಪೂಜೆ ಸಲ್ಲಿಸಿದ್ದರು.</p>.<p class="Subhead"><strong>ಅಭಿವೃದ್ಧಿಯ ನಿರೀಕ್ಷೆಯಲ್ಲಿ</strong></p>.<p class="Subhead">ಗೋನಾಲ ದುರ್ಗಾದೇವಿ ದೇವಸ್ಥಾನದಲ್ಲಿ ಸೌಕರ್ಯ ಕೊರತೆ ಇದೆ. ಬೇರೆ ಕಡೆಯಿಂದ ಬರುವ ಭಕ್ತರಿಗೆ ಉಳಿದುಕೊಳ್ಳಲು ಯಾತ್ರಿ ನಿವಾಸ, ಸಮುದಾಯ ಭವನ ನಿರ್ಮಾಣದ ಅಗತ್ಯ ಇದೆ. ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಕಲ್ಪಿಸಬೇಕು ಎಂದು ಭಕ್ತರು ಒತ್ತಾಯಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>