<p>ಉತ್ತರ ಕರ್ನಾಟಕ ಭಾಗದ ಮನೆ-ಮನಗಳಲ್ಲಿ ಭಕ್ತಿಯ ದೀಪವನ್ನು ಬೆಳಗುವಂತೆ ಮಾಡಿದ ಸಂತ-ಶರಣ ಪರಂಪರೆಯ ದೇವಾಲಯವೇ ಧಾರವಾಡ ಜಿಲ್ಲೆಯ ನರಗುಂದದ ಬಯಲು ಬಸವೇಶ್ವರ ತಪೋವನ ಹಾಗೂ ದೇವಸ್ಥಾನ. ಕಲ್ಯಾಣ ಚಾಲುಕ್ಯರ ಕಾಲದ ವಾಸ್ತು ಶಿಲ್ಪದ ಸೌಂದರ್ಯದ ಗಣಿಯನ್ನೇ ಈ ತಪೋವನ ಹೊದ್ದು ನಿಂತಿದೆ.<br /> <br /> ಹುಬ್ಬಳ್ಳಿಯಿಂದ 55 ಕಿ.ಮೀ. ಅಂತರದಲ್ಲಿ, ನರಗುಂದ ಬಸ್ ನಿಲ್ದಾಣದ ಹತ್ತಿರ ವಿಶಾಲವಾದ ಬಯಲಿನಲ್ಲಿದೆ ಈ ತಪೋವನ. ಗರ್ಭಗೃಹ, ಅಂತರಾಳ ಹಾಗೂ ಮುಖಮಂಟಪ ಹೊಂದಿರುವ ಈ ದೇವಾಲಯದ ಕೋಷ್ಠಗಳಲ್ಲಿ ಭಕ್ತರ ಸಕಲ ಕಾಮನೆಗಳನ್ನು ಪೂರೈಸುವ ಕಲ್ಪವೃಕ್ಷ ಮಾರುತಿಯ ವಿಗ್ರಹವಿದೆ.</p>.<p>ಜೀವಕಳೆಯಿಂದ ಕೂಡಿದ ನಾಗರಶಿಲ್ಪಗಳು ಇವೆ. ಬಡಬಗ್ಗರಿಗಾಗಿ ನಿರ್ಮಿಸಿದ ವಿಶ್ರಾಂತಿ ತಂಗುದಾಣ, ತೇರಿನ ಮನೆ ಇವುಗಳಿಂದ ಇದು ದೈವೀ ವಾತಾವರಣವನ್ನು ಉಂಟುಮಾಡಿದೆಯಲ್ಲದೆ ನಿಬ್ಬೆರಗಾಗುವಂತೆ ಮಾಡಿದೆ.<br /> <br /> ಹಿಂದೊಮ್ಮೆ ಭೀಕರ ಬರಗಾಲ, ಕಾಲರಾ ಬೇನೆ, ಮಾರಕ ರೋಗಗಳು ಆವರಿಸಿದಾಗ, ನೈಸರ್ಗಿಕ ವಿಪತ್ತುಗಳು ತಲೆದೋರಿದಾಗ ಇಲ್ಲಿಯ ಜನರು ಬಯಲು ಬಸವೇಶ್ವರನಿಗೆ ಮೊರೆ ಹೋಗಿದ್ದಾರೆ. ಆತನನ್ನು ಪೂಜಿಸುವ, ಭಜಿಸುವ, ಆರಾಧಿಸುವ ಮೂಲಕ ತಮ್ಮ ಸಂಕಷ್ಟಗಳನ್ನು ಪರಿಹರಿಸಿಕೊಂಡಿದ್ದಾರೆ.</p>.<p>ಬಯಲು ಬಸವೇಶ್ವರನಲ್ಲಿ ಅನನ್ಯ ಭಕ್ತಿ, ನಿಷ್ಠೆ ಹೊಂದಿದ್ದ ಅವರು ಅವನಲ್ಲಿ ಮಂತ್ರಶಕ್ತಿ ಇರುವುದನ್ನು ಕಂಡಿದ್ದಾರೆ. ತಮ್ಮ ಬದುಕನ್ನು ಬಯಲು ಬಸವೇಶ್ವರನ ಕೃಪೆಯಿಂದ ಕೊನರಿಸಿಕೊಂಡ ಅವರು ತಮ್ಮ ಮನದ, ಮನೆಯ, ಕುಲದ ದೇವರನ್ನಾಗಿಯೂ ಆರಾಧಿಸುತ್ತ ಬಂದಿದ್ದಾರೆ.<br /> <br /> ಧಾರವಾಡ ಜಿಲ್ಲೆಯ ನರಗುಂದದ ಬಯಲು ಬಸವೇಶ್ವರ ತಪೋಭೂಮಿಯು ಬಯಲು ಮತ್ತು ಬಸವೇಶ್ವರ ಹೆಸರಿನಿಂದ ಗುರುತಿಸಿಕೊಂಡಿರುವ ದೇವಾಲಯವು ನರಗುಂದದ ಭಕ್ತರ ಬದುಕಿನೊಂದಿಗೆ ಅವಿನಾಭಾವ ಸಂಬಂಧ ಬೆಳೆಸಿದೆ. ಒಂದು ಕಾಲದಲ್ಲಿ ನಿರಾಶ್ರಿತರಾಗಿ ಈ ಸ್ಥಳಕ್ಕೆ ಬಂದವರು, ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಕಲ್ಯಾಣವನ್ನು ತೊರೆದು ಬಂದಿದ್ದವರಿಗೆ ಆಶ್ರಯ ನೀಡಿತ್ತು ಈ ತಪೋವನ.<br /> <br /> <strong>ಶಂಕರಲಿಂಗ ದೇಗುಲ</strong><br /> ಕಲ್ಯಾಣ ಚಾಲುಕ್ಯರ ಕಾಲದ ವಾಸ್ತುವಿಗೆ ಹೆಸರಾದ ಇನ್ನೊಂದು ದೇಗುಲ ನರಗುಂದದ ಶಂಕರಲಿಂಗ ದೇವಾಲಯ. ಕ್ರಿ.ಶ. 10-11ನೆಯ ಶತಮಾನದಲ್ಲಿ ಕಟ್ಟಿರುವ ದೇವಾಲಯ ಇದು. ಇಲ್ಲಿಯ ಗರ್ಭಗೃಹವು ಚೌಕಾಕಾರವಾಗಿದ್ದು ದ್ವಾರಶಾಖೆಯು ಅಲಂಕರಣೆಗಳಿಲ್ಲದೆ ಸರಳವಾಗಿದೆ.</p>.<p>ಅಂತರಾಳದಲ್ಲಿ ಪಾರ್ವತಿ, ದತ್ತಾತ್ರೇಯ, ಹನುಮಂತನ ಮೂರ್ತಿಗಳಿವೆ. ನವರಂಗದಲ್ಲಿ ನಾಲ್ಕು ಆಕರ್ಷಕ ಕಂಬಗಳಿದ್ದು ಇವುಗಳು ಚೌಕ ವೃತ್ತಾಕಾರವಾಗಿದೆ. ಚಾಲುಕ್ಯ ಕಾಲದ ಶಿಲ್ಪ ಕಲೆಯ ಪ್ರತಿಭೆಯನ್ನು ಅನಾವರಣಗೊಳಿಸುವ ಇವು ನೋಡುವುದೇ ಹಬ್ಬ.<br /> <br /> ಹುಬ್ಬಳ್ಳಿಯಿಂದ 55 ಕಿ.ಮೀ. ಗದಗ ಜಿಲ್ಲಾ ಸ್ಥಳದಿಂದ 68 ಕಿ.ಮೀ. ಅಂತರದಲ್ಲಿದೆ ಈ ದೇವಾಲಯ. ನರಗುಂದ ಬಸ್ ನಿಲ್ದಾಣದಿಂದ ಕೇವಲ ಒಂದು ಕಿ.ಮೀ. ಅಂತರದಲ್ಲಿದೆ ಇದು. ದೇವಾಲಯದ ರಂಗಮಂಟಪದಲ್ಲಿ ಎರಡು ಶಾಸನಗಳಿವೆ.<br /> <br /> ಇವು ಕ್ರಿ.ಶ. 1139ರ ಶಾಸನಗಳಾಗಿದ್ದು ಕಲ್ಯಾಣ ಚಾಲುಕ್ಯರ ಅರಸ ನಾಲ್ಕನೇ ಸೋಮೇಶ್ವರನ ಕಾಲಕ್ಕೆ ಸೇರಿದೆ. ಇಲ್ಲಿರುವ ಕಲಾಕೃತಿಗಳು ದಂಡನಾಯಕ ರುದ್ರದೇವರಸನಿಂದ ನರಗುಂದ ಅಗ್ರಹಾರದ ಧವಳಶಂಕರ ದೇವಾಲಯಕ್ಕೆ ದಾನ ನೀಡಿರುವುದನ್ನು ಉಲ್ಲೇಖಿಸುತ್ತಿದೆ.<br /> <br /> ಬೆಣ್ಣೆದಡಿ ಪ್ರದೇಶದ ಬಿಳಿಯ ಆಕಳೊಂದು ದಿನನಿತ್ಯವೂ ಬಂದು ಧವಳಶಂಕರ ದೇವರಿಗೆ ಹಾಲು ಕರೆದು ಹೋಗುತ್ತಿತ್ತು. ಘಟಸರ್ಪವೊಂದು ಧವಳಶಂಕರಲಿಂಗ ದೇವರಿಗೆ ಹೆಡೆಯೆತ್ತಿ ನೆರಳು ನೀಡುತ್ತಿತ್ತು ಎನ್ನುವುದು ಇಲ್ಲಿಯ ಜನರ ನಂಬಿಕೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಉತ್ತರ ಕರ್ನಾಟಕ ಭಾಗದ ಮನೆ-ಮನಗಳಲ್ಲಿ ಭಕ್ತಿಯ ದೀಪವನ್ನು ಬೆಳಗುವಂತೆ ಮಾಡಿದ ಸಂತ-ಶರಣ ಪರಂಪರೆಯ ದೇವಾಲಯವೇ ಧಾರವಾಡ ಜಿಲ್ಲೆಯ ನರಗುಂದದ ಬಯಲು ಬಸವೇಶ್ವರ ತಪೋವನ ಹಾಗೂ ದೇವಸ್ಥಾನ. ಕಲ್ಯಾಣ ಚಾಲುಕ್ಯರ ಕಾಲದ ವಾಸ್ತು ಶಿಲ್ಪದ ಸೌಂದರ್ಯದ ಗಣಿಯನ್ನೇ ಈ ತಪೋವನ ಹೊದ್ದು ನಿಂತಿದೆ.<br /> <br /> ಹುಬ್ಬಳ್ಳಿಯಿಂದ 55 ಕಿ.ಮೀ. ಅಂತರದಲ್ಲಿ, ನರಗುಂದ ಬಸ್ ನಿಲ್ದಾಣದ ಹತ್ತಿರ ವಿಶಾಲವಾದ ಬಯಲಿನಲ್ಲಿದೆ ಈ ತಪೋವನ. ಗರ್ಭಗೃಹ, ಅಂತರಾಳ ಹಾಗೂ ಮುಖಮಂಟಪ ಹೊಂದಿರುವ ಈ ದೇವಾಲಯದ ಕೋಷ್ಠಗಳಲ್ಲಿ ಭಕ್ತರ ಸಕಲ ಕಾಮನೆಗಳನ್ನು ಪೂರೈಸುವ ಕಲ್ಪವೃಕ್ಷ ಮಾರುತಿಯ ವಿಗ್ರಹವಿದೆ.</p>.<p>ಜೀವಕಳೆಯಿಂದ ಕೂಡಿದ ನಾಗರಶಿಲ್ಪಗಳು ಇವೆ. ಬಡಬಗ್ಗರಿಗಾಗಿ ನಿರ್ಮಿಸಿದ ವಿಶ್ರಾಂತಿ ತಂಗುದಾಣ, ತೇರಿನ ಮನೆ ಇವುಗಳಿಂದ ಇದು ದೈವೀ ವಾತಾವರಣವನ್ನು ಉಂಟುಮಾಡಿದೆಯಲ್ಲದೆ ನಿಬ್ಬೆರಗಾಗುವಂತೆ ಮಾಡಿದೆ.<br /> <br /> ಹಿಂದೊಮ್ಮೆ ಭೀಕರ ಬರಗಾಲ, ಕಾಲರಾ ಬೇನೆ, ಮಾರಕ ರೋಗಗಳು ಆವರಿಸಿದಾಗ, ನೈಸರ್ಗಿಕ ವಿಪತ್ತುಗಳು ತಲೆದೋರಿದಾಗ ಇಲ್ಲಿಯ ಜನರು ಬಯಲು ಬಸವೇಶ್ವರನಿಗೆ ಮೊರೆ ಹೋಗಿದ್ದಾರೆ. ಆತನನ್ನು ಪೂಜಿಸುವ, ಭಜಿಸುವ, ಆರಾಧಿಸುವ ಮೂಲಕ ತಮ್ಮ ಸಂಕಷ್ಟಗಳನ್ನು ಪರಿಹರಿಸಿಕೊಂಡಿದ್ದಾರೆ.</p>.<p>ಬಯಲು ಬಸವೇಶ್ವರನಲ್ಲಿ ಅನನ್ಯ ಭಕ್ತಿ, ನಿಷ್ಠೆ ಹೊಂದಿದ್ದ ಅವರು ಅವನಲ್ಲಿ ಮಂತ್ರಶಕ್ತಿ ಇರುವುದನ್ನು ಕಂಡಿದ್ದಾರೆ. ತಮ್ಮ ಬದುಕನ್ನು ಬಯಲು ಬಸವೇಶ್ವರನ ಕೃಪೆಯಿಂದ ಕೊನರಿಸಿಕೊಂಡ ಅವರು ತಮ್ಮ ಮನದ, ಮನೆಯ, ಕುಲದ ದೇವರನ್ನಾಗಿಯೂ ಆರಾಧಿಸುತ್ತ ಬಂದಿದ್ದಾರೆ.<br /> <br /> ಧಾರವಾಡ ಜಿಲ್ಲೆಯ ನರಗುಂದದ ಬಯಲು ಬಸವೇಶ್ವರ ತಪೋಭೂಮಿಯು ಬಯಲು ಮತ್ತು ಬಸವೇಶ್ವರ ಹೆಸರಿನಿಂದ ಗುರುತಿಸಿಕೊಂಡಿರುವ ದೇವಾಲಯವು ನರಗುಂದದ ಭಕ್ತರ ಬದುಕಿನೊಂದಿಗೆ ಅವಿನಾಭಾವ ಸಂಬಂಧ ಬೆಳೆಸಿದೆ. ಒಂದು ಕಾಲದಲ್ಲಿ ನಿರಾಶ್ರಿತರಾಗಿ ಈ ಸ್ಥಳಕ್ಕೆ ಬಂದವರು, ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಕಲ್ಯಾಣವನ್ನು ತೊರೆದು ಬಂದಿದ್ದವರಿಗೆ ಆಶ್ರಯ ನೀಡಿತ್ತು ಈ ತಪೋವನ.<br /> <br /> <strong>ಶಂಕರಲಿಂಗ ದೇಗುಲ</strong><br /> ಕಲ್ಯಾಣ ಚಾಲುಕ್ಯರ ಕಾಲದ ವಾಸ್ತುವಿಗೆ ಹೆಸರಾದ ಇನ್ನೊಂದು ದೇಗುಲ ನರಗುಂದದ ಶಂಕರಲಿಂಗ ದೇವಾಲಯ. ಕ್ರಿ.ಶ. 10-11ನೆಯ ಶತಮಾನದಲ್ಲಿ ಕಟ್ಟಿರುವ ದೇವಾಲಯ ಇದು. ಇಲ್ಲಿಯ ಗರ್ಭಗೃಹವು ಚೌಕಾಕಾರವಾಗಿದ್ದು ದ್ವಾರಶಾಖೆಯು ಅಲಂಕರಣೆಗಳಿಲ್ಲದೆ ಸರಳವಾಗಿದೆ.</p>.<p>ಅಂತರಾಳದಲ್ಲಿ ಪಾರ್ವತಿ, ದತ್ತಾತ್ರೇಯ, ಹನುಮಂತನ ಮೂರ್ತಿಗಳಿವೆ. ನವರಂಗದಲ್ಲಿ ನಾಲ್ಕು ಆಕರ್ಷಕ ಕಂಬಗಳಿದ್ದು ಇವುಗಳು ಚೌಕ ವೃತ್ತಾಕಾರವಾಗಿದೆ. ಚಾಲುಕ್ಯ ಕಾಲದ ಶಿಲ್ಪ ಕಲೆಯ ಪ್ರತಿಭೆಯನ್ನು ಅನಾವರಣಗೊಳಿಸುವ ಇವು ನೋಡುವುದೇ ಹಬ್ಬ.<br /> <br /> ಹುಬ್ಬಳ್ಳಿಯಿಂದ 55 ಕಿ.ಮೀ. ಗದಗ ಜಿಲ್ಲಾ ಸ್ಥಳದಿಂದ 68 ಕಿ.ಮೀ. ಅಂತರದಲ್ಲಿದೆ ಈ ದೇವಾಲಯ. ನರಗುಂದ ಬಸ್ ನಿಲ್ದಾಣದಿಂದ ಕೇವಲ ಒಂದು ಕಿ.ಮೀ. ಅಂತರದಲ್ಲಿದೆ ಇದು. ದೇವಾಲಯದ ರಂಗಮಂಟಪದಲ್ಲಿ ಎರಡು ಶಾಸನಗಳಿವೆ.<br /> <br /> ಇವು ಕ್ರಿ.ಶ. 1139ರ ಶಾಸನಗಳಾಗಿದ್ದು ಕಲ್ಯಾಣ ಚಾಲುಕ್ಯರ ಅರಸ ನಾಲ್ಕನೇ ಸೋಮೇಶ್ವರನ ಕಾಲಕ್ಕೆ ಸೇರಿದೆ. ಇಲ್ಲಿರುವ ಕಲಾಕೃತಿಗಳು ದಂಡನಾಯಕ ರುದ್ರದೇವರಸನಿಂದ ನರಗುಂದ ಅಗ್ರಹಾರದ ಧವಳಶಂಕರ ದೇವಾಲಯಕ್ಕೆ ದಾನ ನೀಡಿರುವುದನ್ನು ಉಲ್ಲೇಖಿಸುತ್ತಿದೆ.<br /> <br /> ಬೆಣ್ಣೆದಡಿ ಪ್ರದೇಶದ ಬಿಳಿಯ ಆಕಳೊಂದು ದಿನನಿತ್ಯವೂ ಬಂದು ಧವಳಶಂಕರ ದೇವರಿಗೆ ಹಾಲು ಕರೆದು ಹೋಗುತ್ತಿತ್ತು. ಘಟಸರ್ಪವೊಂದು ಧವಳಶಂಕರಲಿಂಗ ದೇವರಿಗೆ ಹೆಡೆಯೆತ್ತಿ ನೆರಳು ನೀಡುತ್ತಿತ್ತು ಎನ್ನುವುದು ಇಲ್ಲಿಯ ಜನರ ನಂಬಿಕೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>