<p><strong>ತಿರುವನಂತಪುರ:</strong> ಮೊಹ್ಸಿನ್ ಖಾನ್ (23.3–14–29–6) ಅವರ ಸ್ಪಿನ್ ಮೋಡಿಗೆ ಸಿಲುಕಿದ ಕೇರಳ ತಂಡವು ಹೋರಾಟ ತೋರದೇ ಶರಣಾಯಿತು. ಕರ್ನಾಟಕ ತಂಡ ರಣಜಿ ಟ್ರೋಫಿ ಬಿ ಗುಂಪಿನ ಈ ಪಂದ್ಯವನ್ನು ಮಂಗಳವಾರ ಇನಿಂಗ್ಸ್ ಮತ್ತು 164 ರನ್ಗಳಿಂದ ಗೆದ್ದುಕೊಂಡಿತು. ಇದು ಈ ಋತುವಿನಲ್ಲಿ ಕರ್ನಾಟಕಕ್ಕೆ ಮೊದಲ ಜಯವಾಯಿತು.</p><p>ಮಂಗಲಪುರಂನ ಕೆಸಿಎ ಮೈದಾನದಲ್ಲಿ ಮೂರನೇ ದಿನದ ಕೊನೆಯ ಅವಧಿಯಲ್ಲಿ ಸ್ವಲ್ಪ ಪ್ರತಿರೋಧ ತೋರಿದ್ದ ಕೇರಳ ತಂಡ, ಫಾಲೊಆನ್ಗೆ ಒಳಗಾದ ನಂತರ ಅಷ್ಟೇನೂ ಪ್ರತಿಹೋರಾಟ ತೋರಲಿಲ್ಲ. ಕರ್ನಾಟಕ ಹಿಡಿತ ಸಾಧಿಸಿ ಪೂರ್ಣ ಏಳು ಪಾಯಿಂಟ್ಸ್ ಪಡೆಯಿತು.</p><p>ಕರ್ನಾಟಕ ಈಗ ಗುಂಪಿನಲ್ಲಿ 11 ಪಾಯಿಂಟ್ಗಳೊಡನೆ ಎರಡನೇ ಸ್ಥಾನದಲ್ಲಿದೆ. ಇಷ್ಟೇ ಪಾಯಿಂಟ್ಸ್ ಪಡೆದಿರುವ ಗೋವಾ ರನ್ ಕೋಷ್ಟಕದ ಆಧಾರದಲ್ಲಿ ಮುಂದಿದೆ.</p><p>ಮೊದಲ ಇನಿಂಗ್ಸ್ನಲ್ಲಿ 348 ರನ್ಗಳ ಭಾರಿ ಅಂತರದಿಂದ ಹಿಂದೆ ಉಳಿದಿದ್ದ ಕೇರಳದ ಮುಂದೆ ಡ್ರಾಕ್ಕೆ ಪ್ರಯತ್ನಿಸುವ ಮಾರ್ಗವೊಂದೇ ಉಳಿದಿತ್ತು. ವಿಕೆಟ್ ನಷ್ಟವಿಲ್ಲದೇ 10 ರನ್ಗಳಿಂದ ಅಂತಿಮ ದಿನದಾಟ ಮುಂದುವರಿಸಿದ ಆತಿಥೇಯ ತಂಡಕ್ಕೆ ದಿನದ ಎರಡನೇ ಓವರಿನಲ್ಲಿ ವಿದ್ವತ್ ಕಾವೇರಪ್ಪ ಪೆಟ್ಟು ನೀಡಿದರು. ಆ ಓವರಿನ ಎರಡನೇ ಎಸೆತದಲ್ಲಿ ಎಂ.ಡಿ.ನಿಧೀಶ್ ಅವರ ವಿಕೆಟ್ ಪಡೆದ ಕರ್ನಾಟಕ ವೇಗಿ ಮರು ಎಸೆತದಲ್ಲೇ ಅಕ್ಷಯ್ ಚಂದ್ರನ್ ವಿಕೆಟ್ ಸಹ ಪಡೆದರು.</p><p>ಕೇರಳ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ಸ್ಪಿನ್ನರ್ ಶಿಖರ್ ಶೆಟ್ಟಿ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ಗೆ ಕ್ಯಾಚಿತ್ತರು.</p><p>ಆರಂಭ ಆಟಗಾರ ಕೃಷ್ಣ ಪ್ರಸಾದ್ (33, 87ಎ) ಜೊತೆಗೂಡಿದ ಅಹಮದ್ ಇಮ್ರಾನ್ (23, 76ಎ) ಐದನೇ ವಿಕೆಟ್ಗೆ 57 ರನ್ ಸೇರಿಸಿ ಕೆಲಕಾಲ ಕುಸಿತ ತಡೆದರು. ಈ ಹಂತದಲ್ಲಿ ಆಫ್ ಸ್ಪಿನ್ನರ್ ಮೊಹ್ಸಿನ್ ಅವರು ಕೇರಳದ ಕುಸಿತಕ್ಕೆ ನಾಂದಿಹಾಡಿದರು. ಕರಾರುವಾಕ್ ದಾಳಿಯಲ್ಲಿ ಏಳು ವಿಕೆಟ್ಗಳಲ್ಲಿ ಆರನ್ನು ಕಬಳಿಸಿದರು.</p><p>ಇನಿಂಗ್ಸ್ನ 32ನೇ ಓವರಿನಲ್ಲಿ ಕೃಷ್ಣ ಪ್ರಸಾದ್ ವಿಕೆಟ್ ಪಡೆದ ಈ ಯುವ ಬೌಲರ್ ಎರಡು ಓವರುಗಳ ನಂತರ ಇಮ್ರಾನ್ ಅವರನ್ನು ತಮ್ಮದೇ ಬೌಲಿಂಗ್ನಲ್ಲಿ ಕ್ಯಾಚ್ ಹಿಡಿದು ಔಟ್ ಮಾಡಿದರು.</p><p>ಸಚಿನ್ ಬೇಬಿ ಮತ್ತು ಬಾಬಾ ಅಪರಾಜಿತ್ ಕೆಲಕಾಲ ಪ್ರತಿರೋಧ ತೋರಿದರಷ್ಟೇ. ಆದರೆ ಇವರಿಬ್ಬರ ವಿಕೆಟ್ಗಳೂ ಮೊಹ್ಸಿನ್ ಪಾಲಾದವು. ಇನ್ನೊಂದು ಕಡೆ ಅನುಭವಿ ಶ್ರೇಯಸ್ ಗೋಪಾಲ್ ಸಹ ವಿಕೆಟ್ ಸುಗ್ಗಿಯಲ್ಲಿ ಸೇರಿಕೊಂಡರು.</p><p>ಆದರೆ ಕೊನೆಯ ವಿಕೆಟ್ ಪಡೆಯಲು ಕರ್ನಾಟಕ 23 ಓವರುಗಳ ಕಾಲ ಶ್ರಮಹಾಕಬೇಕಾಯಿತು. ಹರಿಕೃಷ್ಣನ್ ಎಂ.ಯು. (6, 94ಎ, 4x1) ಜೊತೆಗೂಡಿದ ಏಡನ್ ಆಪ್ಪಿಲ್ ಟೋಂ (ಅಜೇಯ 39, 68ಎ, 4x7) ಅವರು ತಂಡ ಆಲೌಟ್ ಆಗುವ ಮುನ್ನ 44 ರನ್ ಸೇರಿಸಿದರು. ಈ ಜೊತೆಯಾಟ ಸಹ ಮುರಿದ ಮೊಹ್ಸಿನ್, ತಮ್ಮ ನಾಲ್ಕನೇ ಪ್ರಥಮ ದರ್ಜೆ ಪಂದ್ಯದಲ್ಲೇ ಜೀವನ ಶ್ರೇಷ್ಠ ಸಾಧನೆ ದಾಖಲಿಸಿದರು.</p>.ರಣಜಿ ಟ್ರೋಫಿ: ವಿದ್ವತ್, ವೈಶಾಖ ದಾಳಿಗೆ ಕುಸಿದ ಕೇರಳ.ICC Rankings: ಸ್ಮೃತಿಗೆ ಅಗ್ರಸ್ಥಾನ ನಷ್ಟ; ಅಗ್ರ 10ರ ಪಟ್ಟಿಗೆ ಜೆಮಿಮಾ ಲಗ್ಗೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ:</strong> ಮೊಹ್ಸಿನ್ ಖಾನ್ (23.3–14–29–6) ಅವರ ಸ್ಪಿನ್ ಮೋಡಿಗೆ ಸಿಲುಕಿದ ಕೇರಳ ತಂಡವು ಹೋರಾಟ ತೋರದೇ ಶರಣಾಯಿತು. ಕರ್ನಾಟಕ ತಂಡ ರಣಜಿ ಟ್ರೋಫಿ ಬಿ ಗುಂಪಿನ ಈ ಪಂದ್ಯವನ್ನು ಮಂಗಳವಾರ ಇನಿಂಗ್ಸ್ ಮತ್ತು 164 ರನ್ಗಳಿಂದ ಗೆದ್ದುಕೊಂಡಿತು. ಇದು ಈ ಋತುವಿನಲ್ಲಿ ಕರ್ನಾಟಕಕ್ಕೆ ಮೊದಲ ಜಯವಾಯಿತು.</p><p>ಮಂಗಲಪುರಂನ ಕೆಸಿಎ ಮೈದಾನದಲ್ಲಿ ಮೂರನೇ ದಿನದ ಕೊನೆಯ ಅವಧಿಯಲ್ಲಿ ಸ್ವಲ್ಪ ಪ್ರತಿರೋಧ ತೋರಿದ್ದ ಕೇರಳ ತಂಡ, ಫಾಲೊಆನ್ಗೆ ಒಳಗಾದ ನಂತರ ಅಷ್ಟೇನೂ ಪ್ರತಿಹೋರಾಟ ತೋರಲಿಲ್ಲ. ಕರ್ನಾಟಕ ಹಿಡಿತ ಸಾಧಿಸಿ ಪೂರ್ಣ ಏಳು ಪಾಯಿಂಟ್ಸ್ ಪಡೆಯಿತು.</p><p>ಕರ್ನಾಟಕ ಈಗ ಗುಂಪಿನಲ್ಲಿ 11 ಪಾಯಿಂಟ್ಗಳೊಡನೆ ಎರಡನೇ ಸ್ಥಾನದಲ್ಲಿದೆ. ಇಷ್ಟೇ ಪಾಯಿಂಟ್ಸ್ ಪಡೆದಿರುವ ಗೋವಾ ರನ್ ಕೋಷ್ಟಕದ ಆಧಾರದಲ್ಲಿ ಮುಂದಿದೆ.</p><p>ಮೊದಲ ಇನಿಂಗ್ಸ್ನಲ್ಲಿ 348 ರನ್ಗಳ ಭಾರಿ ಅಂತರದಿಂದ ಹಿಂದೆ ಉಳಿದಿದ್ದ ಕೇರಳದ ಮುಂದೆ ಡ್ರಾಕ್ಕೆ ಪ್ರಯತ್ನಿಸುವ ಮಾರ್ಗವೊಂದೇ ಉಳಿದಿತ್ತು. ವಿಕೆಟ್ ನಷ್ಟವಿಲ್ಲದೇ 10 ರನ್ಗಳಿಂದ ಅಂತಿಮ ದಿನದಾಟ ಮುಂದುವರಿಸಿದ ಆತಿಥೇಯ ತಂಡಕ್ಕೆ ದಿನದ ಎರಡನೇ ಓವರಿನಲ್ಲಿ ವಿದ್ವತ್ ಕಾವೇರಪ್ಪ ಪೆಟ್ಟು ನೀಡಿದರು. ಆ ಓವರಿನ ಎರಡನೇ ಎಸೆತದಲ್ಲಿ ಎಂ.ಡಿ.ನಿಧೀಶ್ ಅವರ ವಿಕೆಟ್ ಪಡೆದ ಕರ್ನಾಟಕ ವೇಗಿ ಮರು ಎಸೆತದಲ್ಲೇ ಅಕ್ಷಯ್ ಚಂದ್ರನ್ ವಿಕೆಟ್ ಸಹ ಪಡೆದರು.</p><p>ಕೇರಳ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ಸ್ಪಿನ್ನರ್ ಶಿಖರ್ ಶೆಟ್ಟಿ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ಗೆ ಕ್ಯಾಚಿತ್ತರು.</p><p>ಆರಂಭ ಆಟಗಾರ ಕೃಷ್ಣ ಪ್ರಸಾದ್ (33, 87ಎ) ಜೊತೆಗೂಡಿದ ಅಹಮದ್ ಇಮ್ರಾನ್ (23, 76ಎ) ಐದನೇ ವಿಕೆಟ್ಗೆ 57 ರನ್ ಸೇರಿಸಿ ಕೆಲಕಾಲ ಕುಸಿತ ತಡೆದರು. ಈ ಹಂತದಲ್ಲಿ ಆಫ್ ಸ್ಪಿನ್ನರ್ ಮೊಹ್ಸಿನ್ ಅವರು ಕೇರಳದ ಕುಸಿತಕ್ಕೆ ನಾಂದಿಹಾಡಿದರು. ಕರಾರುವಾಕ್ ದಾಳಿಯಲ್ಲಿ ಏಳು ವಿಕೆಟ್ಗಳಲ್ಲಿ ಆರನ್ನು ಕಬಳಿಸಿದರು.</p><p>ಇನಿಂಗ್ಸ್ನ 32ನೇ ಓವರಿನಲ್ಲಿ ಕೃಷ್ಣ ಪ್ರಸಾದ್ ವಿಕೆಟ್ ಪಡೆದ ಈ ಯುವ ಬೌಲರ್ ಎರಡು ಓವರುಗಳ ನಂತರ ಇಮ್ರಾನ್ ಅವರನ್ನು ತಮ್ಮದೇ ಬೌಲಿಂಗ್ನಲ್ಲಿ ಕ್ಯಾಚ್ ಹಿಡಿದು ಔಟ್ ಮಾಡಿದರು.</p><p>ಸಚಿನ್ ಬೇಬಿ ಮತ್ತು ಬಾಬಾ ಅಪರಾಜಿತ್ ಕೆಲಕಾಲ ಪ್ರತಿರೋಧ ತೋರಿದರಷ್ಟೇ. ಆದರೆ ಇವರಿಬ್ಬರ ವಿಕೆಟ್ಗಳೂ ಮೊಹ್ಸಿನ್ ಪಾಲಾದವು. ಇನ್ನೊಂದು ಕಡೆ ಅನುಭವಿ ಶ್ರೇಯಸ್ ಗೋಪಾಲ್ ಸಹ ವಿಕೆಟ್ ಸುಗ್ಗಿಯಲ್ಲಿ ಸೇರಿಕೊಂಡರು.</p><p>ಆದರೆ ಕೊನೆಯ ವಿಕೆಟ್ ಪಡೆಯಲು ಕರ್ನಾಟಕ 23 ಓವರುಗಳ ಕಾಲ ಶ್ರಮಹಾಕಬೇಕಾಯಿತು. ಹರಿಕೃಷ್ಣನ್ ಎಂ.ಯು. (6, 94ಎ, 4x1) ಜೊತೆಗೂಡಿದ ಏಡನ್ ಆಪ್ಪಿಲ್ ಟೋಂ (ಅಜೇಯ 39, 68ಎ, 4x7) ಅವರು ತಂಡ ಆಲೌಟ್ ಆಗುವ ಮುನ್ನ 44 ರನ್ ಸೇರಿಸಿದರು. ಈ ಜೊತೆಯಾಟ ಸಹ ಮುರಿದ ಮೊಹ್ಸಿನ್, ತಮ್ಮ ನಾಲ್ಕನೇ ಪ್ರಥಮ ದರ್ಜೆ ಪಂದ್ಯದಲ್ಲೇ ಜೀವನ ಶ್ರೇಷ್ಠ ಸಾಧನೆ ದಾಖಲಿಸಿದರು.</p>.ರಣಜಿ ಟ್ರೋಫಿ: ವಿದ್ವತ್, ವೈಶಾಖ ದಾಳಿಗೆ ಕುಸಿದ ಕೇರಳ.ICC Rankings: ಸ್ಮೃತಿಗೆ ಅಗ್ರಸ್ಥಾನ ನಷ್ಟ; ಅಗ್ರ 10ರ ಪಟ್ಟಿಗೆ ಜೆಮಿಮಾ ಲಗ್ಗೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>