<p>ಸುಮಾರು 250 ವರ್ಷಗಳ ಹಿಂದೆ ಪ್ರತಿಷ್ಠಾಪಿಸಿದ ಗರುಡ ಕಂಬದ ಸುತ್ತ ಈಗ ಸುಂದರ ದೇವಾಲಯ ನಿರ್ಮಾಣವಾಗಿದೆ. ಇದೇನು ಉದ್ಭವವಾದ ಗುಡಿಯಲ್ಲ. ಸ್ಥಳೀಯ ಭಕ್ತಾದಿಗಳು ಸ್ವಂತ ಖರ್ಚಿನಲ್ಲಿ ಕಟ್ಟಿಸಿದ ಸುಂದರ ದೇವಾಲಯ.<br /> <br /> ಬೆಂಗಳೂರಿನ ಚಿಕ್ಕಕಲ್ಲಸಂದ್ರದಲ್ಲಿ ಮಾ.29ರಂದು ಪ್ರಸನ್ನ ಆಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ನೆರವೇರಲಿದೆ. ಅದಕ್ಕಾಗಿ ಗ್ರಾಮಸ್ಥರೇ ಸೇರಿ ಐವತ್ತು ಲಕ್ಷ ರೂ ವೆಚ್ಚದಲ್ಲಿ ಕಟ್ಟಿಸಿರುವ ಸುಂದರ ದೇವಾಲಯ ಉದ್ಘಾಟನೆಗೆ ಸಿದ್ಧವಾಗಿದೆ. <br /> <br /> ದೇವಾಲಯ ನಿರ್ಮಾಣಕ್ಕೆ ಒಂದು ಹಿನ್ನೆಲೆ ಇದೆ. 250 ವರ್ಷಗಳ ಹಿಂದೆ ಜಮೀನ್ದಾರರಾಗಿದ್ದ ಅಪ್ಪಯ್ಯಣ್ಣ, ಹನುಮಂತೇಗೌಡ ಹಾಗೂ ಜೋಗೇ ಗೌಡರು ಆಂಜನೇಯನ ಪ್ರತಿಕೃತಿಯನ್ನು ಒಳಗೊಂಡ ಗರುಡ ಕಂಬವನ್ನು ಪ್ರತಿಷ್ಠಾಪಿಸಿದ್ದರು. ಅಂದಿನಿಂದ ಆ ಗರುಡ ಕಂಬಕ್ಕೆ ನಿತ್ಯ ಪೂಜೆ ಸಲ್ಲಿಸಲಾಗುತ್ತಿತ್ತು. ಆದರೆ ಅಲ್ಲಿ ಯಾವ ದೇವಸ್ಥಾನವೂ ಇರಲಿಲ್ಲ. ಇಂದು ಈ ಸ್ಥಳ ಚಿಕ್ಕಕಲ್ಲಸಂದ್ರ ಬೆಂಗಳೂರು ಎಂಬ ಮಹಾನಗರಿಯಲ್ಲಿ ಬಡಾವಣೆಯಾಗಿ ಹೆಸರಾಗಿದೆ.<br /> <br /> ಇಲ್ಲಿನ ಗ್ರಾಮಸ್ಥರು ಶ್ರೀ ಆಂಜನೇಯ ದೇವರ ದರ್ಶನಕ್ಕಾಗಿ ಸುತ್ತಮುತ್ತಲಿನ ಬಡಾವಣೆಗಳಿಗೆ ಹೋಗಬೇಕಾದ ಅನಿವಾರ್ಯವಾಗಿತ್ತು. ಈ ಸಮಸ್ಯೆಯನ್ನು ತಪ್ಪಿಸುವ ಸಲುವಾಗಿ ಚಿಕ್ಕಕಲ್ಲಸಂದ್ರದ ಗ್ರಾಮಸ್ಥರೆಲ್ಲಾ ಒಟ್ಟಾಗಿ ಗರುಡ ಕಂಬವಿದ್ದ ಪವಿತ್ರ ಜಾಗದಲ್ಲಿ ದೇವಸ್ಥಾನ ನಿರ್ಮಾಣ ಮಾಡುವ ಕೈಂಕರ್ಯಕ್ಕೆ ಮುಂದಾದರು. ಈಗ ದೇವಾಲಯ ಸಿದ್ಧವಾಗಿದೆ.<br /> <br /> ದೇವಸ್ಥಾನದ ಗೋಪುರ ಕೆಲಸವನ್ನು ತಮಿಳುನಾಡಿನ ಕಲಾವಿದರು ಪೂರೈಸಿದ್ದಾರೆ. 29ರಂದು ಪ್ರತಿಷ್ಠಾಪಿಸಲಿರುವ ನಾಲ್ಕುವರೆ ಅಡಿ ಎತ್ತರದ ಶ್ರೀ ಆಂಜನೇಯ ವಿಗ್ರಹವನ್ನು ಕಂಚಿಯಿಂದ ತರಿಸಲಾಗುತ್ತಿದೆ. ಜತೆಗೆ ಆಂಜನೇಯನ ವಿಗ್ರಹದ ಬಲಭಾಗಕ್ಕೆ ಗಣೇಶ ಹಾಗೂ ಎಡಬದಿಗೆ ಸತ್ಯನಾರಾಯಣ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ ಎನ್ನುತ್ತಾರೆ ಚಿಕ್ಕಕಲ್ಲಸಂದ್ರದ ಚಿಕ್ಕರಾಮು.<br /> <br /> ಎರಡು ತಲೆಮಾರುಗಳಿಗಿಂತಲೂ ಹಿಂದೆ ಪ್ರತಿಷ್ಠಾಪಿಸಿದ್ದ ಗರುಡಕಂಬದ ಎದರು ಇಂದು ಸುಂದರ ದೇವಾಲಯ ನಿರ್ಮಾಣವಾಗಿದೆ.<br /> <br /> <strong>29ರಂದು ಪ್ರತಿಷ್ಠಾಪನೆ</strong><br /> ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಹಾಗೂ ನೂತನ ಕಟ್ಟಡ, ವಿಮಾನ ಗೋಪುರ ಉದ್ಘಾಟನೆ, ಕುಂಭಾಭಿಷೇಕ ಮಹೋತ್ಸವ.<br /> <br /> ಮಂಗಳವಾರ (ಮಾ.27) ದಿಂದ ಗುರುವಾರ (ಮಾ.29)ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. <br /> <br /> ಗುರುವಾರ (ಮಾ.29) ಬೆಳಿಗ್ಗೆ 7.30ರಿಂದ ಪ್ರಸನ್ನ ಆಂಜನೇಯ ಸ್ವಾಮಿ ವಿಗ್ರಹ ಪ್ರತಿಷ್ಠಾಪನಾ ಕಾರ್ಯ ಆರಂಭವಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸುಮಾರು 250 ವರ್ಷಗಳ ಹಿಂದೆ ಪ್ರತಿಷ್ಠಾಪಿಸಿದ ಗರುಡ ಕಂಬದ ಸುತ್ತ ಈಗ ಸುಂದರ ದೇವಾಲಯ ನಿರ್ಮಾಣವಾಗಿದೆ. ಇದೇನು ಉದ್ಭವವಾದ ಗುಡಿಯಲ್ಲ. ಸ್ಥಳೀಯ ಭಕ್ತಾದಿಗಳು ಸ್ವಂತ ಖರ್ಚಿನಲ್ಲಿ ಕಟ್ಟಿಸಿದ ಸುಂದರ ದೇವಾಲಯ.<br /> <br /> ಬೆಂಗಳೂರಿನ ಚಿಕ್ಕಕಲ್ಲಸಂದ್ರದಲ್ಲಿ ಮಾ.29ರಂದು ಪ್ರಸನ್ನ ಆಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ನೆರವೇರಲಿದೆ. ಅದಕ್ಕಾಗಿ ಗ್ರಾಮಸ್ಥರೇ ಸೇರಿ ಐವತ್ತು ಲಕ್ಷ ರೂ ವೆಚ್ಚದಲ್ಲಿ ಕಟ್ಟಿಸಿರುವ ಸುಂದರ ದೇವಾಲಯ ಉದ್ಘಾಟನೆಗೆ ಸಿದ್ಧವಾಗಿದೆ. <br /> <br /> ದೇವಾಲಯ ನಿರ್ಮಾಣಕ್ಕೆ ಒಂದು ಹಿನ್ನೆಲೆ ಇದೆ. 250 ವರ್ಷಗಳ ಹಿಂದೆ ಜಮೀನ್ದಾರರಾಗಿದ್ದ ಅಪ್ಪಯ್ಯಣ್ಣ, ಹನುಮಂತೇಗೌಡ ಹಾಗೂ ಜೋಗೇ ಗೌಡರು ಆಂಜನೇಯನ ಪ್ರತಿಕೃತಿಯನ್ನು ಒಳಗೊಂಡ ಗರುಡ ಕಂಬವನ್ನು ಪ್ರತಿಷ್ಠಾಪಿಸಿದ್ದರು. ಅಂದಿನಿಂದ ಆ ಗರುಡ ಕಂಬಕ್ಕೆ ನಿತ್ಯ ಪೂಜೆ ಸಲ್ಲಿಸಲಾಗುತ್ತಿತ್ತು. ಆದರೆ ಅಲ್ಲಿ ಯಾವ ದೇವಸ್ಥಾನವೂ ಇರಲಿಲ್ಲ. ಇಂದು ಈ ಸ್ಥಳ ಚಿಕ್ಕಕಲ್ಲಸಂದ್ರ ಬೆಂಗಳೂರು ಎಂಬ ಮಹಾನಗರಿಯಲ್ಲಿ ಬಡಾವಣೆಯಾಗಿ ಹೆಸರಾಗಿದೆ.<br /> <br /> ಇಲ್ಲಿನ ಗ್ರಾಮಸ್ಥರು ಶ್ರೀ ಆಂಜನೇಯ ದೇವರ ದರ್ಶನಕ್ಕಾಗಿ ಸುತ್ತಮುತ್ತಲಿನ ಬಡಾವಣೆಗಳಿಗೆ ಹೋಗಬೇಕಾದ ಅನಿವಾರ್ಯವಾಗಿತ್ತು. ಈ ಸಮಸ್ಯೆಯನ್ನು ತಪ್ಪಿಸುವ ಸಲುವಾಗಿ ಚಿಕ್ಕಕಲ್ಲಸಂದ್ರದ ಗ್ರಾಮಸ್ಥರೆಲ್ಲಾ ಒಟ್ಟಾಗಿ ಗರುಡ ಕಂಬವಿದ್ದ ಪವಿತ್ರ ಜಾಗದಲ್ಲಿ ದೇವಸ್ಥಾನ ನಿರ್ಮಾಣ ಮಾಡುವ ಕೈಂಕರ್ಯಕ್ಕೆ ಮುಂದಾದರು. ಈಗ ದೇವಾಲಯ ಸಿದ್ಧವಾಗಿದೆ.<br /> <br /> ದೇವಸ್ಥಾನದ ಗೋಪುರ ಕೆಲಸವನ್ನು ತಮಿಳುನಾಡಿನ ಕಲಾವಿದರು ಪೂರೈಸಿದ್ದಾರೆ. 29ರಂದು ಪ್ರತಿಷ್ಠಾಪಿಸಲಿರುವ ನಾಲ್ಕುವರೆ ಅಡಿ ಎತ್ತರದ ಶ್ರೀ ಆಂಜನೇಯ ವಿಗ್ರಹವನ್ನು ಕಂಚಿಯಿಂದ ತರಿಸಲಾಗುತ್ತಿದೆ. ಜತೆಗೆ ಆಂಜನೇಯನ ವಿಗ್ರಹದ ಬಲಭಾಗಕ್ಕೆ ಗಣೇಶ ಹಾಗೂ ಎಡಬದಿಗೆ ಸತ್ಯನಾರಾಯಣ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ ಎನ್ನುತ್ತಾರೆ ಚಿಕ್ಕಕಲ್ಲಸಂದ್ರದ ಚಿಕ್ಕರಾಮು.<br /> <br /> ಎರಡು ತಲೆಮಾರುಗಳಿಗಿಂತಲೂ ಹಿಂದೆ ಪ್ರತಿಷ್ಠಾಪಿಸಿದ್ದ ಗರುಡಕಂಬದ ಎದರು ಇಂದು ಸುಂದರ ದೇವಾಲಯ ನಿರ್ಮಾಣವಾಗಿದೆ.<br /> <br /> <strong>29ರಂದು ಪ್ರತಿಷ್ಠಾಪನೆ</strong><br /> ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಹಾಗೂ ನೂತನ ಕಟ್ಟಡ, ವಿಮಾನ ಗೋಪುರ ಉದ್ಘಾಟನೆ, ಕುಂಭಾಭಿಷೇಕ ಮಹೋತ್ಸವ.<br /> <br /> ಮಂಗಳವಾರ (ಮಾ.27) ದಿಂದ ಗುರುವಾರ (ಮಾ.29)ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. <br /> <br /> ಗುರುವಾರ (ಮಾ.29) ಬೆಳಿಗ್ಗೆ 7.30ರಿಂದ ಪ್ರಸನ್ನ ಆಂಜನೇಯ ಸ್ವಾಮಿ ವಿಗ್ರಹ ಪ್ರತಿಷ್ಠಾಪನಾ ಕಾರ್ಯ ಆರಂಭವಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>