ವಿಶ್ವದ ಏಕೈಕ ಹಸ್ತಿ ದಂತ ಸಿಂಹಾಸನವನ್ನು ಇಂದು ನೋಡುವ ಭಾಗ್ಯ ಭಕ್ತಾದಿಗಳಿಗೆ ಒದಗಿಸಲಿದೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಶ್ರೀರಾಮಚಂದ್ರಾಪುರ ಮಠ.
30ರ ದಶಕದಲ್ಲಿ ನಿರ್ಮಿಸಲಾಗಿದೆ ಈ ಅದ್ಭುತ ಸಿಂಹಾಸನವನ್ನು. ಶ್ರೀಮಠದ ಅಂದಿನ ಪೀಠಾಧಿಪತಿಗಳಾದ ಶ್ರೀರಾಮಚಂದ್ರ ಭಾರತೀಯವರು ಸಾಕಿದ ಆನೆಯ ಮರಣಾನಂತರ ಅದರ ದಂತದಿಂದ ಇದನ್ನು ನಿರ್ಮಿಸಲಾಗಿದೆ. ಭದ್ರತೆಯ ದೃಷ್ಟಿಯಿಂದ ಉಳಿದ ದಿನಗಳಲ್ಲಿ ಇದನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗುತ್ತದೆ.
ಶ್ರೀಮಠದ ಶ್ರೀದೇವರ ಮಹಾರಥೋತ್ಸವ ನಡೆಯುವ ರಾಮನವಮಿಯಂದು ಸಾರ್ವಜನಿಕರ ದರ್ಶನಕ್ಕೆ ಇದು ಮುಕ್ತ. ೧೯೪೨ರಲ್ಲಿ ಸ್ವಾತಂತ್ರ್ಯ ಚಳವಳಿಯನ್ನು ಸಂಘಟಿಸುತ್ತಾ ಈ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದ ಮಹಾತ್ಮ ಗಾಂಧೀಜಿ ಕೂಡ ಈ ಸಿಂಹಾಸನದ ದರ್ಶನ ಪಡೆದಿದ್ದರು. ಅಂದಿನ ಕಾಂಗ್ರೆಸ್ ಸೆನೆಟ್ ಸಭೆಯಲ್ಲಿ ಇದನ್ನು ದರ್ಶನಕ್ಕೆ ಇಡಲಾಗುತ್ತಿದ್ದುದು ವಿಶೇಷ.