<p>ಹುಬ್ಬಳ್ಳಿ-ಸೊಲ್ಲಾಪುರ ಹೆದ್ದಾರಿಯ ಮೇಲೆ ಮಲಗಿದ ಸಿಂಹದಂತೆ ಕಾಣುವ ಗುಡ್ಡದ ಅಡಿಯ ಊರು ನರಗುಂದ. ಅದು ಒಂದು ಕಾಲಕ್ಕೆ ಬ್ರಿಟಿಷರನ್ನೇ ಬೆದರಿಸಿದ ಸ್ಥಳ. ರೈತರ ಬಂಡಾಯ ಹುಟ್ಟಿದ್ದೇ ಇಲ್ಲಿ. <br /> <br /> ಇಷ್ಟೊಂದು ಮಹತ್ವದ ಈ ಊರ ಉತ್ತರಕ್ಕೆ ಗುಡ್ಡದ ಮಧ್ಯದ ಕೆಳಭಾಗದಲ್ಲಿ ನಿಸರ್ಗದ ಮಡಿಲಲ್ಲಿ ಸಿದ್ಧೇಶ್ವರ ದೇವಾಲಯವಿದೆ. `ಗುಡ್ಡದ ಸಿದ್ದಣ್ಣ~ ಎಂತಲೂ ಕರೆಯುತ್ತಾರೆ. ದೇವಾಲಯದ ಸುತ್ತ ಹೂವು-ಹಣ್ಣಿನ ಗಿಡಮರಗಳು, ಗಿಳಿ-ಕೋಗಿಲೆಗಳು, ಕೆಂಬಣ್ಣ ಶಿಲೆಯ ಗುಡ್ಡ, ಮೌನವೃತದ ಕಣಿವೆ-ಕೊಳ್ಳಗಳು, ಭಕ್ತಿ ಅಲೆಯ ವಚನಗಳು, ಮಂತ್ರ ಘೋಷಗಳು ಋಷಿ ಮುನಿಗಳ ಆಶ್ರಮವನ್ನು ನೆನಪಿಸುತ್ತವೆ.<br /> <br /> ಈ ದೇವಾಲಯ ನಾಲ್ಕು ಕಂಬಗಳನ್ನೊಳಗೊಂಡಿದ್ದು ನಿರಾಲಂಕಾರದ ಚಿಕ್ಕಬಾಗಿಲವಾಡವು ಗರ್ಭಗುಡಿಗಿದೆ. ಚಾಲುಕ್ಯ ಶೈಲಿಯ ಕಪ್ಪುಶಿಲೆಯ ಎತ್ತರದ ಶಿವಲಿಂಗದ ಎದುರು ನಂದಿಯ ಶಿಲಾಮೂರ್ತಿ ಇದೆ. ಹೊಯ್ಸಳ ಶೈಲಿಯ ಗೋಪುರ ಇರುವುದು ವಿಶೇಷ.<br /> <br /> ದೇವಾಲಯದ ಮುಂದಿರುವ ಗುಹೆಯಲ್ಲಿನ `ಗುಪ್ತ ಗಂಗಾ ಝರಿ~ಗೆ `ಸಿದ್ಧೇಶ್ವರನ ಹೊಂಡ, ಸಿದ್ಧಣ್ಣನ ತೀರ್ಥ~ ಎಂತಲೂ ಹೆಸರು. ಆವರಣದಲ್ಲಿ ಪಂಚಗ್ರಹ ಗುಡ್ಡ ಹಿರೇಮಠದ ಹಿಂದಿನ ಪಟ್ಟಾಧ್ಯಕ್ಷರ ಸಮಾಧಿಗಳಿದ್ದು, ನಿತ್ಯವೂ ಪೂಜೆ ಸಲ್ಲುತ್ತದೆ. ದೇವಾಲಯದ ಶಿಖರ, ನಂದಿ ಧ್ವಜ ಬಹುದೂರದ ವರೆಗೂ ಗೋಚರಿಸುತ್ತದೆ. <br /> <br /> ಭಕ್ತರು ಮೆಟ್ಟಿಲು ಏರಿ ಬರಬಹುದು. ವಾಹನಗಳಿಗೆ ಇನ್ನೊಂದು ದಾರಿಯುಂಟು. ಶ್ರಾವಣಮಾಸ, ನವರಾತ್ರಿ, ದೀಪಾವಳಿಗಳಲ್ಲಿ ವಿಶೇಷವಾಗಿ ಜನರು ಸೇರುತ್ತಾರೆ.<br /> ಅಮಾವಾಸ್ಯೆಯಂದು ಬರುವ ಬರುವವರ ಸಂಖ್ಯೆ ಹೆಚ್ಚು. <br /> <br /> ಪರಸ್ಥಳದಿಂದ ಬರುವ ಭಕ್ತರಿಗಾಗಿ ಪ್ರಸಾದದ ವ್ಯವಸ್ಥೆ ಇದೆ. ಪೂಜೆ-ಪುನಸ್ಕಾರಗಳಿಗೆ ನಿರ್ದಿಷ್ಟ ಸೇವಾ ಶುಲ್ಕ ಇರುವುದಿಲ್ಲ.ರಾಜ್ಯದ ಪ್ರಮುಖ ಊರುಗಳಿಂದ ಇಲ್ಲಿಗೆ ಬಸ್ಸುಗಳಿವೆ. ಮಾಹಿತಿಗೆ 94818 16299 ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ-ಸೊಲ್ಲಾಪುರ ಹೆದ್ದಾರಿಯ ಮೇಲೆ ಮಲಗಿದ ಸಿಂಹದಂತೆ ಕಾಣುವ ಗುಡ್ಡದ ಅಡಿಯ ಊರು ನರಗುಂದ. ಅದು ಒಂದು ಕಾಲಕ್ಕೆ ಬ್ರಿಟಿಷರನ್ನೇ ಬೆದರಿಸಿದ ಸ್ಥಳ. ರೈತರ ಬಂಡಾಯ ಹುಟ್ಟಿದ್ದೇ ಇಲ್ಲಿ. <br /> <br /> ಇಷ್ಟೊಂದು ಮಹತ್ವದ ಈ ಊರ ಉತ್ತರಕ್ಕೆ ಗುಡ್ಡದ ಮಧ್ಯದ ಕೆಳಭಾಗದಲ್ಲಿ ನಿಸರ್ಗದ ಮಡಿಲಲ್ಲಿ ಸಿದ್ಧೇಶ್ವರ ದೇವಾಲಯವಿದೆ. `ಗುಡ್ಡದ ಸಿದ್ದಣ್ಣ~ ಎಂತಲೂ ಕರೆಯುತ್ತಾರೆ. ದೇವಾಲಯದ ಸುತ್ತ ಹೂವು-ಹಣ್ಣಿನ ಗಿಡಮರಗಳು, ಗಿಳಿ-ಕೋಗಿಲೆಗಳು, ಕೆಂಬಣ್ಣ ಶಿಲೆಯ ಗುಡ್ಡ, ಮೌನವೃತದ ಕಣಿವೆ-ಕೊಳ್ಳಗಳು, ಭಕ್ತಿ ಅಲೆಯ ವಚನಗಳು, ಮಂತ್ರ ಘೋಷಗಳು ಋಷಿ ಮುನಿಗಳ ಆಶ್ರಮವನ್ನು ನೆನಪಿಸುತ್ತವೆ.<br /> <br /> ಈ ದೇವಾಲಯ ನಾಲ್ಕು ಕಂಬಗಳನ್ನೊಳಗೊಂಡಿದ್ದು ನಿರಾಲಂಕಾರದ ಚಿಕ್ಕಬಾಗಿಲವಾಡವು ಗರ್ಭಗುಡಿಗಿದೆ. ಚಾಲುಕ್ಯ ಶೈಲಿಯ ಕಪ್ಪುಶಿಲೆಯ ಎತ್ತರದ ಶಿವಲಿಂಗದ ಎದುರು ನಂದಿಯ ಶಿಲಾಮೂರ್ತಿ ಇದೆ. ಹೊಯ್ಸಳ ಶೈಲಿಯ ಗೋಪುರ ಇರುವುದು ವಿಶೇಷ.<br /> <br /> ದೇವಾಲಯದ ಮುಂದಿರುವ ಗುಹೆಯಲ್ಲಿನ `ಗುಪ್ತ ಗಂಗಾ ಝರಿ~ಗೆ `ಸಿದ್ಧೇಶ್ವರನ ಹೊಂಡ, ಸಿದ್ಧಣ್ಣನ ತೀರ್ಥ~ ಎಂತಲೂ ಹೆಸರು. ಆವರಣದಲ್ಲಿ ಪಂಚಗ್ರಹ ಗುಡ್ಡ ಹಿರೇಮಠದ ಹಿಂದಿನ ಪಟ್ಟಾಧ್ಯಕ್ಷರ ಸಮಾಧಿಗಳಿದ್ದು, ನಿತ್ಯವೂ ಪೂಜೆ ಸಲ್ಲುತ್ತದೆ. ದೇವಾಲಯದ ಶಿಖರ, ನಂದಿ ಧ್ವಜ ಬಹುದೂರದ ವರೆಗೂ ಗೋಚರಿಸುತ್ತದೆ. <br /> <br /> ಭಕ್ತರು ಮೆಟ್ಟಿಲು ಏರಿ ಬರಬಹುದು. ವಾಹನಗಳಿಗೆ ಇನ್ನೊಂದು ದಾರಿಯುಂಟು. ಶ್ರಾವಣಮಾಸ, ನವರಾತ್ರಿ, ದೀಪಾವಳಿಗಳಲ್ಲಿ ವಿಶೇಷವಾಗಿ ಜನರು ಸೇರುತ್ತಾರೆ.<br /> ಅಮಾವಾಸ್ಯೆಯಂದು ಬರುವ ಬರುವವರ ಸಂಖ್ಯೆ ಹೆಚ್ಚು. <br /> <br /> ಪರಸ್ಥಳದಿಂದ ಬರುವ ಭಕ್ತರಿಗಾಗಿ ಪ್ರಸಾದದ ವ್ಯವಸ್ಥೆ ಇದೆ. ಪೂಜೆ-ಪುನಸ್ಕಾರಗಳಿಗೆ ನಿರ್ದಿಷ್ಟ ಸೇವಾ ಶುಲ್ಕ ಇರುವುದಿಲ್ಲ.ರಾಜ್ಯದ ಪ್ರಮುಖ ಊರುಗಳಿಂದ ಇಲ್ಲಿಗೆ ಬಸ್ಸುಗಳಿವೆ. ಮಾಹಿತಿಗೆ 94818 16299 ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>