<p>ಧಾರವಾಡ ಜಿಲ್ಲೆ ನರಗುಂದ ಪಟ್ಟಣದ ಬಳಿಯ ಪುಣ್ಯಾರಣ್ಯ ಪತ್ರೀವನ ಶಂಭುಲಿಂಗ ದೇವನ ಕ್ಷೇತ್ರ. ಅದನ್ನು ಕಟ್ಟಿ ಬೆಳೆಸಿದವರು ವೀರಪ್ಪಜ್ಜನವರು. ಮೂಲತಃ ನವಲಗುಂದ ತಾಲ್ಲೂಕಿನ ಸೊಟಕನಹಾಳ ಗ್ರಾಮದ ವಿಶ್ವಕರ್ಮ ಮನೆತನದ ಅಂದಾನಪ್ಪ ಮತ್ತು ಕಾಳಮ್ಮ ದಂಪತಿಗಳ ಪುತ್ರರು.</p>.<p>ಬನಪುರದ ರುದ್ರಮುನಿ ಶಿವಾಚಾರ್ಯರಲ್ಲಿ ಸೇವೆಗೈದು, ಅಧ್ಯಯನ ನಡೆಸಿ ದೇಹ, ಮನಸ್ಸು, ಬುದ್ಧಿ - ಭಾವ ಇವೆಲ್ಲವನ್ನು ಶಿವಮಯ ಮಾಡಿಕೊಂಡು ಶುದ್ಧ ದ್ವೈತಿಗಳಾದವರು. <br /> <br /> ನಿರ್ಲಿಪ್ತ ಮತ್ತು ವೈರಾಗ್ಯವಂತರೆನಿಸಿದ ಅವರು ಹುಬ್ಬಳ್ಳಿಯ ಸಿದ್ಧಾರೂಢರು, ನವಲಗುಂದದ ನಾಗಲಿಂಗ, ಸಾವಳಗಿಯ ಶಿವಲಿಂಗ, ಗದಗದ ಮಡಿವಾಳ, ಹೊಸಳ್ಳಿಯ ಬೂದಿಸ್ವಾಮಿ, ಶಿಶುನಾಳ ಶರೀಫ, ಉಣಕಲ್ ಸಿದ್ದಪ್ಪಜ್ಜ ಮುಂತಾದವರಿಗೆ ಹತ್ತಿರದವರಾಗಿದ್ದರು.<br /> <br /> `ತನುವ ತೋಂಟವ ಮಾಡಿ, ಮನವ ಗುದ್ದಲಿ ಮಾಡಿ ಭ್ರಾಂತಿಯ ಬೇರು ಅಗೆಯಲು~ ಮುಂದಾಗಿದ್ದ ಅವರು ಜನರ ಅಜ್ಞಾನ, ಬಡತನ, ರೋಗ - ರುಜಿನ, ನಿರುದ್ಯೋಗ, ನಿರಕ್ಷರತೆ, ಆಲಸ್ಯತನ, ಮೌಢ್ಯಗಳನ್ನು ಹೋಗಲಾಡಿಸಲು ತಮ್ಮ ಜೀವವನ್ನೇ ತೇದರು. ಹುಲಸೇರ ಖಂಡಪ್ಪನನ್ನು ತಮ್ಮ ಶಿಷ್ಯನನ್ನಾಗಿ ಮಾಡಿಕೊಂಡಿದ್ದರು. <br /> <br /> ಅವರು ಪುಣ್ಯಾರಣ್ಯ ಪತ್ರೀವನ ಸ್ಥಾಪಿಸಿ ನೆಲೆ ನಿಂತ ಮೇಲೆ ಅಲ್ಲಿನ ವಾತಾವರಣವೇ ಶಿವಮಯವಾಯಿತು. ಶಂಭುಲಿಂಗನ ದರ್ಶನಾಶೀರ್ವಾದ ಪಡೆಯಲು ಬಂದವರೆಲ್ಲ ಈ ಅಜ್ಜನ ದರ್ಶನವನ್ನೂ ಪಡೆಯುತ್ತಿದ್ದರು.<br /> <br /> ಬ್ರಿಟಿಶ್ ಸೈನ್ಯಾಧಿಕಾರಿಯಾಗಿದ್ದ ಧೋಂಡಿಬಾ ಭೋಸಲೆ ಜಮಾದಾರ ಬೇಟೆಯಾಡುತ್ತ ಪುಣ್ಯಾರಣ್ಯ ಪತ್ರೀವನಕ್ಕೆ ಬಂದಾಗ ಅಜ್ಜನ ಪ್ರಭಾವದಿಂದ ಬದಲಾದ. ಅವರ ಶಿಷ್ಯ ನಾಗರಾಜ ತೋರಿದ ದಾರಿಯಲ್ಲಿ ನಡೆದು ಶಂಭುಲಿಂಗ ದೇವಾಲಯ ನಿರ್ಮಿಸಿದ. <br /> <br /> ಧೋಂಡಿಬಾನ ಬದುಕನ್ನು ರೂಪಿಸಿದಂತೆ ತ್ಯಾಗವೀರ ಸಿರಸಂಗಿ ಲಿಂಗರಾಜರ ಬದುಕಿಗೂ ವೀರಪ್ಪಜ್ಜ ದಾರಿ ತೋರಿದರು. ಅವರ ತಲೆಗೆ ಆಗಿದ್ದ ಮಾರೀ ಹುಣ್ಣು ಪೂರ್ಣ ಮಾಯುವಂತೆ ಮಾಡಿದರು. ಅವರನ್ನು ದತ್ತಕ ಪಡೆದುಕೊಳ್ಳಲು ನವಲಗುಂದ ದೇಸಗತಿಯ ರಾಜಮಾತೆ ಉಮಾಬಾಯಿಗೆ ಸೂಚಿಸಿದರು.</p>.<p>ಇದಕ್ಕೆ ಕೃತಜ್ಞತೆಯ ಕುರುಹಾಗಿ ಲಿಂಗರಾಜರು ಪತ್ರೀವನದಲ್ಲಿ ವೀರಪ್ಪಜ್ಜನಿಗೆ ಅನುಷ್ಥಾನಕ್ಕೆಂದು ಗವಿಯೊಂದನ್ನು ಕಟ್ಟಿಸಿಕೊಟ್ಟರು. ಆ ಕುರಿತಾದ ಶಾಸನ ಮಠದ ಗೋಡೆಯಲ್ಲಿದೆ.<br /> <br /> ಪತ್ರೀವನ ಪ್ರವೇಶಿಸುತ್ತಿದ್ದಂತೆ ವಿವಿಧ ಜಾತಿಯ ಗಿಡಮರಗಳು ಕೈಬೀಸಿ ಕರೆಯುತ್ತವೆ, ನೆರಳು ನೀಡುತ್ತವೆ. ಪತ್ರಿಯ ಹೂಗಳು ಸೂಸುವ ಪರಿಮಳ ವಾತಾವರಣವನ್ನು ಸುಗಂಧಮಯಗೊಳಿಸಿದೆ. ನೂರಾರು ಬಗೆಯ ಸಸ್ಯರಾಶಿಗಳು, ಗೋವುಗಳು, ಋಷಿ - ಮುನಿಗಳ ವಿಗ್ರಹಗಳು, ದೇವಾಲಯಗಳು ವಿಶೇಷ ಮೆರಗು ತರುತ್ತವೆ.</p>.<p>ಈ ತಪೋತಾಣಕ್ಕೆ ಕಲಶಪ್ರಾಯವಾಗಿದೆ ಶಂಭುಲಿಂಗನ ದೇವಾಲಯ. ಈ ಶಂಭುಲಿಂಗ ಕಾಶಿಯ ವಿಶ್ವೇಶ್ವರನೆಂದೇ ಭಾವುಕರು ನಂಬುತ್ತಾರೆ. <br /> ಸದ್ಯದ ಪೀಠಾಧಿಪತಿ ಗುರು ಸಿದ್ಧವೀರ ಶಿವಯೋಗಿ ಶಿವಾಚಾರ್ಯರು ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದಾರೆ.</p>.<p>ಶಾಲಾ ಕಾಲೇಜುಗಳು, ವಸತಿ ನಿಲಯ ಸ್ಥಾಪಿಸಿದ್ದಾರೆ. ಜಾತ್ರೆಯ ಸಂದರ್ಭದಲ್ಲಿ ನಾಡು ನುಡಿಯ ಸಾಧಕರಿಗೆ `ಶಂಭುಲಿಂಗ ಪ್ರಶಸ್ತಿ~ ನೀಡುತ್ತಿದ್ದಾರೆ. ಶಂಭುಲಿಂಗ ಪ್ರಕಾಶನದ ಮೂಲಕ ಅನೇಕ ಗ್ರಂಥಗಳನ್ನು ಹೊರತಂದಿದ್ದಾರೆ.</p>.<p><strong>ಸೇವಾ ವಿವರ (ರೂ)<br /> </strong><br /> ಪಂಚಾಮೃತ ಅಭಿಷೇಕ 100<br /> ಕ್ಷೀರಾಭಿಷೇಕ 150<br /> ಕಾರ್ತೀಕ ಪೂಜೆ 150<br /> ವೀಳ್ಯದೆಲೆ ಪೂಜೆ 251<br /> ಬುತ್ತಿ ಪೂಜೆ 350<br /> ಕಾಯಿ, ಕರ್ಪೂರ, ಆರತಿ 10<br /> <strong>ಈ ಕ್ಷೇತ್ರ ನರಗುಂದದಿಂದ 1 ಕಿ.ಮೀ. ದೂರದಲ್ಲಿದೆ. ಆಟೊ, ಬಸ್ಸುಗಳಿವೆ. ಮಾಹಿತಿಗೆ 96322 84479.<br /> </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧಾರವಾಡ ಜಿಲ್ಲೆ ನರಗುಂದ ಪಟ್ಟಣದ ಬಳಿಯ ಪುಣ್ಯಾರಣ್ಯ ಪತ್ರೀವನ ಶಂಭುಲಿಂಗ ದೇವನ ಕ್ಷೇತ್ರ. ಅದನ್ನು ಕಟ್ಟಿ ಬೆಳೆಸಿದವರು ವೀರಪ್ಪಜ್ಜನವರು. ಮೂಲತಃ ನವಲಗುಂದ ತಾಲ್ಲೂಕಿನ ಸೊಟಕನಹಾಳ ಗ್ರಾಮದ ವಿಶ್ವಕರ್ಮ ಮನೆತನದ ಅಂದಾನಪ್ಪ ಮತ್ತು ಕಾಳಮ್ಮ ದಂಪತಿಗಳ ಪುತ್ರರು.</p>.<p>ಬನಪುರದ ರುದ್ರಮುನಿ ಶಿವಾಚಾರ್ಯರಲ್ಲಿ ಸೇವೆಗೈದು, ಅಧ್ಯಯನ ನಡೆಸಿ ದೇಹ, ಮನಸ್ಸು, ಬುದ್ಧಿ - ಭಾವ ಇವೆಲ್ಲವನ್ನು ಶಿವಮಯ ಮಾಡಿಕೊಂಡು ಶುದ್ಧ ದ್ವೈತಿಗಳಾದವರು. <br /> <br /> ನಿರ್ಲಿಪ್ತ ಮತ್ತು ವೈರಾಗ್ಯವಂತರೆನಿಸಿದ ಅವರು ಹುಬ್ಬಳ್ಳಿಯ ಸಿದ್ಧಾರೂಢರು, ನವಲಗುಂದದ ನಾಗಲಿಂಗ, ಸಾವಳಗಿಯ ಶಿವಲಿಂಗ, ಗದಗದ ಮಡಿವಾಳ, ಹೊಸಳ್ಳಿಯ ಬೂದಿಸ್ವಾಮಿ, ಶಿಶುನಾಳ ಶರೀಫ, ಉಣಕಲ್ ಸಿದ್ದಪ್ಪಜ್ಜ ಮುಂತಾದವರಿಗೆ ಹತ್ತಿರದವರಾಗಿದ್ದರು.<br /> <br /> `ತನುವ ತೋಂಟವ ಮಾಡಿ, ಮನವ ಗುದ್ದಲಿ ಮಾಡಿ ಭ್ರಾಂತಿಯ ಬೇರು ಅಗೆಯಲು~ ಮುಂದಾಗಿದ್ದ ಅವರು ಜನರ ಅಜ್ಞಾನ, ಬಡತನ, ರೋಗ - ರುಜಿನ, ನಿರುದ್ಯೋಗ, ನಿರಕ್ಷರತೆ, ಆಲಸ್ಯತನ, ಮೌಢ್ಯಗಳನ್ನು ಹೋಗಲಾಡಿಸಲು ತಮ್ಮ ಜೀವವನ್ನೇ ತೇದರು. ಹುಲಸೇರ ಖಂಡಪ್ಪನನ್ನು ತಮ್ಮ ಶಿಷ್ಯನನ್ನಾಗಿ ಮಾಡಿಕೊಂಡಿದ್ದರು. <br /> <br /> ಅವರು ಪುಣ್ಯಾರಣ್ಯ ಪತ್ರೀವನ ಸ್ಥಾಪಿಸಿ ನೆಲೆ ನಿಂತ ಮೇಲೆ ಅಲ್ಲಿನ ವಾತಾವರಣವೇ ಶಿವಮಯವಾಯಿತು. ಶಂಭುಲಿಂಗನ ದರ್ಶನಾಶೀರ್ವಾದ ಪಡೆಯಲು ಬಂದವರೆಲ್ಲ ಈ ಅಜ್ಜನ ದರ್ಶನವನ್ನೂ ಪಡೆಯುತ್ತಿದ್ದರು.<br /> <br /> ಬ್ರಿಟಿಶ್ ಸೈನ್ಯಾಧಿಕಾರಿಯಾಗಿದ್ದ ಧೋಂಡಿಬಾ ಭೋಸಲೆ ಜಮಾದಾರ ಬೇಟೆಯಾಡುತ್ತ ಪುಣ್ಯಾರಣ್ಯ ಪತ್ರೀವನಕ್ಕೆ ಬಂದಾಗ ಅಜ್ಜನ ಪ್ರಭಾವದಿಂದ ಬದಲಾದ. ಅವರ ಶಿಷ್ಯ ನಾಗರಾಜ ತೋರಿದ ದಾರಿಯಲ್ಲಿ ನಡೆದು ಶಂಭುಲಿಂಗ ದೇವಾಲಯ ನಿರ್ಮಿಸಿದ. <br /> <br /> ಧೋಂಡಿಬಾನ ಬದುಕನ್ನು ರೂಪಿಸಿದಂತೆ ತ್ಯಾಗವೀರ ಸಿರಸಂಗಿ ಲಿಂಗರಾಜರ ಬದುಕಿಗೂ ವೀರಪ್ಪಜ್ಜ ದಾರಿ ತೋರಿದರು. ಅವರ ತಲೆಗೆ ಆಗಿದ್ದ ಮಾರೀ ಹುಣ್ಣು ಪೂರ್ಣ ಮಾಯುವಂತೆ ಮಾಡಿದರು. ಅವರನ್ನು ದತ್ತಕ ಪಡೆದುಕೊಳ್ಳಲು ನವಲಗುಂದ ದೇಸಗತಿಯ ರಾಜಮಾತೆ ಉಮಾಬಾಯಿಗೆ ಸೂಚಿಸಿದರು.</p>.<p>ಇದಕ್ಕೆ ಕೃತಜ್ಞತೆಯ ಕುರುಹಾಗಿ ಲಿಂಗರಾಜರು ಪತ್ರೀವನದಲ್ಲಿ ವೀರಪ್ಪಜ್ಜನಿಗೆ ಅನುಷ್ಥಾನಕ್ಕೆಂದು ಗವಿಯೊಂದನ್ನು ಕಟ್ಟಿಸಿಕೊಟ್ಟರು. ಆ ಕುರಿತಾದ ಶಾಸನ ಮಠದ ಗೋಡೆಯಲ್ಲಿದೆ.<br /> <br /> ಪತ್ರೀವನ ಪ್ರವೇಶಿಸುತ್ತಿದ್ದಂತೆ ವಿವಿಧ ಜಾತಿಯ ಗಿಡಮರಗಳು ಕೈಬೀಸಿ ಕರೆಯುತ್ತವೆ, ನೆರಳು ನೀಡುತ್ತವೆ. ಪತ್ರಿಯ ಹೂಗಳು ಸೂಸುವ ಪರಿಮಳ ವಾತಾವರಣವನ್ನು ಸುಗಂಧಮಯಗೊಳಿಸಿದೆ. ನೂರಾರು ಬಗೆಯ ಸಸ್ಯರಾಶಿಗಳು, ಗೋವುಗಳು, ಋಷಿ - ಮುನಿಗಳ ವಿಗ್ರಹಗಳು, ದೇವಾಲಯಗಳು ವಿಶೇಷ ಮೆರಗು ತರುತ್ತವೆ.</p>.<p>ಈ ತಪೋತಾಣಕ್ಕೆ ಕಲಶಪ್ರಾಯವಾಗಿದೆ ಶಂಭುಲಿಂಗನ ದೇವಾಲಯ. ಈ ಶಂಭುಲಿಂಗ ಕಾಶಿಯ ವಿಶ್ವೇಶ್ವರನೆಂದೇ ಭಾವುಕರು ನಂಬುತ್ತಾರೆ. <br /> ಸದ್ಯದ ಪೀಠಾಧಿಪತಿ ಗುರು ಸಿದ್ಧವೀರ ಶಿವಯೋಗಿ ಶಿವಾಚಾರ್ಯರು ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದಾರೆ.</p>.<p>ಶಾಲಾ ಕಾಲೇಜುಗಳು, ವಸತಿ ನಿಲಯ ಸ್ಥಾಪಿಸಿದ್ದಾರೆ. ಜಾತ್ರೆಯ ಸಂದರ್ಭದಲ್ಲಿ ನಾಡು ನುಡಿಯ ಸಾಧಕರಿಗೆ `ಶಂಭುಲಿಂಗ ಪ್ರಶಸ್ತಿ~ ನೀಡುತ್ತಿದ್ದಾರೆ. ಶಂಭುಲಿಂಗ ಪ್ರಕಾಶನದ ಮೂಲಕ ಅನೇಕ ಗ್ರಂಥಗಳನ್ನು ಹೊರತಂದಿದ್ದಾರೆ.</p>.<p><strong>ಸೇವಾ ವಿವರ (ರೂ)<br /> </strong><br /> ಪಂಚಾಮೃತ ಅಭಿಷೇಕ 100<br /> ಕ್ಷೀರಾಭಿಷೇಕ 150<br /> ಕಾರ್ತೀಕ ಪೂಜೆ 150<br /> ವೀಳ್ಯದೆಲೆ ಪೂಜೆ 251<br /> ಬುತ್ತಿ ಪೂಜೆ 350<br /> ಕಾಯಿ, ಕರ್ಪೂರ, ಆರತಿ 10<br /> <strong>ಈ ಕ್ಷೇತ್ರ ನರಗುಂದದಿಂದ 1 ಕಿ.ಮೀ. ದೂರದಲ್ಲಿದೆ. ಆಟೊ, ಬಸ್ಸುಗಳಿವೆ. ಮಾಹಿತಿಗೆ 96322 84479.<br /> </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>