<p>ಶನಿವಾರ, ಭಾನುವಾರದ ರಜಾ ದಿನಗಳ ಜತೆ ಸೋಮವಾರ ಗಣರಾಜ್ಯೋತ್ಸವ ಇರುವುದರಿಂದ ಮೂರು ದಿನ ರಜಾ ಸಿಗುತ್ತಿದೆ. ಹೀಗಾಗಿ ಅನೇಕರು ಪ್ರವಾಸದ ಯೋಜನೆಯನ್ನು ಮಾಡಿರುತ್ತಾರೆ</p><p>ಈ ವಾರ ಮೂರು ದಿನಗಳು ರಜಾ ಸಿಗುತ್ತಿರುವ ಕಾರಣ ಅನೇಕರು ತುಸು ದೀರ್ಘ ಪ್ರವಾಸವನ್ನೇ ಕೈಗೊಳ್ಳುತ್ತಿದ್ದಾರೆ. ಬೆಂಗಳೂರಿನಿಂದ ಎಲ್ಲೆಲ್ಲಿಗೆ ಹೋಗಬಹುದು ಎಂದು ನೋಡುವುದಾದರೆ,</p><p><strong>ಕಾಶ್ಮೀರ, ಮನಾಲಿ</strong></p><p>ಉತ್ತರ ಭಾರತದ ಕಾಶ್ಮೀರ,<a href="https://www.prajavani.net/news/india-news/himachal-pradesh-manali-snowfall-tourists-celebrating-3742869"> ಮನಾಲಿಯಲ್ಲೀಗ ಹಿಮ ಬೀಳುತ್ತಿದೆ</a>. ರಸ್ತೆ, ಮನೆಗಳೆಲ್ಲ ಹಿಮದಿಂದ ಆವೃತವಾಗಿವೆ. ಹಿಮದಲ್ಲಿ ಮಿಂದೇಳಬೇಕು, ಮೋಜು ಮಸ್ತಿ ಮಾಡಬೇಕು ಎನ್ನುವವರಿಗೆ ಈ ಸಮಯ ಸೂಕ್ತವಾಗಿದೆ. ವಿಮಾನದ ಮೂಲಕ ಶ್ರೀನಗರ ತಲುಪಬಹುದು. ಆದರೆ ಭಾರಿ ಹಿಮಪಾತವಾಗುತ್ತಿರುವ ಕಾರಣ ವಿಮಾನ ಹಾರಾಟದ ಸಮಯದ ಬಗ್ಗೆ ಗಮನವಿರಲಿ.</p><p><strong>ರಾಜಸ್ಥಾನ</strong></p><p>ಭರ್ತಿ ಮೂರು ದಿನಗಳ ಕಾಲ ರಜೆ ಇರುವುದರಿಂದ ರಾಜಸ್ಥಾನಕ್ಕೆ ಭೇಟಿ ನೀಡಬಹುದು. ಜೈಪುರ, ಉದಯಪುರಕ್ಕೂ ಭೇಟಿ ನೀಡಬಹುದು. ರಾಜಸ್ಥಾನಿ ಸಂಸ್ಕೃತಿ, ರಾಜರ ಕಾಲದ ಮಹಲ್ಗಳನ್ನು ಕಣ್ತುಂಬಿಕೊಂಡು, ವಿಶೇಷ ತಿನಿಸುಗಳನ್ನು ಸವಿಯಬಹುದು.</p><p><strong>ಪುದುಚೇರಿ</strong></p><p>ಮೂರು ದಿನಗಳಲ್ಲಿ ಆರಾಮದಲ್ಲಿ ಭೇಟಿ ನೀಡಿ ವಾಪಸ್ಸಾಗಬಹುದಾದ ತಾಣ ಎಂದರೆ <a href="https://www.prajavani.net/leisure/travel/puducherry-tourism-two-day-itinerary-and-places-to-visit-3698316">ಪುದುಚೇರಿ</a>. ಬಂಗಾಳಕೊಲ್ಲಿಯ ಅಂಚಿನಲ್ಲಿರುವ ಈ ನಗರ ಪ್ರೆಂಚರ ಆಳ್ವಿಕೆಯ ಕುರುಹುಗಳನ್ನು ಉಳಿಸಿಕೊಂಡಿದೆ. ಹೀಗಾಗಿ ಇಲ್ಲಿಗೆ ಭೇಟಿ ನೀಡಿದಾಗ ಬೇರೆಯ ದೇಶಕ್ಕೆ ಹೋದಂತ ಅನುಭವವಾಗುತ್ತದೆ.</p><p><strong>ಮುನ್ನಾರ್, ಕೊಡೈಕೆನಾಲ್</strong></p><p>ಚುಮು ಚುಮು ಚಳಿಯ ನಡುವೆ ಹಸಿರ ಪರಿಸರದಲ್ಲಿ ಕಾಲಕಳೆಯಲು ತಮಿಳುನಾಡಿನ ಮುನ್ನಾರ್, ಕೊಡೈಕೆನಾಲ್ ಉತ್ತಮ ಸ್ಥಳಗಳಾಗಿವೆ. ಟೀ ತೋಟಗಳು ನಡುವೆ ಓಡಾಡಿ, ಎತ್ತರದ ಗುಡ್ಡಗಳ ಮೇಲೆ ನಿಂತು ಸೂರ್ಯೋದಯವನ್ನು ವೀಕ್ಷಿಸಬಹುದು.</p><p><strong>ದೇವಸ್ಥಾನಗಳಿಗೆ ಭೇಟಿ</strong></p><p>ದೇವಸ್ಥಾನಗಳಿಗೆ ಭೇಟಿ ನೀಡಬೇಕು ಎನ್ನುವಂತಿದ್ದರೆ ಇರುವ ರಜಾ ದಿನಗಳಲ್ಲಿ ಧರ್ಮಸ್ಥಳ, ಮುರ್ಡೇಶ್ವರ, ಗೋಕರ್ಣ, ಅಯೋಧ್ಯೆ, ತಿರುಪತಿ, ಕಾಶಿ, ವಾರಾಣಸಿ, ಪುರಿ ಇಂತಹ ಸ್ಥಳಗಳಿಗೆ ಭೇಟಿ ನೀಡಬಹುದು.</p>.<p><strong>ಮೇಕ್ಟ್ರಿಪ್ ವರದಿ ಹೇಳಿದ್ದಿಷ್ಟು</strong></p><p>ಗಣರಾಜ್ಯೋತ್ಸವದ ಪ್ರಯಕ್ತ ಇರುವ ರಜಾದಿನಗಳಲ್ಲಿ ಅತಿ ಹೆಚ್ಚು ಜನರು ಗೋವಾ, ಥೈಲ್ಯಾಂಡ್, ಮಲೇಷ್ಯಾ, ಸಿಂಗಪುರ, ವಿಯೆಟ್ನಾಂಗೆ ತೆರಳಲು ಬುಕಿಂಗ್ ಮಾಡಿದ್ದಾರೆ ಎಂದು ಮೇಕ್ಮೈ ಟ್ರಿಪ್ ವರದಿ ಬಹಿರಂಗ ಪಡಿಸಿದೆ.</p><p>ಈ ಕುರಿತು ಮಾಹಿತಿ ನೀಡಿರುವ ಮೇಕ್ ಮೈ ಟ್ರಿಪ್ನ ಸಹ-ಸಂಸ್ಥಾಪಕ ಮತ್ತು ಗ್ರೂಪ್ ಸಿಇಒ ರಾಜೇಶ್ ಮಾಗೋವ್, ದೀರ್ಘ ರಜಾ ದಿನಗಳ ಸಂದರ್ಭದಲ್ಲಿ ವಿಶ್ರಾಂತಿ ಹಾಗೂ ಮನರಂಜನೆಗಾಗಿ ಜನ ತಮ್ಮಿಷ್ಟದ ಜಾಗಕ್ಕೆ ಹೋಗಲು ಬಯಸುತ್ತಾರೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಈ ಬಾರಿ ಜನರು ಹೆಚ್ಚು ಸ್ಥಳಗಳಿಗೆ ಭೇಟಿ ನೀಡಲು ಆಸಕ್ತಿ ವಹಿಸಿದ್ದಾರೆ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶನಿವಾರ, ಭಾನುವಾರದ ರಜಾ ದಿನಗಳ ಜತೆ ಸೋಮವಾರ ಗಣರಾಜ್ಯೋತ್ಸವ ಇರುವುದರಿಂದ ಮೂರು ದಿನ ರಜಾ ಸಿಗುತ್ತಿದೆ. ಹೀಗಾಗಿ ಅನೇಕರು ಪ್ರವಾಸದ ಯೋಜನೆಯನ್ನು ಮಾಡಿರುತ್ತಾರೆ</p><p>ಈ ವಾರ ಮೂರು ದಿನಗಳು ರಜಾ ಸಿಗುತ್ತಿರುವ ಕಾರಣ ಅನೇಕರು ತುಸು ದೀರ್ಘ ಪ್ರವಾಸವನ್ನೇ ಕೈಗೊಳ್ಳುತ್ತಿದ್ದಾರೆ. ಬೆಂಗಳೂರಿನಿಂದ ಎಲ್ಲೆಲ್ಲಿಗೆ ಹೋಗಬಹುದು ಎಂದು ನೋಡುವುದಾದರೆ,</p><p><strong>ಕಾಶ್ಮೀರ, ಮನಾಲಿ</strong></p><p>ಉತ್ತರ ಭಾರತದ ಕಾಶ್ಮೀರ,<a href="https://www.prajavani.net/news/india-news/himachal-pradesh-manali-snowfall-tourists-celebrating-3742869"> ಮನಾಲಿಯಲ್ಲೀಗ ಹಿಮ ಬೀಳುತ್ತಿದೆ</a>. ರಸ್ತೆ, ಮನೆಗಳೆಲ್ಲ ಹಿಮದಿಂದ ಆವೃತವಾಗಿವೆ. ಹಿಮದಲ್ಲಿ ಮಿಂದೇಳಬೇಕು, ಮೋಜು ಮಸ್ತಿ ಮಾಡಬೇಕು ಎನ್ನುವವರಿಗೆ ಈ ಸಮಯ ಸೂಕ್ತವಾಗಿದೆ. ವಿಮಾನದ ಮೂಲಕ ಶ್ರೀನಗರ ತಲುಪಬಹುದು. ಆದರೆ ಭಾರಿ ಹಿಮಪಾತವಾಗುತ್ತಿರುವ ಕಾರಣ ವಿಮಾನ ಹಾರಾಟದ ಸಮಯದ ಬಗ್ಗೆ ಗಮನವಿರಲಿ.</p><p><strong>ರಾಜಸ್ಥಾನ</strong></p><p>ಭರ್ತಿ ಮೂರು ದಿನಗಳ ಕಾಲ ರಜೆ ಇರುವುದರಿಂದ ರಾಜಸ್ಥಾನಕ್ಕೆ ಭೇಟಿ ನೀಡಬಹುದು. ಜೈಪುರ, ಉದಯಪುರಕ್ಕೂ ಭೇಟಿ ನೀಡಬಹುದು. ರಾಜಸ್ಥಾನಿ ಸಂಸ್ಕೃತಿ, ರಾಜರ ಕಾಲದ ಮಹಲ್ಗಳನ್ನು ಕಣ್ತುಂಬಿಕೊಂಡು, ವಿಶೇಷ ತಿನಿಸುಗಳನ್ನು ಸವಿಯಬಹುದು.</p><p><strong>ಪುದುಚೇರಿ</strong></p><p>ಮೂರು ದಿನಗಳಲ್ಲಿ ಆರಾಮದಲ್ಲಿ ಭೇಟಿ ನೀಡಿ ವಾಪಸ್ಸಾಗಬಹುದಾದ ತಾಣ ಎಂದರೆ <a href="https://www.prajavani.net/leisure/travel/puducherry-tourism-two-day-itinerary-and-places-to-visit-3698316">ಪುದುಚೇರಿ</a>. ಬಂಗಾಳಕೊಲ್ಲಿಯ ಅಂಚಿನಲ್ಲಿರುವ ಈ ನಗರ ಪ್ರೆಂಚರ ಆಳ್ವಿಕೆಯ ಕುರುಹುಗಳನ್ನು ಉಳಿಸಿಕೊಂಡಿದೆ. ಹೀಗಾಗಿ ಇಲ್ಲಿಗೆ ಭೇಟಿ ನೀಡಿದಾಗ ಬೇರೆಯ ದೇಶಕ್ಕೆ ಹೋದಂತ ಅನುಭವವಾಗುತ್ತದೆ.</p><p><strong>ಮುನ್ನಾರ್, ಕೊಡೈಕೆನಾಲ್</strong></p><p>ಚುಮು ಚುಮು ಚಳಿಯ ನಡುವೆ ಹಸಿರ ಪರಿಸರದಲ್ಲಿ ಕಾಲಕಳೆಯಲು ತಮಿಳುನಾಡಿನ ಮುನ್ನಾರ್, ಕೊಡೈಕೆನಾಲ್ ಉತ್ತಮ ಸ್ಥಳಗಳಾಗಿವೆ. ಟೀ ತೋಟಗಳು ನಡುವೆ ಓಡಾಡಿ, ಎತ್ತರದ ಗುಡ್ಡಗಳ ಮೇಲೆ ನಿಂತು ಸೂರ್ಯೋದಯವನ್ನು ವೀಕ್ಷಿಸಬಹುದು.</p><p><strong>ದೇವಸ್ಥಾನಗಳಿಗೆ ಭೇಟಿ</strong></p><p>ದೇವಸ್ಥಾನಗಳಿಗೆ ಭೇಟಿ ನೀಡಬೇಕು ಎನ್ನುವಂತಿದ್ದರೆ ಇರುವ ರಜಾ ದಿನಗಳಲ್ಲಿ ಧರ್ಮಸ್ಥಳ, ಮುರ್ಡೇಶ್ವರ, ಗೋಕರ್ಣ, ಅಯೋಧ್ಯೆ, ತಿರುಪತಿ, ಕಾಶಿ, ವಾರಾಣಸಿ, ಪುರಿ ಇಂತಹ ಸ್ಥಳಗಳಿಗೆ ಭೇಟಿ ನೀಡಬಹುದು.</p>.<p><strong>ಮೇಕ್ಟ್ರಿಪ್ ವರದಿ ಹೇಳಿದ್ದಿಷ್ಟು</strong></p><p>ಗಣರಾಜ್ಯೋತ್ಸವದ ಪ್ರಯಕ್ತ ಇರುವ ರಜಾದಿನಗಳಲ್ಲಿ ಅತಿ ಹೆಚ್ಚು ಜನರು ಗೋವಾ, ಥೈಲ್ಯಾಂಡ್, ಮಲೇಷ್ಯಾ, ಸಿಂಗಪುರ, ವಿಯೆಟ್ನಾಂಗೆ ತೆರಳಲು ಬುಕಿಂಗ್ ಮಾಡಿದ್ದಾರೆ ಎಂದು ಮೇಕ್ಮೈ ಟ್ರಿಪ್ ವರದಿ ಬಹಿರಂಗ ಪಡಿಸಿದೆ.</p><p>ಈ ಕುರಿತು ಮಾಹಿತಿ ನೀಡಿರುವ ಮೇಕ್ ಮೈ ಟ್ರಿಪ್ನ ಸಹ-ಸಂಸ್ಥಾಪಕ ಮತ್ತು ಗ್ರೂಪ್ ಸಿಇಒ ರಾಜೇಶ್ ಮಾಗೋವ್, ದೀರ್ಘ ರಜಾ ದಿನಗಳ ಸಂದರ್ಭದಲ್ಲಿ ವಿಶ್ರಾಂತಿ ಹಾಗೂ ಮನರಂಜನೆಗಾಗಿ ಜನ ತಮ್ಮಿಷ್ಟದ ಜಾಗಕ್ಕೆ ಹೋಗಲು ಬಯಸುತ್ತಾರೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಈ ಬಾರಿ ಜನರು ಹೆಚ್ಚು ಸ್ಥಳಗಳಿಗೆ ಭೇಟಿ ನೀಡಲು ಆಸಕ್ತಿ ವಹಿಸಿದ್ದಾರೆ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>