70 ವಿಧಾನಸಭಾ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷವು ಈಗಾಗಲೇ 55 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದ್ದು, 7 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ 7 ಕ್ಷೇತ್ರಗಳಲ್ಲಿ ಗೆದ್ದಿದ್ದು 1ರಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ದೆಹಲಿಯಲ್ಲಿ ಖಾತೆಯನ್ನೇ ತೆರೆಯಲಿಲ್ಲ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಎಸ್ಸಿ ಮೀಸಲು ಕ್ಷೇತ್ರಗಳಾ ಎಲ್ಲಾ 12 ಕಡೆಗಳಲ್ಲಿ 12 ಸಾವಿರ ಮತಗಳ ಅಂತರದಲ್ಲಿ ಗೆಲುವಿನ ನಗೆ ಬೀರಿದೆ.
ದೆಹಲಿ ಜನರ ತೀರ್ಪಿಗೆ ತಲೆ ಬಾಗುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಟ್ವೀಟ್ ಮಾಡಿದ್ದಾರೆ.
ಫಲಿತಾಂಶ ನಿಚ್ಚಳವಾಗುತ್ತಿದ್ದು ಆಪ್ 52 ಕ್ಷೇತ್ರಗಳಲ್ಲಿ ಹಾಗೂ ಬಿಜೆಪಿ 1 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿವೆ ಎಂದು ಚುನಾವಣೆ ಆಯೋಗ ಪ್ರಕಟಿಸಿದೆ.
ಫಲಿತಾಂಶ ನಿಚ್ಚಳವಾಗುತ್ತಿದ್ದು ಆಪ್ ಮುನ್ನಡೆಯಿರುವ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬಿಜೆಪಿ ಮುನ್ನಡೆ ದಾಖಲಿಸಿದ್ದ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮಧ್ಯಾಹ್ನ 3.40ರ ವೇಳೆಯಲ್ಲಿ ಆಪ್ 63 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 7 ಕ್ಷೇತ್ರಗಳಲ್ಲಿ ಮುಂದಿತ್ತು. 18 ಕ್ಷೇತ್ರಗಳಲ್ಲಿ ಆಪ್ ಮತ್ತು 1 ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಿದೆ ಎಂದು ಆಯೋಗ ಘೋಷಿಸಿದೆ.
ಪತಾಪರ್ಗಂಜ್ ಕ್ಷೇತ್ರದಿಂದ ಮತ್ತೆ ಆಯ್ಕೆಯಾಗಿರುವುದು ಖುಷಿತಂದಿದೆ. ಬಿಜೆಪಿ ದ್ವೇಷದ ರಾಜಕೀಯಕ್ಕೆ ಯತ್ನಿಸಿತು. ಆದರೆ ಜನರು ತಮಗಾಗಿ ಕೆಲಸ ಮಾಡುವವರನ್ನು ಅಶೀರ್ವದಿಸಿದರು’ ಎಂದು ತೀವ್ರ ಪೈಪೋಟಿಯ ನಂತರ ಪತಾಪರ್ಗಂಜ್ ಕ್ಷೇತ್ರದಿಂದ ಜಯಗಳಿಸಿದ ಮನೀಶ್ ಸಿಸೊಡಿಯಾ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದರು.
ಈವರೆಗಿನ ಎಣಿಕೆಯ ಮಾಹಿತಿ ಪ್ರಕಾರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೇ 41.59ರಷ್ಟು ಮತಗಳಿಸಿದೆ. 2015ಕ್ಕೆ ಹೋಲಿಸಿದರೆ ಬಿಜೆಪಿ ಮತಗಳಿಗೆ ಪ್ರಮಾಣ ಶೇ 9.38ರಷ್ಟು ಹೆಚ್ಚಾಗಿದೆ. ಆಪ್ ಶೇ 52.39ರಷ್ಟು ಮತಗಳಿಸಿದೆ. 2015ಕ್ಕೆ ಹೋಲಿಸಿದರೆ ಇದು ಶೇ 1.95ರಷ್ಟು ಕಡಿಮೆ. ಕಾಂಗ್ರೆಸ್ ಶೇ 4.39ರಷ್ಟು ಮತಗಳಿಸಿದೆ. 2015ಕ್ಕೆ ಹೋಲಿಸಿದರೆ ಇದು ಶೇ 5.27ರಷ್ಟು ಕಡಿಮೆ.
ಮಧ್ಯಾಹ್ನ 3 ಗಂಟೆಗೆ ಲಭ್ಯವಿದ್ದ ಮಾಹಿತಿ ಪ್ರಕಾರ ಆಪ್ 55, ಬಿಜೆಪಿ 10 ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿದೆ. 5 ಕ್ಷೇತ್ರಗಳಲ್ಲಿ ಆಪ್ ಜಯಗಳಿಸಿದೆ.
ತೀವ್ರ ಕುತೂಹಲ ಕೆರಳಿಸಿದ್ದ ಪತಾಪರ್ಗಂಜ್ ಕ್ಷೇತ್ರದಲ್ಲಿ ಜಿದ್ದಾಜಿದ್ದಿ ಪೈಪೋಟಿಯ ನಂತರ ಆಪ್ನ ಮನೀಶ್ ಸಿಸೊಡಿಯಾ ಗೆಲುವಿನ ನಗೆ ಬೀರಿದರು. ‘ಶಿಕ್ಷಣ ಸಚಿವರು ಹೇಗಿರಬೇಕು? ಮನೀಶ್ ಥರ ಇರಬೇಕು’ ಎಂದು ಘೋಷಣೆಗಳು ಮತ ಎಣಿಕೆ ಕೇಂದ್ರದ ಸುತ್ತ ಮಾರ್ದನಿಸಿತು.