ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಾದ ಗೋಕಾಕ, ಕಾಗವಾಡ, ಅಥಣಿ, ಯಲ್ಲಾಪುರ, ವಿಜಯನಗರ, ರಾಣೆಬೆನ್ನೂರು, ಹಿರೆಕೇರೂರು, ಹುಣಸೂರು, ಕೆ.ಆರ್.ಪೇಟೆ, ಚಿಕ್ಕಬಳ್ಳಾಪುರ, ಹೊಸಕೋಟೆ, ಮಹಾಲಕ್ಷ್ಮಿ ಲೇಜೌಟ್, ಕೆ.ಆರ್.ಪುರ, ಶಿವಾಜಿನಗರ, ಯಶವಂತಪುರ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೂ ಮತದಾನ ನಡೆಯಲಿದೆ. .<p>ಸಿವೋಟರ್ ಸಮೀಕ್ಷೆ ಪ್ರಕಾರ ಬಿಜೆಪಿಗೆ 9ರಿಂದ 12, ಕಾಂಗ್ರೆಸ್ಗೆ 3ರಿಂದ 6 ಮತ್ತು ಜೆಡಿಎಸ್ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಲಿದೆ. ಈ ಮಾಹಿತಿಯನ್ನು ಟಿವಿ9 ಸುದ್ದಿ ವಾಹಿನಿ ಪ್ರಸಾರ ಮಾಡಿದೆ.</p> .<p>ಪಬ್ಲಿಕ್ ಟಿವಿ ಸುದ್ದಿ ವಾಹಿನಿ ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿಗೆ 8–10, ಕಾಂಗ್ರೆಸ್ಗೆ 3–5, ಜೆಡಿಎಸ್ಗೆ 1–2, ಇತರರಿಗೆ 0–1 ಸ್ಥಾನಗಳಲ್ಲಿ ಮುನ್ನಡೆ ಸಾಧ್ಯ.</p> .<p>ಜೆಡಿಎಸ್ ಸಮೀಕ್ಷೆ– ಬಿಜೆಪಿ 5–6, ಕಾಂಗ್ರೆಸ್ 5–6, ಜೆಡಿಎಸ್ 4–5, ಇತರರು 0–1. (ಮಾಹಿತಿ ಸುವರ್ಣ ವಾಹಿನಿ)</p> .<p>ಬಿಜೆಪಿ ಸಮೀಕ್ಷೆ: ಬಿಜೆಪಿ 10–12, ಕಾಂಗ್ರೆಸ್ 2–4, ಜೆಡಿಎಸ್ 1–2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಲಿದ್ದಾರೆ.</p> .<p>ಶಿವಾಜಿನಗರ: ಬಿಜೆಪಿ–ಕಾಂಗ್ರೆಸ್ ಸಮಬಲದ ಹೋರಾಟ</p> .<p>ಕೆ.ಆರ್.ಪೇಟೆ: ಬಿಜೆಪಿ ಮತ್ತು ಜೆಡಿಎಸ್ ನಡುವೆ ಸಮಬಲದ ಹೋರಾಟ. </p> .<p>ಹೊಸಕೋಟೆ– ಎಂಟಿಬಿ ನಾಗರಾಜ್ ಮುನ್ನಡೆ</p> .<p>ಕಾಗವಾಡ– ಕಾಂಗ್ರೆಸ್ನ ರಾಜು ಕಾಗೆ ಮುನ್ನಡೆ</p> .<p>ವಿಜಯನಗರದಲ್ಲಿ ಆನಂದ್ಸಿಂಗ್ ಮುನ್ನಡೆ ಸಾಧ್ಯತೆ.</p> .<p>ಗೋಕಾಕ– ರಮೇಶ ಜಾರಕಿಹೊಳಿ <br /> ಅಥಣಿ– ಮಹೇಶ್ ಕುಮಠಳ್ಳಿ</p> .<p>ಮಹಾಲಕ್ಷ್ಮೀ ಲೇಔಟ್– ಗೋಪಾಲಯ್ಯ,<br /> ಕೆ.ಆರ್.ಪುರಂ– ಭೈರತಿ ಬಸವರಾಜ್.</p> .<p>ಹಿರೇಕೆರೂರು– ಬಿ.ಸಿ.ಪಾಟೀಲ್, ಯಲ್ಲಾಪುರ– ಶಿವರಾಮ ಹೆಬ್ಬಾರ್, ಯಶವಂತಪುರ– ಸೋಮಶೇಖರ್.<br /> </p> .<p>ಉಪಚುನಾವಣೆ 2019. ಸಂಜೆ 5 ಗಂಟೆಗೆ ಶೇಕಡಾವಾರು ಮತದಾನ ಪ್ರಮಾಣ. <br /> ರಾಣೆಬೆನ್ನೂರು ಶೇ 67.92, ಹಿರೇಕೆರೂರು ಶೇ 72.42.</p> .<p>ಹೊಸಕೋಟೆ ವಿಧಾನಸಭಾ ಕ್ಷೇತ್ರ ಉಪಚುನಾವಣೆ. ಸಂಜೆ 5.00ರ ವೇಳೆಗೆ ಶೇ 76.19 ರಷ್ಟು ಮತದಾನ.</p> .<p>ಬೆಂಗಳೂರಿನ ಕೆ.ಆರ್.ಪುರಂ ಕ್ಷೇತ್ರದ ದೇವಸಂದ್ರ ವಾರ್ಡ್ ಬೂತ್ ಬಳಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ.</p> <p>ಕಾಂಗ್ರೇಸ್ ಎಜೆಂಟ್ರನ್ನು ಬೂತ್ ಒಳಗೆ ಬಿಡದಂತೆ ಕಾರ್ಪೊರೇಟರ್ ತಾಕೀತು ಮಾಡಿದ್ದರು ಎನ್ನಲಾಗಿದೆ. ಇದರಿಂದಾಗಿ ವಾರ್ಡ್ ಬಳಿ ಕೆಲ ಕಾಲ ಬಿಗುವಿನ ವಾತವಾರಣ ನಿರ್ಮಾಣವಾಗಿತ್ತು.</p> <p>ಪೊಲೀಸರು ಗುಂಪು ಚದುರಿಸಿ ಅಗತ್ಯ ಬಂದೋಬಸ್ತ್ ಒದಗಿಸಿದರು. ನಂತರ ಪರಿಸ್ಥಿತಿ ತಿಳಿಯಾಯಿತು.</p> .<p>ಕೆ.ಆರ್.ಪೇಟೆ (ಮಂಡ್ಯ ಜಿಲ್ಲೆ) ಉಪಚುನಾವಣೆ. ಸಂಜೆ 5 ಗಂಟೆ ವೇಳೆಗೆ ಶೇ 75.87ರಷ್ಟು ಮತದಾನ.</p> .<p>ಹುಣಸೂರು ವಿಧಾನಸಭೆ ಉಪಚುನಾವಣೆ 2019. ಸಂಜೆ 5.00 ಗಂಟೆವರೆಗೆ ಶೇ 74.47 ಮತದಾನವಾಗಿದೆ.</p> .<p>ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ -2019<br /> ಮಧ್ಯಾಹ್ನ 5 ಗಂಟೆಯವರೆಗೆ ಶೇ 79.8 ರಷ್ಟು ಮತದಾನವಾಗಿದೆ.</p> .<p>ಬೆಳಗಾವಿ ಜಿಲ್ಲೆಯ ವಿವಿಧೆಡೆ ಸಂಜೆ 5ರ ವೇಳೆಗೆ ಉಪಚುನಾವಣೆ ಮತದಾನ ಸರಾಸರಿ ಪ್ರಮಾಣ. ಅಥಣಿ ಶೇ 70.73, ಕಾಗವಾಡ ಶೇ 69.76, ಗೋಕಾಕ ಶೇ 66.64</p> .<p>ಕೆ.ಆರ್.ಪೇಟೆ ತಾಲ್ಲೂಕು ಚೌಡೇನಹಳ್ಳಿಯಲ್ಲಿ ವರನೊಬ್ಬ ಮತಚಲಾಯಿಸಿದ್ದು ಎಲ್ಲರ ಗಮನ ಸೆಳೆಯಿತು.</p> .<p>ಚಿಕ್ಕಬಳ್ಳಾಪುರ ನಗರಸಭೆ ಆವರಣದಲ್ಲಿರುವ ಮತಗಟ್ಟೆಯಲ್ಲಿ ವೀರಪ್ಪ ಮೊಯಿಲಿ ಅವರು ಪತ್ನಿ ಮಾಲತಿ ದಂಪತಿ ಮತ ಚಲಾಯಿಸಿದರು.</p> .<p><strong>ಚಿಕ್ಕಬಳ್ಳಾಪುರ: </strong>ಗರ್ಭಿಣಿಯೊಬ್ಬರು ಹೆರಿಗೆ ನೋವಿನ ನಡುವೆಯೂ ಮತಗಟ್ಟೆಗೆ ಬಂದು ಉಪ ಚುನಾವಣೆಯಲ್ಲಿ ಮತ ಚಲಾಯಿಸುವ ಮೂಲಕ ಮತದಾರರಿಗೆ ಮಾದರಿಯಾದ ಘಟನೆ ತಾಲ್ಲೂಕಿನ ದ್ವಾರಗಾನಹಳ್ಳಿಯಲ್ಲಿ ನಡೆದಿದೆ. <br /> ದ್ವಾರಗಾನಹಳ್ಳಿ ನಿವಾಸಿ ಆರ್.ವಿ.ಝಾನ್ಸಿ ಅವರಿಗೆ ಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ನೋವಿನ ನಡುವೆಯೂ ಮತಗಟ್ಟೆ ಸಂಖ್ಯೆ 95ಕ್ಕೆ ತೆರಳಿ ಮತ ಚಲಾಯಿಸಿದ ಝಾನ್ಸಿ ಅವರು ಬಳಿಕ ಆಸ್ಪತ್ರೆಗೆ ಹೋಗಿ ದಾಖಲಾದರು.</p> .<p><strong>ಚಿಕ್ಕಬಳ್ಳಾಪುರ:</strong> ತಾಲ್ಲೂಕಿನ ರೆಡ್ಡಿಗೊಲ್ಲರಹಳ್ಳಿಯ ಮತಗಟ್ಟೆ ಸಂಖ್ಯೆ 43ರಲ್ಲಿ ಕಾಂಗ್ರೆಸ್ ಏಜೆಂಟ್ ಆಗಿದ್ದ ಬಿ.ಎ.ಚೇತನ್ ಕುಮಾರ್ ಅವರನ್ನು ಕ್ರಿಮಿನಲ್ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದಾರೆ ಎಂಬ ಕಾರಣಕ್ಕೆ ಗ್ರಾಮಾಂತರ ಪೊಲೀಸ್ ಠಾಣೆ ಎಸ್ಐ ಚೇತನ್ ಗೌಡ ಅವರು ಮತಗಟ್ಟೆಯಿಂದ ಹೊರಗೆ ಕಳುಹಿಸಿದರು.</p> <p>ಇದರಿಂದಾಗಿ ಮತಗಟ್ಟೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಮತಗಟ್ಟೆಗೆ ಬಂದ ಎಸ್ಪಿ ಅಭಿನವ್ ಖರೆ ಅವರು ಗೊಂದಲ ತಿಳಿಗೊಳಿಸಿ ಚೇತನ್ ಕುಮಾರ್ ಅವರಿಗೆ ಮತಗಟ್ಟೆಯಲ್ಲಿ ಏಜೆಂಟ್ ಆಗಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಿದರು.</p> .<p>ಹುಣಸೂರು ವಿಧಾನಸಭೆ ಉಪಚುನಾವಣೆ. ಮಧ್ಯಾಹ್ನ 3.00 ಗಂಟೆವರೆಗೆ ಶೇ 57.44 ಮತದಾನ ನಡೆದಿದೆ.</p> .<p>ಬೆಳಗಾವಿ ಜಿಲ್ಲೆಯಲ್ಲಿ ಉಪ ಚುನಾವಣೆ. ಮಧ್ಯಾಹ್ನ 3ರವೆಗಿನ ಮತದಾನ ಪ್ರಮಾಣ.</p> <p>ಅಥಣಿ- ಶೇ 56.05<br /> ಕಾಗವಾಡ- ಶೇ 51.41<br /> ಗೋಕಾಕ- ಶೇ 53.30</p> .<p>ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಶೇ 59.86 ಮತದಾನ ನಡೆದಿದೆ</p> .<p>ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ -2019.<br /> ಮಧ್ಯಾಹ್ನ 3 ಗಂಟೆಯವರೆಗೆ ಶೇ 60.43 ರಷ್ಟು ಮತದಾನವಾಗಿದೆ.</p> .<p>ಯಲ್ಲಾಪುರ ಕ್ಷೇತ್ರದಲ್ಲಿ 3 ಗಂಟೆಯವರೆಗೆ ಶೇ 56.21 ಮತದಾನ</p> .<p>ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ: ಮಧ್ಯಾಹ್ನ 1.00 ಗಂಟೆಯವರೆಗೆ ಶೇಕಡಾ 33.24% ರಷ್ಟು ಮತದಾನವಾಗಿದೆ.</p> .<p><em><strong>ಇದನ್ನೂ ಓದಿ:</strong> </em><a href="https://www.prajavani.net/stories/stateregional/the-sakhi-booth-karnataka-bypoll-2019-women-polling-officer-687789.html"><strong>ಏನಿದು ಸಖಿ ಮತಗಟ್ಟೆ: ಈ ಮತಗಟ್ಟೆಗಳಲ್ಲಿ ಮತದಾನ ಬಿರುಸು</strong></a></p> .<p><em><strong>ಇದನ್ನೂ ಓದಿ: </strong></em><a href="https://www.prajavani.net/stories/stateregional/bsy-future-decided-in-this-by-election-687735.html"><strong>ಉಪ ಚುನಾವಣೆ | ಇಂದು ಮತದಾನ: ಬಿ.ಎಸ್.ಯಡಿಯೂರಪ್ಪ ಭವಿಷ್ಯ ನಿರ್ಣಯ</strong></a></p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>