1959ರಲ್ಲಿ ಹೊಸಪೇಟೆಯಲ್ಲಿ ಜನಿಸಿದ ನಾಗರಾಜ್ ಹವಾಲ್ದಾರ್ ತಮ್ಮ ಇಡೀ ಬದುಕನ್ನು ಹಿಂದೂಸ್ತಾನಿ ಸಂಗೀತಕ್ಕಾಗಿ ಮೀಸಲಿಟ್ಟವರು. ಅವರ ಕನ್ನಡ ವಚನ ಮತ್ತು ಕನ್ನಡ ಖಯಾಲ್ ಜನಮನ ಸೂರೆಗೊಂಡಿವೆ. ಭಗವದ್ಗೀತೆಯ 18 ಅಧ್ಯಾಯಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವ ರೀತಿ ಹಾಡಿ, ಧ್ವನಿ ಸಾಂದ್ರಿಕೆ ರೂಪದಲ್ಲಿ ಹೊರತಂದಿದ್ದಾರೆ. ನಾಲ್ಕು ದಶಕಗಳಿಂದ ದೇಶ, ವಿದೇಶಗಳಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾರೆ.