ಈದ್-ಅಲ್-ಅದಾ ಎ೦ತಲೂ ಕರೆಯಲಾಗುವ ಬಕ್ರೀದ್ ಹಬ್ಬ ತ್ಯಾಗ–ಬಲಿದಾನದ ಸಂಕೇತ. ಈ ಶುಭದಿನದ೦ದು ಕುರಿಯೊ೦ದನ್ನು ಬಲಿ ನೀಡಲಾಗುತ್ತದೆ. ಈ ಬಲಿಗೆ ವಿಶೇಷ ಧಾರ್ಮಿಕ ವಿಧಿ–ವಿಧಾನಗಳಿವೆ. ಬಲಿಪಶುವಿನ ಮಾ೦ಸವನ್ನು ಬಡವರಿಗೆ ಹ೦ಚುವುದು ಈ ಹಬ್ಬದ ಪ್ರಮುಖ ಅ೦ಶ. ಈ ಹಬ್ಬ ಭೂರಿಭೋಜನದ ಸಡಗರದ ಜೊತೆಗೆ ಏಕತೆ ಹಾಗೂ ಭ್ರಾತೃತ್ವದ ಸಂದೇಶವನ್ನೂ ಒಳಗೊಂಡಿದೆ. ಈ ಸಂಭ್ರಮದ ಆಚರಣೆಗಾಗಿ ನಾಲ್ಕಾರು ದಿನಗಳ ಮುಂಚೆಯೇ ನಗರದ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸೇರಿದ್ದ ಮಾರುವವನ ಹಾಗೂ ಕೊಳ್ಳುವವನ ಸಂತಸದ ಚಹರೆಗಳನ್ನು ರಂಜು ಪಿ. ಸೆರೆ ಹಿಡಿದಿದ್ದಾರೆ.