<p>`ಡಿವಿಜಿ ಪದತಲದಲ್ಲಿ ಕುಳಿತು ಅನೇಕ ಜೀವನಪಾಠಗಳನ್ನು ಕಲಿತಿದ್ದೇನೆ. ನಮ್ಮ ಹಿರಿಯರ ಸಾಧನೆಗಳ ಬಗ್ಗೆ ತಿಳಿದಿದ್ದೇನೆ. ಅವರು ಕಲಿಸಿದ ಪಾಠಗಳು ಜೀವನ ಪಾಠಗಳಾಗಿವೆ. ಅವರ ಕಗ್ಗ ನಮ್ಮ ಬಾಳಿನ ಕೈದೀಪ. ದಿನಕ್ಕೊಂದು ಕಗ್ಗದ ಪದ್ಯ ಓದಿದರೆ ಆತ್ಮ ಉದ್ಧಾರವಾದಂತೆ...~<br /> <br /> ವೀಯೆಲ್ಲೆನ್-ನಿರ್ಮಾಣ್-ಪುರಂದರ ಪ್ರತಿಷ್ಠಾನದ ಆಶ್ರಯದಲ್ಲಿ ಇತ್ತೀಚೆಗೆ ಡಿವಿಜಿ ಅವರ 125ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾಸ್ಟರ್ ಹಿರಣ್ಣಯ್ಯ ಹೇಳಿದ ಮಾತುಗಳಿವು. ತಾವು ಕಂಡಂತೆ ಡಿವಿಜಿ ಅವರನ್ನು ಹಿರಣ್ಣಯ್ಯ ಬಣ್ಣಿಸಿದ್ದು ಹೀಗೆ. <br /> <br /> ಮುಖ್ಯ ಉಪನ್ಯಾಸಕ ಪ್ರೊ.ಜಿ.ಅಶ್ವತ್ಥನಾರಾಯಣ `ಡಿವಿಜಿ ವನಸುಮದ ಕವಿ. ಅವರು ಕನ್ನಡಿಗರಿಗೆ ಸಂಸ್ಕೃತ, ಧಾರ್ಮಿಕ ಸಾಹಿತ್ಯವನ್ನೂ ಉಪನಿಷತ್ತಿನ ಗೀತೆಯ ಸಾರವನ್ನೂ ಕಗ್ಗದಲ್ಲಿ ಇಳಿಸಿ ಜನಕ್ಕೆ ನೀಡಿದ ಭಗೀರಥ ಕವಿ ಎಂದು ಕೊಂಡಾಡಿದರು. <br /> </p>.<p>ಗಾಯಕ ಶಂಕರ್ ಶಾನಭೋಗ್ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಹಾಗೂ ಮರುಳ ಮುನಿಯನ ಕಗ್ಗದ ಪದ್ಯಗಳನ್ನು ಹಾಡಿ ರಂಜಿಸಿದರು. ಪ್ರತಿಷ್ಠಾನದ ಅಧ್ಯಕ್ಷ ವಿ.ಲಕ್ಷ್ಮಿನಾರಾಯಣ್, ಸುಷ್ಮಾ ಮೂರ್ತಿ, ರವೀಂದ್ರ ಗಣ್ಯರ ಮಾತುಗಳಿಗೆ ಕಿವಿಯಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಡಿವಿಜಿ ಪದತಲದಲ್ಲಿ ಕುಳಿತು ಅನೇಕ ಜೀವನಪಾಠಗಳನ್ನು ಕಲಿತಿದ್ದೇನೆ. ನಮ್ಮ ಹಿರಿಯರ ಸಾಧನೆಗಳ ಬಗ್ಗೆ ತಿಳಿದಿದ್ದೇನೆ. ಅವರು ಕಲಿಸಿದ ಪಾಠಗಳು ಜೀವನ ಪಾಠಗಳಾಗಿವೆ. ಅವರ ಕಗ್ಗ ನಮ್ಮ ಬಾಳಿನ ಕೈದೀಪ. ದಿನಕ್ಕೊಂದು ಕಗ್ಗದ ಪದ್ಯ ಓದಿದರೆ ಆತ್ಮ ಉದ್ಧಾರವಾದಂತೆ...~<br /> <br /> ವೀಯೆಲ್ಲೆನ್-ನಿರ್ಮಾಣ್-ಪುರಂದರ ಪ್ರತಿಷ್ಠಾನದ ಆಶ್ರಯದಲ್ಲಿ ಇತ್ತೀಚೆಗೆ ಡಿವಿಜಿ ಅವರ 125ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾಸ್ಟರ್ ಹಿರಣ್ಣಯ್ಯ ಹೇಳಿದ ಮಾತುಗಳಿವು. ತಾವು ಕಂಡಂತೆ ಡಿವಿಜಿ ಅವರನ್ನು ಹಿರಣ್ಣಯ್ಯ ಬಣ್ಣಿಸಿದ್ದು ಹೀಗೆ. <br /> <br /> ಮುಖ್ಯ ಉಪನ್ಯಾಸಕ ಪ್ರೊ.ಜಿ.ಅಶ್ವತ್ಥನಾರಾಯಣ `ಡಿವಿಜಿ ವನಸುಮದ ಕವಿ. ಅವರು ಕನ್ನಡಿಗರಿಗೆ ಸಂಸ್ಕೃತ, ಧಾರ್ಮಿಕ ಸಾಹಿತ್ಯವನ್ನೂ ಉಪನಿಷತ್ತಿನ ಗೀತೆಯ ಸಾರವನ್ನೂ ಕಗ್ಗದಲ್ಲಿ ಇಳಿಸಿ ಜನಕ್ಕೆ ನೀಡಿದ ಭಗೀರಥ ಕವಿ ಎಂದು ಕೊಂಡಾಡಿದರು. <br /> </p>.<p>ಗಾಯಕ ಶಂಕರ್ ಶಾನಭೋಗ್ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಹಾಗೂ ಮರುಳ ಮುನಿಯನ ಕಗ್ಗದ ಪದ್ಯಗಳನ್ನು ಹಾಡಿ ರಂಜಿಸಿದರು. ಪ್ರತಿಷ್ಠಾನದ ಅಧ್ಯಕ್ಷ ವಿ.ಲಕ್ಷ್ಮಿನಾರಾಯಣ್, ಸುಷ್ಮಾ ಮೂರ್ತಿ, ರವೀಂದ್ರ ಗಣ್ಯರ ಮಾತುಗಳಿಗೆ ಕಿವಿಯಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>