<p>ಆರ್ಥಿಕವಾಗಿ ಹಿಂದುಳಿದ ಹಾಗೂ ದೈಹಿಕ ಅಸಮರ್ಥತೆಯಿಂದ ಶಿಕ್ಷಣ ಸೇರಿದಂತೆ ಉದ್ಯೋಗ ಅವಕಾಶಗಳಿಂದ ವಂಚಿತರಾಗುತ್ತಿರುವ ಮಂದಿಗಾಗಿ ಉನ್ನತಿ ಸಂಸ್ಥೆಯು 70 ದಿನಗಳ ಉಚಿತ ತರಬೇತಿ ಆರಂಭಿಸಿದೆ. <br /> <br /> ಶಿಕ್ಷಣ ಪಡೆಯಲಾಗದ, ಪಡೆದರೂ ಉದ್ಯೋಗ ಸಿಗದೆ ಅಸಹಾಯಕರಾಗಿರುವ ಅಥವಾ ಉದ್ಯೋಗಕ್ಕಾಗಿ ಬೀದಿ ಬೀದಿ ಅಲೆಯುವ ಲಕ್ಷಾಂತರ ಮಂದಿ ನಮ್ಮ ನಡುವೆ ಇದ್ದಾರೆ. ಅದರಲ್ಲೂ ದೈಹಿಕವಾಗಿ ಅಸಮರ್ಥರಾಗಿರುವ, ಬೇರೆಯವರನ್ನು ಅವಲಂಬಿಸಿರುವ ವಿದ್ಯಾರ್ಥಿಗಳಿಗಾಗಿ ಈ ತರಬೇತಿ ಆಯೋಜಿಸಲಾಗಿದೆ.<br /> <br /> ಇಲ್ಲಿ ಮಾರುಕಟ್ಟೆ ವ್ಯವಹಾರ, ಕಚೇರಿ ನಿರ್ವಹಣೆ, ಅತಿಥಿ ಸತ್ಕಾರ, ವಾಹನ ಚಾಲನಾ ತರಬೇತಿ, ಹೊಲಿಗೆ ತರಬೇತಿ, ಇಂಡಸ್ಟ್ರಿಯಲ್ ಪೇಂಟಿಂಗ್ ಹಾಗೂ ಕಂಪ್ಯೂಟರ್ ತರಬೇತಿ ನೀಡಲಾಗುತ್ತದೆ.<br /> <br /> ತರಬೇತಿ ಪಡೆದವರಿಗೆ ಉದ್ಯೋಗದ ಅವಕಾಶ ಕಲ್ಪಿಸಿಕೊಡಲಿದೆ. ಎಪ್ಪತ್ತು ದಿನಗಳಂತೆ ಒಂದು ತಂಡಕ್ಕೆ ತರಬೇತಿ ನೀಡಲಾಗುತ್ತದೆ. ಈಗಾಗಲೇ 2530 ಮಂದಿ ತರಬೇತಿ ಪಡೆದಿದ್ದಾರೆ ಎಂದು ಮಾಹಿತಿ ನೀಡುತ್ತಾರೆ ಟ್ರಸ್ಟೀ ರಮೇಶ ಸ್ವಾಮಿ.<br /> <br /> ತರಬೇತಿಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ಉಚಿತ ವಾಸ್ತವ್ಯ ಹಾಗೂ ಊಟದ ವ್ಯವಸ್ಥೆಯನ್ನೂ ಸಂಸ್ಥೆ ಮಾಡಿದೆ. 18 ವರ್ಷ ಮೇಲ್ಪಟ್ಟವರಿಗೆ ಅವಕಾಶ. ಯಾವುದೇ ವಿದ್ಯಾರ್ಹತೆಯಿಲ್ಲ.<br /> <br /> ಶ್ರೀ ಗರುವಾಯೂರಪ್ಪ ಭಜನ್ ಸಮಾಜ್ ಟ್ರಸ್ಟ್ ಆಯೋಜಿಸುವ `ಉತ್ಸವ್~, `ಶಿಕ್ಷಾ~, ಕಾರ್ಯಕ್ರಮಗಳಿಂದ ಬರುವ ಆದಾಯವನ್ನು ಉನ್ನತಿ ಸಂಸ್ಥೆಗೂ ವಿನಿಯೋಗಿಸಲಾಗುತ್ತದೆ. <br /> <br /> 2003ರಲ್ಲಿ ಆರಂಭವಾದ ಉನ್ನತಿ ಸಂಸ್ಥೆಯು ಅಂದಿನಿಂದ ಇಂದಿನವರೆಗೆ ಹಿಂದುಳಿದ, ದೈಹಿಕ ಅಸಮರ್ಥರಿರುವ ನಿರುದ್ಯೋಗಿಗಳಿಗಾಗಿ ಉಚಿತ ತರಬೇತಿ ನೀಡುವ ಕೈಂಕರ್ಯ ಮಾಡಿಕೊಂಡು ಬಂದಿದೆ. <br /> <br /> ಜುಲೈ 7ರಿಂದ ಸಂದರ್ಶನ ಆಯೋಜಿಸಿದ್ದು, ಆಸಕ್ತರು ಕರೆ ಮಾಡುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು. <br /> ಮಾಹಿತಿ ಹಾಗೂ ನೋಂದಣಿಗೆ: 2538 4443, 2538 4642, 98863 28649. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆರ್ಥಿಕವಾಗಿ ಹಿಂದುಳಿದ ಹಾಗೂ ದೈಹಿಕ ಅಸಮರ್ಥತೆಯಿಂದ ಶಿಕ್ಷಣ ಸೇರಿದಂತೆ ಉದ್ಯೋಗ ಅವಕಾಶಗಳಿಂದ ವಂಚಿತರಾಗುತ್ತಿರುವ ಮಂದಿಗಾಗಿ ಉನ್ನತಿ ಸಂಸ್ಥೆಯು 70 ದಿನಗಳ ಉಚಿತ ತರಬೇತಿ ಆರಂಭಿಸಿದೆ. <br /> <br /> ಶಿಕ್ಷಣ ಪಡೆಯಲಾಗದ, ಪಡೆದರೂ ಉದ್ಯೋಗ ಸಿಗದೆ ಅಸಹಾಯಕರಾಗಿರುವ ಅಥವಾ ಉದ್ಯೋಗಕ್ಕಾಗಿ ಬೀದಿ ಬೀದಿ ಅಲೆಯುವ ಲಕ್ಷಾಂತರ ಮಂದಿ ನಮ್ಮ ನಡುವೆ ಇದ್ದಾರೆ. ಅದರಲ್ಲೂ ದೈಹಿಕವಾಗಿ ಅಸಮರ್ಥರಾಗಿರುವ, ಬೇರೆಯವರನ್ನು ಅವಲಂಬಿಸಿರುವ ವಿದ್ಯಾರ್ಥಿಗಳಿಗಾಗಿ ಈ ತರಬೇತಿ ಆಯೋಜಿಸಲಾಗಿದೆ.<br /> <br /> ಇಲ್ಲಿ ಮಾರುಕಟ್ಟೆ ವ್ಯವಹಾರ, ಕಚೇರಿ ನಿರ್ವಹಣೆ, ಅತಿಥಿ ಸತ್ಕಾರ, ವಾಹನ ಚಾಲನಾ ತರಬೇತಿ, ಹೊಲಿಗೆ ತರಬೇತಿ, ಇಂಡಸ್ಟ್ರಿಯಲ್ ಪೇಂಟಿಂಗ್ ಹಾಗೂ ಕಂಪ್ಯೂಟರ್ ತರಬೇತಿ ನೀಡಲಾಗುತ್ತದೆ.<br /> <br /> ತರಬೇತಿ ಪಡೆದವರಿಗೆ ಉದ್ಯೋಗದ ಅವಕಾಶ ಕಲ್ಪಿಸಿಕೊಡಲಿದೆ. ಎಪ್ಪತ್ತು ದಿನಗಳಂತೆ ಒಂದು ತಂಡಕ್ಕೆ ತರಬೇತಿ ನೀಡಲಾಗುತ್ತದೆ. ಈಗಾಗಲೇ 2530 ಮಂದಿ ತರಬೇತಿ ಪಡೆದಿದ್ದಾರೆ ಎಂದು ಮಾಹಿತಿ ನೀಡುತ್ತಾರೆ ಟ್ರಸ್ಟೀ ರಮೇಶ ಸ್ವಾಮಿ.<br /> <br /> ತರಬೇತಿಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ಉಚಿತ ವಾಸ್ತವ್ಯ ಹಾಗೂ ಊಟದ ವ್ಯವಸ್ಥೆಯನ್ನೂ ಸಂಸ್ಥೆ ಮಾಡಿದೆ. 18 ವರ್ಷ ಮೇಲ್ಪಟ್ಟವರಿಗೆ ಅವಕಾಶ. ಯಾವುದೇ ವಿದ್ಯಾರ್ಹತೆಯಿಲ್ಲ.<br /> <br /> ಶ್ರೀ ಗರುವಾಯೂರಪ್ಪ ಭಜನ್ ಸಮಾಜ್ ಟ್ರಸ್ಟ್ ಆಯೋಜಿಸುವ `ಉತ್ಸವ್~, `ಶಿಕ್ಷಾ~, ಕಾರ್ಯಕ್ರಮಗಳಿಂದ ಬರುವ ಆದಾಯವನ್ನು ಉನ್ನತಿ ಸಂಸ್ಥೆಗೂ ವಿನಿಯೋಗಿಸಲಾಗುತ್ತದೆ. <br /> <br /> 2003ರಲ್ಲಿ ಆರಂಭವಾದ ಉನ್ನತಿ ಸಂಸ್ಥೆಯು ಅಂದಿನಿಂದ ಇಂದಿನವರೆಗೆ ಹಿಂದುಳಿದ, ದೈಹಿಕ ಅಸಮರ್ಥರಿರುವ ನಿರುದ್ಯೋಗಿಗಳಿಗಾಗಿ ಉಚಿತ ತರಬೇತಿ ನೀಡುವ ಕೈಂಕರ್ಯ ಮಾಡಿಕೊಂಡು ಬಂದಿದೆ. <br /> <br /> ಜುಲೈ 7ರಿಂದ ಸಂದರ್ಶನ ಆಯೋಜಿಸಿದ್ದು, ಆಸಕ್ತರು ಕರೆ ಮಾಡುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು. <br /> ಮಾಹಿತಿ ಹಾಗೂ ನೋಂದಣಿಗೆ: 2538 4443, 2538 4642, 98863 28649. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>