<p>ದೀಪಾವಳಿ ಹಬ್ಬಕ್ಕೆ ಅನೇಕ ಪೌರಾಣಿಕ ಹಿನ್ನೆಲೆಗಳು ಇವೆ. ಅವುಗಳಲ್ಲಿ ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ಘಳಿಗೆಯೂ ಪ್ರಮುಖವಾದದು.<br /> <br /> ಶ್ರೀಮನ್ನಾರಾಯಣನು ವರಹಾವತಾರವನ್ನೆತ್ತಿ ಭೂಮಿಯನ್ನು ಉದ್ಧರಿಸಿದ ಬಳಿಕ ಅವನ ಶರೀರದಿಂದ ಬಿದ್ದ ಒಂದು ತೊಟ್ಟು ಬೆವರು ಅಸುರಾಕೃತಿ ಪಡೆಯಿತು. ಅದೇ ನರಕಾಸುರನಂತೆ. <br /> <br /> ಆತ ಪ್ರಾಗ್ಜೋತಿಷಪುರವೆಂಬ ಪಟ್ಟಣಕ್ಕೆ ದೊರೆಯಾಗಿ ದೇವತೆಗಳಿಗೆ ತೊಂದರೆ ಕೊಡಲು ಆರಂಭಿಸಿದ. ವರುಣನ ಛತ್ರವನ್ನು ಅಪಹರಿಸಿ, ಅಲ್ಲಿಗೆ ಸಹಸ್ರಾರು ದೇವ, ಸಿದ್ಧ, ಅಪ್ಸರೆಯರನ್ನು, ಬ್ರಹ್ಮನ ಮಗಳಾದ ಚತುದರ್ಶಿಯನ್ನು ಕರೆದೊಯ್ದ. ಲೋಕಕ್ಷೇಮಕ್ಕಾಗಿ ಅವತರಿಸಿದ ಶ್ರೀಕೃಷ್ಣ ಇವನ ಉಪಟಳವನ್ನು ಕೊನೆಗಾಣಿಸುತ್ತಾನೆ. <br /> <br /> ನರಕಾಸುರನನ್ನು ಕೊಂದಿದ್ದು ಅಶ್ವಯುಜ ಕೃಷ್ಣ ಚತುದರ್ಶಿಯ ಕಗ್ಗತ್ತಲಿನಲ್ಲಿ. ನರಕಾಸುರನ ತಾಯಿಯ ಕೋರಿಕೆ ಮೇರೆಗೆ ನರಕಾಸುರನನ್ನು ಎಲ್ಲರೂ ನೆನಪಿಸಿಕೊಳ್ಳಲಿ ಎಂದು ಶ್ರೀಕೃಷ್ಣ ಈ ಹಬ್ಬವನ್ನು ಸ್ಥಾಯಿಗೊಳಿಸಿದ ಎಂಬ ಪ್ರತೀತಿ ಇದೆ. ಅಂದು ನರಕಾಸುರನ ಆತ್ಮಕ್ಕೆ ಶಾಂತಿ ಕೋರಿ ದೀಪ ಹಚ್ಚಲಾಗುತ್ತದೆ. ಆ ದಿನದ ನೆನಪೇ ನರಕ ಚತುದರ್ಶಿ. <br /> <br /> ಪುರಾಣಗಳಲ್ಲಿ ಬರುವ ಈ ನರಕಾಸುರನ ಕಥೆ ಧ್ವನಿಸುವ ಅರ್ಥ ಗಹನವಾಗಿದೆ. ನರಕಾಸುರನೆಂದರೆ ನರಕಕ್ಕೆ ಎಳೆದೊಯ್ಯುವ ರಕ್ಕಸ ಪ್ರವೃತ್ತಿ ಎಂದು. ನೈತಿಕ ಭಯವಿಲ್ಲದಿದ್ದರೆ ನರಕವೇ ಗತಿ.<br /> <br /> ಚತುದರ್ಶಿಯೆಂದರೆ ವಿದ್ಯೆ ಎಂಬ ಅರ್ಥವುಂಟು. ಮುಂಗಾರು ಬೆಳೆ ಕೊಯ್ಲಿಗೆ ಬರುವ ಕಾಲಕ್ಕೆ, ಅಶ್ವಯುಜ ಮಾಸದ ಕೊನೆಯ ಎರಡು ದಿನಗಳು ಅಥವಾ ಕಾರ್ತೀಕ ಮಾಸದ ಮೊದಲ ದಿನ ಹಬ್ಬ ಆಚರಿಸಲಾಗುತ್ತದೆ.<br /> <br /> ದೀಪಾವಳಿಯ ಅಮಾವಾಸ್ಯೆಯನ್ನು ದೀವಳಿಗೆ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಆ ದಿನ ಪಿತೃಗಳಿಗೆ ತರ್ಪಣವನ್ನಿತ್ತು, ಶ್ರಾದ್ಧವಿಧಿಗಳನ್ನು ತೀರಿಸಿ ಜನರು ತಮ್ಮನ್ನು ಅಗಲಿದ ಹಿರಿಯರಿಗೆ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸುವ ಪರಿಪಾಠವಿದೆ. <br /> <br /> ಇನ್ನು ಬೆಂಗಳೂರು ನಗರದಲ್ಲಿ ದೀಪಾವಳಿ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸುತ್ತಾರೆ. ಹೊಸಬಟ್ಟೆ ಧರಿಸಿದ ಮಕ್ಕಳು, ಮನೆಮಂದಿ ಹಾಗೂ ಸ್ನೇಹಿತರೊಂದಿಗೆ ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ. ಮನೆಯಲ್ಲಿ ಲಕ್ಷ್ಮಿಯನ್ನು ಪೂಜಿಸುವುದು ಈ ಹಬ್ಬದ ಮತ್ತೊಂದು ವೈಶಿಷ್ಟ್ಯ. <br /> <br /> ಇದು ಮನೆಯ ಮನದ ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ಹಚ್ಚುವ ಹಬ್ಬ. ಮನೆ ಮನೆಗಳಲ್ಲಿ ಸದಾ ನೆಲೆಸಿರುವಂತೆ ಕೇಳಿಕೊಂಡು ಲಕ್ಷ್ಮಿಯನ್ನು ಆರಾಧಿಸುವ ಸಂಪ್ರದಾಯವಿದೆ. ಮನೆಯ ಅಂಗಳದಲ್ಲಿ ಹಚ್ಚುವ ದೀಪಗಳ ಸಾಲು ಆ ಧನಲಕ್ಷ್ಮಿಗೆ ಸ್ವಾಗತ ಕೋರುತ್ತದೆ ಎಂಬ ನಂಬಿಕೆ ಜನರಲ್ಲಿದೆ. <br /> <br /> ಜೈನಧರ್ಮಿಯರಿಗೂ ದೀಪಾವಳಿ ವಿಶೇಷ ಹಬ್ಬವಾಗಿದೆ. ಭಗವಾನ್ ಮಹಾವೀರರು ನಿರ್ವಾಣ ಹೊಂದಿದ್ದು ಕಾರ್ತೀಕ ಬಹುಳ ಚತುರ್ದಶಿ ರಾತ್ರಿ ಕೊನೆಯಾಗುತ್ತಿರುವಲ್ಲಿ ಸ್ವಾತಿ ನಕ್ಷತ್ರದಲ್ಲಿ. ಶಾಲಿವಾಹನ ಶಕೆಯ ಮಾಸಗಳ ಗಣನೆಯ ಆಧಾರದಂತೆ ಈ ಸಮಯ ಆಶ್ವಯುಜ ಬಹುಳ ತಿಥಿ ಕಳೆದ ಬೆಳಗಿನ ಜಾವದೊಡನೆ ಕೂಡಿ ಬರುತ್ತದೆ. <br /> <br /> ಸುಮಾರು 30ವರ್ಷಗಳ ಕಾಲ ತನ್ನ ಜ್ಞಾನಜ್ಯೋತಿಯಿಂದ ಲೋಕದ ಅಜ್ಞಾನವೆಂಬ ಕತ್ತಲೆಯನ್ನು ನಿವಾರಣೆ ಮಾಡಿದ ಈ ತೀರ್ಥಂಕರನ ಸ್ಮರಣೆ ನಿಮಿತ್ತವಾಗಿ ಈ ದಿನ ದೀಪಗಳನ್ನು ಹತ್ತಿಸುತ್ತಾರೆ. ಉಳಿದಂತೆ ವಿಶೇಷ ಪೂಜೆ ಸಲ್ಲಿಸಿ ಹಬ್ಬ ಆಚರಿಸುತ್ತಾರೆ.<br /> <br /> ಹೀಗೆ ದೀಪಾವಳಿ ಆಚರಣೆ ಆಯಾ ಸಮುದಾಯ, ಸ್ಥಳಗಳಲ್ಲಿ ವಿಶಿಷ್ಟವಾಗಿ ತಮ್ಮ ತಮ್ಮ ನಂಬಿಕೆಯಂತೆ ನಡೆಯುತ್ತದೆ. ಮನಸ್ಸನ್ನು ಆವರಿಸಿರುವ ಕತ್ತಲೆಯನ್ನು ದೂರವಿರಿಸಲು ನಾವು ಹಚ್ಚುವ ದೀಪ ನಮ್ಮ ಬಾಳಿನುದ್ದಕ್ಕೂ ಬೆಳಕು ಚೆಲ್ಲುತ್ತದೆಯೆಂಬ ನಂಬಿಕೆ ನಮ್ಮದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೀಪಾವಳಿ ಹಬ್ಬಕ್ಕೆ ಅನೇಕ ಪೌರಾಣಿಕ ಹಿನ್ನೆಲೆಗಳು ಇವೆ. ಅವುಗಳಲ್ಲಿ ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ಘಳಿಗೆಯೂ ಪ್ರಮುಖವಾದದು.<br /> <br /> ಶ್ರೀಮನ್ನಾರಾಯಣನು ವರಹಾವತಾರವನ್ನೆತ್ತಿ ಭೂಮಿಯನ್ನು ಉದ್ಧರಿಸಿದ ಬಳಿಕ ಅವನ ಶರೀರದಿಂದ ಬಿದ್ದ ಒಂದು ತೊಟ್ಟು ಬೆವರು ಅಸುರಾಕೃತಿ ಪಡೆಯಿತು. ಅದೇ ನರಕಾಸುರನಂತೆ. <br /> <br /> ಆತ ಪ್ರಾಗ್ಜೋತಿಷಪುರವೆಂಬ ಪಟ್ಟಣಕ್ಕೆ ದೊರೆಯಾಗಿ ದೇವತೆಗಳಿಗೆ ತೊಂದರೆ ಕೊಡಲು ಆರಂಭಿಸಿದ. ವರುಣನ ಛತ್ರವನ್ನು ಅಪಹರಿಸಿ, ಅಲ್ಲಿಗೆ ಸಹಸ್ರಾರು ದೇವ, ಸಿದ್ಧ, ಅಪ್ಸರೆಯರನ್ನು, ಬ್ರಹ್ಮನ ಮಗಳಾದ ಚತುದರ್ಶಿಯನ್ನು ಕರೆದೊಯ್ದ. ಲೋಕಕ್ಷೇಮಕ್ಕಾಗಿ ಅವತರಿಸಿದ ಶ್ರೀಕೃಷ್ಣ ಇವನ ಉಪಟಳವನ್ನು ಕೊನೆಗಾಣಿಸುತ್ತಾನೆ. <br /> <br /> ನರಕಾಸುರನನ್ನು ಕೊಂದಿದ್ದು ಅಶ್ವಯುಜ ಕೃಷ್ಣ ಚತುದರ್ಶಿಯ ಕಗ್ಗತ್ತಲಿನಲ್ಲಿ. ನರಕಾಸುರನ ತಾಯಿಯ ಕೋರಿಕೆ ಮೇರೆಗೆ ನರಕಾಸುರನನ್ನು ಎಲ್ಲರೂ ನೆನಪಿಸಿಕೊಳ್ಳಲಿ ಎಂದು ಶ್ರೀಕೃಷ್ಣ ಈ ಹಬ್ಬವನ್ನು ಸ್ಥಾಯಿಗೊಳಿಸಿದ ಎಂಬ ಪ್ರತೀತಿ ಇದೆ. ಅಂದು ನರಕಾಸುರನ ಆತ್ಮಕ್ಕೆ ಶಾಂತಿ ಕೋರಿ ದೀಪ ಹಚ್ಚಲಾಗುತ್ತದೆ. ಆ ದಿನದ ನೆನಪೇ ನರಕ ಚತುದರ್ಶಿ. <br /> <br /> ಪುರಾಣಗಳಲ್ಲಿ ಬರುವ ಈ ನರಕಾಸುರನ ಕಥೆ ಧ್ವನಿಸುವ ಅರ್ಥ ಗಹನವಾಗಿದೆ. ನರಕಾಸುರನೆಂದರೆ ನರಕಕ್ಕೆ ಎಳೆದೊಯ್ಯುವ ರಕ್ಕಸ ಪ್ರವೃತ್ತಿ ಎಂದು. ನೈತಿಕ ಭಯವಿಲ್ಲದಿದ್ದರೆ ನರಕವೇ ಗತಿ.<br /> <br /> ಚತುದರ್ಶಿಯೆಂದರೆ ವಿದ್ಯೆ ಎಂಬ ಅರ್ಥವುಂಟು. ಮುಂಗಾರು ಬೆಳೆ ಕೊಯ್ಲಿಗೆ ಬರುವ ಕಾಲಕ್ಕೆ, ಅಶ್ವಯುಜ ಮಾಸದ ಕೊನೆಯ ಎರಡು ದಿನಗಳು ಅಥವಾ ಕಾರ್ತೀಕ ಮಾಸದ ಮೊದಲ ದಿನ ಹಬ್ಬ ಆಚರಿಸಲಾಗುತ್ತದೆ.<br /> <br /> ದೀಪಾವಳಿಯ ಅಮಾವಾಸ್ಯೆಯನ್ನು ದೀವಳಿಗೆ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಆ ದಿನ ಪಿತೃಗಳಿಗೆ ತರ್ಪಣವನ್ನಿತ್ತು, ಶ್ರಾದ್ಧವಿಧಿಗಳನ್ನು ತೀರಿಸಿ ಜನರು ತಮ್ಮನ್ನು ಅಗಲಿದ ಹಿರಿಯರಿಗೆ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸುವ ಪರಿಪಾಠವಿದೆ. <br /> <br /> ಇನ್ನು ಬೆಂಗಳೂರು ನಗರದಲ್ಲಿ ದೀಪಾವಳಿ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸುತ್ತಾರೆ. ಹೊಸಬಟ್ಟೆ ಧರಿಸಿದ ಮಕ್ಕಳು, ಮನೆಮಂದಿ ಹಾಗೂ ಸ್ನೇಹಿತರೊಂದಿಗೆ ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ. ಮನೆಯಲ್ಲಿ ಲಕ್ಷ್ಮಿಯನ್ನು ಪೂಜಿಸುವುದು ಈ ಹಬ್ಬದ ಮತ್ತೊಂದು ವೈಶಿಷ್ಟ್ಯ. <br /> <br /> ಇದು ಮನೆಯ ಮನದ ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ಹಚ್ಚುವ ಹಬ್ಬ. ಮನೆ ಮನೆಗಳಲ್ಲಿ ಸದಾ ನೆಲೆಸಿರುವಂತೆ ಕೇಳಿಕೊಂಡು ಲಕ್ಷ್ಮಿಯನ್ನು ಆರಾಧಿಸುವ ಸಂಪ್ರದಾಯವಿದೆ. ಮನೆಯ ಅಂಗಳದಲ್ಲಿ ಹಚ್ಚುವ ದೀಪಗಳ ಸಾಲು ಆ ಧನಲಕ್ಷ್ಮಿಗೆ ಸ್ವಾಗತ ಕೋರುತ್ತದೆ ಎಂಬ ನಂಬಿಕೆ ಜನರಲ್ಲಿದೆ. <br /> <br /> ಜೈನಧರ್ಮಿಯರಿಗೂ ದೀಪಾವಳಿ ವಿಶೇಷ ಹಬ್ಬವಾಗಿದೆ. ಭಗವಾನ್ ಮಹಾವೀರರು ನಿರ್ವಾಣ ಹೊಂದಿದ್ದು ಕಾರ್ತೀಕ ಬಹುಳ ಚತುರ್ದಶಿ ರಾತ್ರಿ ಕೊನೆಯಾಗುತ್ತಿರುವಲ್ಲಿ ಸ್ವಾತಿ ನಕ್ಷತ್ರದಲ್ಲಿ. ಶಾಲಿವಾಹನ ಶಕೆಯ ಮಾಸಗಳ ಗಣನೆಯ ಆಧಾರದಂತೆ ಈ ಸಮಯ ಆಶ್ವಯುಜ ಬಹುಳ ತಿಥಿ ಕಳೆದ ಬೆಳಗಿನ ಜಾವದೊಡನೆ ಕೂಡಿ ಬರುತ್ತದೆ. <br /> <br /> ಸುಮಾರು 30ವರ್ಷಗಳ ಕಾಲ ತನ್ನ ಜ್ಞಾನಜ್ಯೋತಿಯಿಂದ ಲೋಕದ ಅಜ್ಞಾನವೆಂಬ ಕತ್ತಲೆಯನ್ನು ನಿವಾರಣೆ ಮಾಡಿದ ಈ ತೀರ್ಥಂಕರನ ಸ್ಮರಣೆ ನಿಮಿತ್ತವಾಗಿ ಈ ದಿನ ದೀಪಗಳನ್ನು ಹತ್ತಿಸುತ್ತಾರೆ. ಉಳಿದಂತೆ ವಿಶೇಷ ಪೂಜೆ ಸಲ್ಲಿಸಿ ಹಬ್ಬ ಆಚರಿಸುತ್ತಾರೆ.<br /> <br /> ಹೀಗೆ ದೀಪಾವಳಿ ಆಚರಣೆ ಆಯಾ ಸಮುದಾಯ, ಸ್ಥಳಗಳಲ್ಲಿ ವಿಶಿಷ್ಟವಾಗಿ ತಮ್ಮ ತಮ್ಮ ನಂಬಿಕೆಯಂತೆ ನಡೆಯುತ್ತದೆ. ಮನಸ್ಸನ್ನು ಆವರಿಸಿರುವ ಕತ್ತಲೆಯನ್ನು ದೂರವಿರಿಸಲು ನಾವು ಹಚ್ಚುವ ದೀಪ ನಮ್ಮ ಬಾಳಿನುದ್ದಕ್ಕೂ ಬೆಳಕು ಚೆಲ್ಲುತ್ತದೆಯೆಂಬ ನಂಬಿಕೆ ನಮ್ಮದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>