ಅಖಿಲ ಭಾರತ 6ನೇ ಖಾದಿ ಹಾಗೂ ಗ್ರಾಮೋದ್ಯೋಗ ವಸ್ತು ಪ್ರದರ್ಶನ 1946 ರಲ್ಲಿ ಬೆಂಗಳೂರಿನಲ್ಲಿ ಜರುಗಿತು. ಅದು ನಡೆದಿದ್ದು ಇಂದಿನ ಮೆಜಿಸ್ಟಿಕ್ನ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ. ಆಗ ಅದಕ್ಕೆ ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಹೆಸರಿಡಲಾಗಿತ್ತು. ನಂತರ ಅದು ಸುಭಾಷ್ನಗರ ಬಸ್ ನಿಲ್ದಾಣವೆಂದೇ ಹೆಸರಾಯಿತು.