<p>ಟಿ. ಜಾನ್ ಕಾಲೇಜಿನ ಮನೋರೋಗ ನರ್ಸಿಂಗ್ ವಿಭಾಗದ ವತಿಯಿಂದ ಇತ್ತೀಚೆಗೆ ಮಾದಕ ವ್ಯಸನ ಮತ್ತು ಅಕ್ರಮ ಸಾಗಣೆ ವಿರುದ್ಧ ಜಾಥಾ ನಡೆಯಿತು.<br /> <br /> ನಗರದ ಮೀನಾಕ್ಷಿ ಮಾಲ್ನಿಂದ ಬನ್ನೇರುಘಟ್ಟವರೆಗೆ ಜಾಥಾ ನಡೆಯಿತು. ಅಪೀಮು, ಗಾಂಜಾದಂತಹ ಡ್ರಗ್ಸ್, ಸಿಗರೇಟು, ಬೀಡಿ, ಮದ್ಯಪಾನ ಹಾಗೂ ಇನ್ನಿತರ ತಂಬಾಕು ಸೇವನೆ ಚಟಗಳ ವಿರುದ್ಧ ಜನರಲ್ಲಿ ಅರಿವು ಮೂಡಿಸುವುದು ಈ ಜಾಥಾದ ಉದ್ದೇಶವಾಗಿತ್ತು. <br /> <br /> ಕಾಲೇಜಿನ ಪ್ರಾಂಶುಪಾಲರಾದ ಪಿ. ನೀಲಾವತಿ ಮಾತನಾಡುತ್ತಾ, `ಹದಿಹರೆಯದ ಯುವಕ ಯುವತಿಯರು ಅಕ್ರಮ ಡ್ರಗ್ಗಳನ್ನು ಉಪಯೋಗಿಸುವ ಸಂಭವ ಹೆಚ್ಚು. ಇವರಿಗೆ ಮುಂದಿನ ದುಷ್ಪರಿಣಾಮಗಳ ಅರಿವಿರುವುದಿಲ್ಲ. ಈ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಜಾಥಾದ ಉದ್ದೇಶ~ ಎಂದರು. <br /> <br /> ಬಿಎಸ್ಸಿ (ನರ್ಸಿಂಗ್) 3ನೇ ವರ್ಷದ ವಿದ್ಯಾರ್ಥಿಗಳು, ಪಿಬಿ ಬಿಎಸ್ಸಿ (ಎನ್)ನ 2ನೇ ವರ್ಷದ ವಿದ್ಯಾರ್ಥಿಗಳು ಹಾಗೂ ಎಂಎಸ್ಸಿ (ಎನ್) (ಮನೋರೋಗ ನರ್ಸಿಂಗ್ ವಿಭಾಗದ) 2ನೇ ವರ್ಷದ ವಿದ್ಯಾರ್ಥಿಗಳು ಈ ಜಾಥಾದಲ್ಲಿ ಪಾಲ್ಗೊಂಡಿದ್ದರು. <br /> <br /> ದೈಹಿಕ ಶಿಕ್ಷಕರಾದ ಚಿನ್ನಿ ಶ್ರೀಧರನ್, ಸಹಾಯಕ ಪ್ರಾಧ್ಯಾಪಕರಾದ ಜೋಸೆಫಿನ್ ಸಿಂತಿಯಾ, ಮನೋರೋಗ ನರ್ಸಿಂಗ್ ವಿಭಾಗದ ಕ್ಲಿನಿಕಲ್ ಶಿಕ್ಷಕರಾದ ಬಿನ್ಸಿ ವರ್ಗೀಸ್ ಜಾಥಾದ ಮುಂದಾಳತ್ವ ವಹಿಸಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಟಿ. ಜಾನ್ ಕಾಲೇಜಿನ ಮನೋರೋಗ ನರ್ಸಿಂಗ್ ವಿಭಾಗದ ವತಿಯಿಂದ ಇತ್ತೀಚೆಗೆ ಮಾದಕ ವ್ಯಸನ ಮತ್ತು ಅಕ್ರಮ ಸಾಗಣೆ ವಿರುದ್ಧ ಜಾಥಾ ನಡೆಯಿತು.<br /> <br /> ನಗರದ ಮೀನಾಕ್ಷಿ ಮಾಲ್ನಿಂದ ಬನ್ನೇರುಘಟ್ಟವರೆಗೆ ಜಾಥಾ ನಡೆಯಿತು. ಅಪೀಮು, ಗಾಂಜಾದಂತಹ ಡ್ರಗ್ಸ್, ಸಿಗರೇಟು, ಬೀಡಿ, ಮದ್ಯಪಾನ ಹಾಗೂ ಇನ್ನಿತರ ತಂಬಾಕು ಸೇವನೆ ಚಟಗಳ ವಿರುದ್ಧ ಜನರಲ್ಲಿ ಅರಿವು ಮೂಡಿಸುವುದು ಈ ಜಾಥಾದ ಉದ್ದೇಶವಾಗಿತ್ತು. <br /> <br /> ಕಾಲೇಜಿನ ಪ್ರಾಂಶುಪಾಲರಾದ ಪಿ. ನೀಲಾವತಿ ಮಾತನಾಡುತ್ತಾ, `ಹದಿಹರೆಯದ ಯುವಕ ಯುವತಿಯರು ಅಕ್ರಮ ಡ್ರಗ್ಗಳನ್ನು ಉಪಯೋಗಿಸುವ ಸಂಭವ ಹೆಚ್ಚು. ಇವರಿಗೆ ಮುಂದಿನ ದುಷ್ಪರಿಣಾಮಗಳ ಅರಿವಿರುವುದಿಲ್ಲ. ಈ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಜಾಥಾದ ಉದ್ದೇಶ~ ಎಂದರು. <br /> <br /> ಬಿಎಸ್ಸಿ (ನರ್ಸಿಂಗ್) 3ನೇ ವರ್ಷದ ವಿದ್ಯಾರ್ಥಿಗಳು, ಪಿಬಿ ಬಿಎಸ್ಸಿ (ಎನ್)ನ 2ನೇ ವರ್ಷದ ವಿದ್ಯಾರ್ಥಿಗಳು ಹಾಗೂ ಎಂಎಸ್ಸಿ (ಎನ್) (ಮನೋರೋಗ ನರ್ಸಿಂಗ್ ವಿಭಾಗದ) 2ನೇ ವರ್ಷದ ವಿದ್ಯಾರ್ಥಿಗಳು ಈ ಜಾಥಾದಲ್ಲಿ ಪಾಲ್ಗೊಂಡಿದ್ದರು. <br /> <br /> ದೈಹಿಕ ಶಿಕ್ಷಕರಾದ ಚಿನ್ನಿ ಶ್ರೀಧರನ್, ಸಹಾಯಕ ಪ್ರಾಧ್ಯಾಪಕರಾದ ಜೋಸೆಫಿನ್ ಸಿಂತಿಯಾ, ಮನೋರೋಗ ನರ್ಸಿಂಗ್ ವಿಭಾಗದ ಕ್ಲಿನಿಕಲ್ ಶಿಕ್ಷಕರಾದ ಬಿನ್ಸಿ ವರ್ಗೀಸ್ ಜಾಥಾದ ಮುಂದಾಳತ್ವ ವಹಿಸಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>