<p>ಶ್ರೀ ರಾಮ ಲಲಿತ ಕಲಾ ಸಂಸ್ಥೆಯವರು ಏರ್ಪಡಿಸಿದ್ದ ತಿಂಗಳ ಸಂಗೀತ ಕಾರ್ಯಕ್ರಮದಲ್ಲಿ ಗಾಯಕಿ ವಾರಿಜಶ್ರೀ ಅವರ ಸಂಗೀತ ಕಛೇರಿ ಮುದ ನೀಡಿತು. <br /> `ಓಂ ನಮಃ ಪ್ರಣವಾರ್ಥಾಯ~ ಎಂಬ ಶ್ಲೋಕದಿಂದ ಪ್ರಾರಂಭಿಸಿದ ವಾರಿಜಶ್ರಿ ಸಾವೇರಿ ರಾಗದ `ಸರಸುಡ...~ ವರ್ಣವನ್ನು ಹಾಡಿದರು. <br /> <br /> ಪಲ್ಲವಿ, ಅನುಪಲ್ಲವಿ, ಚಿಟ್ಟೆಸ್ವರಗಳನ್ನು ಮಧ್ಯಮ ಕಾಲದಲ್ಲಿ ಮಧ್ಯಮ ಗತಿಯಲ್ಲಿ ಹಾಡಿ, ಚರಣ ಎತ್ತುಗಡೆ ಸ್ವರಗಳನ್ನು ಮಧ್ಯಮ ಕಾಲದಲ್ಲೇ, ಧೃತ ಗತಿಯಲ್ಲಿ ಹಾಡಿದ್ದು ಸಂಪ್ರದಾಯವಲ್ಲದಿದ್ದರೂ ವಿಭಿನ್ನವಾಗಿತ್ತು. ನಂತರ ರುದ್ರಪ್ರಿಯ ರಾಗದ `ಗಣನಾಯಕಂ~ ಕೃತಿಯನ್ನು ಹಾಡಿ, ಸಂಕ್ಷಿಪ್ತವಾದರೂ ಪ್ರೌಢವಾದ ಸ್ವರಪುಂಜಗಳು ಕೇಳುಗರಿಗೆ ಉತ್ಸಾಹವನ್ನು ತುಂಬಿತು. ನಂತರ ಯದುಕುಲಕಾಂಭೋಜಿ ರಾಗದ ತ್ಯಾಗರಾಜರ ಕೃತಿಯಾದ `ದಯಚೇರಾಮ~ ಎಂಬ ಅಪರೂಪದ ರಚನೆಯನ್ನು ಬಹಳ ಚೆನ್ನಾಗಿ ಹಾಡಿದರು. ಮುಂದುವರಿಸುತ್ತಾ ಕಲಾವತಿ ರಾಗದ `ಒಕ್ಕಪರಿಜೂಡರಾದ~ ಎಂಬ ಕೃತಿ ಹಾಡಿ ಹಿತಮಿತವಾಗಿ ಸ್ವರಪ್ರಸ್ತಾರ ಮಾಡಿದರು.<br /> ನಂತರ ಧನ್ಯಾಸಿ ರಾಗದ ಸಂಕ್ಷಿಪ್ತ ಆಲಾಪನೆ ಮಾಡಿ `ಬಾಲಕೃಷ್ಣಂ~ ಎಂಬ ತಮಿಳು ಕೀರ್ತನೆ ಹಾಡಿ ಸ್ವರವಿನ್ಯಾಸ ಮಾಡಿದ್ದು ಶ್ಲಾಘನೀಯವಾಗಿತ್ತು.<br /> ರಾಗಾಲಾಪನೆಗೆ ಕ್ಲಿಷ್ಟವಾದಂತಹ ಬೇಹಾಗ್ ರಾಗದಲ್ಲಿ ತ್ರಿಸ್ಥಾಯಿಯಲ್ಲಿಯೂ ನಿರರ್ಗಳವಾಗಿ ಹಾಗೂ ಬಹಳ ಪ್ರೌಢವಾಗಿ ರಾಗವನ್ನು ವಿಸ್ತರಿಸಿ,~ಸ್ಮರಜನ ಶುಭ ಚರಿತ~ ಎಂಬ ಜಾವಳಿ ಹಾಡಿದರು. ಜಾವಳಿಗೆ ರಾಗಾಲಾಪನೆ ಮಾಡಿ ಕಛೇರಿಯ ಮಧ್ಯೆ ಜಾವಳಿ ಹಾಡಿರುವುದು ಗಮನಾರ್ಹ. ದೀರ್ಘವಾದ ಪಾಂಡಿತ್ಯಪೂರ್ಣ ಆಲಾಪನೆಯನ್ನು ಮಾಡಿ ಸಭಿಕರನ್ನು ರಂಜಿಸಿದರು. ಆದರೆ ಅಂಥ ಉತ್ತಮ, ಮನರಂಜಿಸುವ ರಾಗಕ್ಕೆ ಕಲ್ಪನಾಸ್ವರ ಹಾಕದಿದ್ದುದು ಕೊಂಚ ನಿರಾಸೆ ತಂದಿತು. <br /> ನಂತರ ತ್ಯಾಗರಾಜರ `ತತ್ವ ಮರಿಯ ತರಮಾ~ ಹಾಡಿ ಮುಂದುವರಿಸುತ್ತ, ಖರಹರಪ್ರಿಯ ರಾಗವನ್ನು ಎತ್ತಿಕೊಂಡು ವಿದ್ವತ್ಪೂರ್ಣ ವಿಸ್ತಾರವಾದ ರಾಗಲಾಪನೆಯನ್ನು ಮಾಡಿ, ತ್ಯಾಗರಾಜರ ಸೊಗಸಾದ ಕೃತಿ `ಚಕ್ಕನಿರಾಜ~ ಹಾಡಿ `ಕಂಟಿಕೀ ಸುಂದರ~ ನೆರವಲ್ ಮಾಡಿ ಸ್ವರವಿನ್ಯಾಸವನ್ನು ಮಾಡಿ ರಾಜಮಾರ್ಗವನ್ನು ಸಿಂಗರಿಸಿ, ಒಳ್ಳೆಯ ಅನುಭವ ಪಡೆದ ಗಾಯಕಿ ಎನಿಸಿಕೊಂಡರು.<br /> ಪುರಂದರದಾಸರ `ವೆಂಕಟಾಚಲ ನಿಲಯಂ~ ದೇವರನಾಮ ಹಾಡಿ, ತಿಲ್ಲಾನದೊಂದಿಗೆ ಕಛೇರಿಗೆ ಮಂಗಳ ಹಾಡಿದರು. ಉತ್ತಮ ಕಂಠಸಿರಿ, ಸದಭಿರುಚಿಯಿರುವ ವಾರಿಜಶ್ರೀಯವರು ಉನ್ನತ ಮಟ್ಟದ ಗಾಯಕಿಯಾಗುವ ಲಕ್ಷಣಗಳು ಹೆಚ್ಚಾಗಿವೆ.<br /> ಪಕ್ಕವಾದ್ಯದಲ್ಲಿ ವಿದ್ವಾನ್ ಜೆ.ಎನ್. ಶ್ರೀಧರ್ ಅವರು ವಾರಿಜಶ್ರೀಯವರ ಮನೋಧರ್ಮಕ್ಕೆ ಹೊಂದಿಕೊಂಡು ಅವರನ್ನು ಅನುಸರಿಸಿ ಬಹಳ ಚೆನ್ನಾಗಿ ಪಿಟೀಲು ಸಹಕಾರ ನೀಡಿದರು. ವಿದ್ವಾನ್ ರವಿಶಂಕರ್ ಅವರ ಮೃದಂಗ ಹಾಗೂ ವಿದ್ವಾನ್ ಶ್ರೀಶೈಲ ಅವರ ಘಟಂ ವಾದನ ಅದ್ಭುತವಾಗಿ ಮೂಡಿ ಬಂತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶ್ರೀ ರಾಮ ಲಲಿತ ಕಲಾ ಸಂಸ್ಥೆಯವರು ಏರ್ಪಡಿಸಿದ್ದ ತಿಂಗಳ ಸಂಗೀತ ಕಾರ್ಯಕ್ರಮದಲ್ಲಿ ಗಾಯಕಿ ವಾರಿಜಶ್ರೀ ಅವರ ಸಂಗೀತ ಕಛೇರಿ ಮುದ ನೀಡಿತು. <br /> `ಓಂ ನಮಃ ಪ್ರಣವಾರ್ಥಾಯ~ ಎಂಬ ಶ್ಲೋಕದಿಂದ ಪ್ರಾರಂಭಿಸಿದ ವಾರಿಜಶ್ರಿ ಸಾವೇರಿ ರಾಗದ `ಸರಸುಡ...~ ವರ್ಣವನ್ನು ಹಾಡಿದರು. <br /> <br /> ಪಲ್ಲವಿ, ಅನುಪಲ್ಲವಿ, ಚಿಟ್ಟೆಸ್ವರಗಳನ್ನು ಮಧ್ಯಮ ಕಾಲದಲ್ಲಿ ಮಧ್ಯಮ ಗತಿಯಲ್ಲಿ ಹಾಡಿ, ಚರಣ ಎತ್ತುಗಡೆ ಸ್ವರಗಳನ್ನು ಮಧ್ಯಮ ಕಾಲದಲ್ಲೇ, ಧೃತ ಗತಿಯಲ್ಲಿ ಹಾಡಿದ್ದು ಸಂಪ್ರದಾಯವಲ್ಲದಿದ್ದರೂ ವಿಭಿನ್ನವಾಗಿತ್ತು. ನಂತರ ರುದ್ರಪ್ರಿಯ ರಾಗದ `ಗಣನಾಯಕಂ~ ಕೃತಿಯನ್ನು ಹಾಡಿ, ಸಂಕ್ಷಿಪ್ತವಾದರೂ ಪ್ರೌಢವಾದ ಸ್ವರಪುಂಜಗಳು ಕೇಳುಗರಿಗೆ ಉತ್ಸಾಹವನ್ನು ತುಂಬಿತು. ನಂತರ ಯದುಕುಲಕಾಂಭೋಜಿ ರಾಗದ ತ್ಯಾಗರಾಜರ ಕೃತಿಯಾದ `ದಯಚೇರಾಮ~ ಎಂಬ ಅಪರೂಪದ ರಚನೆಯನ್ನು ಬಹಳ ಚೆನ್ನಾಗಿ ಹಾಡಿದರು. ಮುಂದುವರಿಸುತ್ತಾ ಕಲಾವತಿ ರಾಗದ `ಒಕ್ಕಪರಿಜೂಡರಾದ~ ಎಂಬ ಕೃತಿ ಹಾಡಿ ಹಿತಮಿತವಾಗಿ ಸ್ವರಪ್ರಸ್ತಾರ ಮಾಡಿದರು.<br /> ನಂತರ ಧನ್ಯಾಸಿ ರಾಗದ ಸಂಕ್ಷಿಪ್ತ ಆಲಾಪನೆ ಮಾಡಿ `ಬಾಲಕೃಷ್ಣಂ~ ಎಂಬ ತಮಿಳು ಕೀರ್ತನೆ ಹಾಡಿ ಸ್ವರವಿನ್ಯಾಸ ಮಾಡಿದ್ದು ಶ್ಲಾಘನೀಯವಾಗಿತ್ತು.<br /> ರಾಗಾಲಾಪನೆಗೆ ಕ್ಲಿಷ್ಟವಾದಂತಹ ಬೇಹಾಗ್ ರಾಗದಲ್ಲಿ ತ್ರಿಸ್ಥಾಯಿಯಲ್ಲಿಯೂ ನಿರರ್ಗಳವಾಗಿ ಹಾಗೂ ಬಹಳ ಪ್ರೌಢವಾಗಿ ರಾಗವನ್ನು ವಿಸ್ತರಿಸಿ,~ಸ್ಮರಜನ ಶುಭ ಚರಿತ~ ಎಂಬ ಜಾವಳಿ ಹಾಡಿದರು. ಜಾವಳಿಗೆ ರಾಗಾಲಾಪನೆ ಮಾಡಿ ಕಛೇರಿಯ ಮಧ್ಯೆ ಜಾವಳಿ ಹಾಡಿರುವುದು ಗಮನಾರ್ಹ. ದೀರ್ಘವಾದ ಪಾಂಡಿತ್ಯಪೂರ್ಣ ಆಲಾಪನೆಯನ್ನು ಮಾಡಿ ಸಭಿಕರನ್ನು ರಂಜಿಸಿದರು. ಆದರೆ ಅಂಥ ಉತ್ತಮ, ಮನರಂಜಿಸುವ ರಾಗಕ್ಕೆ ಕಲ್ಪನಾಸ್ವರ ಹಾಕದಿದ್ದುದು ಕೊಂಚ ನಿರಾಸೆ ತಂದಿತು. <br /> ನಂತರ ತ್ಯಾಗರಾಜರ `ತತ್ವ ಮರಿಯ ತರಮಾ~ ಹಾಡಿ ಮುಂದುವರಿಸುತ್ತ, ಖರಹರಪ್ರಿಯ ರಾಗವನ್ನು ಎತ್ತಿಕೊಂಡು ವಿದ್ವತ್ಪೂರ್ಣ ವಿಸ್ತಾರವಾದ ರಾಗಲಾಪನೆಯನ್ನು ಮಾಡಿ, ತ್ಯಾಗರಾಜರ ಸೊಗಸಾದ ಕೃತಿ `ಚಕ್ಕನಿರಾಜ~ ಹಾಡಿ `ಕಂಟಿಕೀ ಸುಂದರ~ ನೆರವಲ್ ಮಾಡಿ ಸ್ವರವಿನ್ಯಾಸವನ್ನು ಮಾಡಿ ರಾಜಮಾರ್ಗವನ್ನು ಸಿಂಗರಿಸಿ, ಒಳ್ಳೆಯ ಅನುಭವ ಪಡೆದ ಗಾಯಕಿ ಎನಿಸಿಕೊಂಡರು.<br /> ಪುರಂದರದಾಸರ `ವೆಂಕಟಾಚಲ ನಿಲಯಂ~ ದೇವರನಾಮ ಹಾಡಿ, ತಿಲ್ಲಾನದೊಂದಿಗೆ ಕಛೇರಿಗೆ ಮಂಗಳ ಹಾಡಿದರು. ಉತ್ತಮ ಕಂಠಸಿರಿ, ಸದಭಿರುಚಿಯಿರುವ ವಾರಿಜಶ್ರೀಯವರು ಉನ್ನತ ಮಟ್ಟದ ಗಾಯಕಿಯಾಗುವ ಲಕ್ಷಣಗಳು ಹೆಚ್ಚಾಗಿವೆ.<br /> ಪಕ್ಕವಾದ್ಯದಲ್ಲಿ ವಿದ್ವಾನ್ ಜೆ.ಎನ್. ಶ್ರೀಧರ್ ಅವರು ವಾರಿಜಶ್ರೀಯವರ ಮನೋಧರ್ಮಕ್ಕೆ ಹೊಂದಿಕೊಂಡು ಅವರನ್ನು ಅನುಸರಿಸಿ ಬಹಳ ಚೆನ್ನಾಗಿ ಪಿಟೀಲು ಸಹಕಾರ ನೀಡಿದರು. ವಿದ್ವಾನ್ ರವಿಶಂಕರ್ ಅವರ ಮೃದಂಗ ಹಾಗೂ ವಿದ್ವಾನ್ ಶ್ರೀಶೈಲ ಅವರ ಘಟಂ ವಾದನ ಅದ್ಭುತವಾಗಿ ಮೂಡಿ ಬಂತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>