<p><strong>ಸುಚಿತ್ರ ಕಲಾಕೇಂದ್ರ:</strong> ಶನಿವಾರ ತಿಂಗಳ ಸಾಹಿತ್ಯ ಸಂಜೆಯಲ್ಲಿ ಕವಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರೊಂದಿಗೆ ಸಂವಾದ. ಕಾವ್ಯವಾಚನ. <br /> <br /> ಶಿವಮೊಗ್ಗದಲ್ಲಿ ಜನಿಸಿದ ಭಟ್ಟರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಇವರು ಸಾಹಿತಿಯಾಗಿಯೂ ಜನಪ್ರಿಯರು. ಅಲ್ಲದೇ ವಿಮರ್ಶಕ, ಅನುವಾದಕರಾಗಿದ್ದಾರೆ. `ವೃತ್ತ~, `ಸುಳಿ~, `ಚಿತ್ರಕೂಟ~ ಸೇರಿದಂತೆ ಹಲವು ಕವನ ಸಂಗ್ರಹಗಳನ್ನು ಹೊರತಂದಿದ್ದಾರೆ. `ದೀಪಿಕಾ~, `ಭಾವಸಂಗಮ~, `ಬಂದೇ ಬರತಾವ ಕಾಲ~ ಮುಂತಾದ ಮಧುರ ಭಾವಗೀತೆಗಳ ಸಂಕಲನವನ್ನೂ ರಚಿಸಿದ್ದಾರೆ. ಷೇಕ್ಸ್ಪಿಯರ್, ಟಿ.ಎಸ್. ಈಲಿಯಟ್ ಮತ್ತು ಯೇಟ್ಸ್ರಂಥಹ ಲೇಖಕರ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.<br /> <br /> ಭಾವಗೀತದ ಪ್ರಚಾರ ಕಾರ್ಯದಲ್ಲಿ ವಿಶೇಷವಾಗಿ ದುಡಿದಿದ್ದಾರೆ. ರಾಜ್ಯ ಸಾಹಿತ್ಯ ಅಕಾಡೆಮಿಯು ಅವರ ಕೃತಿಗಳಿಗೆ ಮೂರು ಬಾರಿ ಪ್ರಶಸ್ತಿ ನೀಡಿ ಗೌರವಿಸಿದೆ. ಶಿವರಾಮ ಕಾರಂತ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರ ಮಡಿಲಿಗೆ ಸಂದಿದೆ.<br /> <br /> ಸ್ಥಳ: ಕಿ.ರಂ. ನುಡಿಮನೆ, ಸುಚಿತ್ರ ಆವರಣ, ನಂ36, 9ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. ಸಂಜೆ 5.30.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುಚಿತ್ರ ಕಲಾಕೇಂದ್ರ:</strong> ಶನಿವಾರ ತಿಂಗಳ ಸಾಹಿತ್ಯ ಸಂಜೆಯಲ್ಲಿ ಕವಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರೊಂದಿಗೆ ಸಂವಾದ. ಕಾವ್ಯವಾಚನ. <br /> <br /> ಶಿವಮೊಗ್ಗದಲ್ಲಿ ಜನಿಸಿದ ಭಟ್ಟರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಇವರು ಸಾಹಿತಿಯಾಗಿಯೂ ಜನಪ್ರಿಯರು. ಅಲ್ಲದೇ ವಿಮರ್ಶಕ, ಅನುವಾದಕರಾಗಿದ್ದಾರೆ. `ವೃತ್ತ~, `ಸುಳಿ~, `ಚಿತ್ರಕೂಟ~ ಸೇರಿದಂತೆ ಹಲವು ಕವನ ಸಂಗ್ರಹಗಳನ್ನು ಹೊರತಂದಿದ್ದಾರೆ. `ದೀಪಿಕಾ~, `ಭಾವಸಂಗಮ~, `ಬಂದೇ ಬರತಾವ ಕಾಲ~ ಮುಂತಾದ ಮಧುರ ಭಾವಗೀತೆಗಳ ಸಂಕಲನವನ್ನೂ ರಚಿಸಿದ್ದಾರೆ. ಷೇಕ್ಸ್ಪಿಯರ್, ಟಿ.ಎಸ್. ಈಲಿಯಟ್ ಮತ್ತು ಯೇಟ್ಸ್ರಂಥಹ ಲೇಖಕರ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.<br /> <br /> ಭಾವಗೀತದ ಪ್ರಚಾರ ಕಾರ್ಯದಲ್ಲಿ ವಿಶೇಷವಾಗಿ ದುಡಿದಿದ್ದಾರೆ. ರಾಜ್ಯ ಸಾಹಿತ್ಯ ಅಕಾಡೆಮಿಯು ಅವರ ಕೃತಿಗಳಿಗೆ ಮೂರು ಬಾರಿ ಪ್ರಶಸ್ತಿ ನೀಡಿ ಗೌರವಿಸಿದೆ. ಶಿವರಾಮ ಕಾರಂತ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರ ಮಡಿಲಿಗೆ ಸಂದಿದೆ.<br /> <br /> ಸ್ಥಳ: ಕಿ.ರಂ. ನುಡಿಮನೆ, ಸುಚಿತ್ರ ಆವರಣ, ನಂ36, 9ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. ಸಂಜೆ 5.30.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>