<p>‘ಡಿಸಿಎಂ ಡಿಕೆಶಿ ಸಾಹೇಬ್ರು ಮೊನ್ನೆ ಸಿಎಂ ಸಾಹೇಬ್ರಿಗೆ ನಗ್ತಾ ನಗ್ತಾ ಕೇಕ್ ತಿನ್ನಿಸಿದ್ರಂತಪ... ಅವರ ಮನಸಲ್ಲಿ ಏನಿತ್ತೋ...’ ಹರಟೆಕಟ್ಟೆಯಲ್ಲಿ ದುಬ್ಬೀರ ಒಳ ಮನಸ್ಸಿನ ವಿಷಯ ಪ್ರಸ್ತಾಪಿಸಿದ.</p>.<p>‘ಇನ್ನೇನಿರುತ್ತೆ? ದಾಖಲೆ ಮಾಡಿದ್ದಾತು, ಇನ್ನಾದ್ರೂ ಕುರ್ಚಿ ಬಿಟ್ಟು ಕೊಡಿ ಅಂತ ಕೇಕ್ ತಿನ್ನಿಸಿರಬೇಕು... ಮುಖ ನೋಡಿದ್ರೆ ಮನಸ್ಸಲ್ಲಿ ಏನಿದೆ ಅಂತ ಗೊತ್ತಾಗಲ್ವಾ?’ ಗುಡ್ಡೆ ಮಾರ್ಮಿಕವಾಗಿ ನಕ್ಕ.</p>.<p>‘ಮುಖ ನೋಡಿದ್ರೆ ಮನಸ್ಸಲ್ಲಿರೋದು ಗೊತ್ತಾಗುತ್ತಾ? ನಿನ್ತೆಲಿ... ಈಗ ಟ್ರಂಪ್ ದಿನಕ್ಕೊಂತರಾ ಮುಖ ಮಾಡ್ತಾರೆ, ಅವರ ಮನಸ್ಸಲ್ಲಿ ಏನಿದೆ ಹೇಳ್ತೀಯ?’ ಗುಡ್ಡೆ ಸವಾಲು ಹಾಕಿದ.</p>.<p>‘ನೊಬೆಲ್ ಶಾಂತಿ ಪ್ರಶಸ್ತಿ ಒಂದೇ ಅವರ ಮುಖ, ಮನಸ್ಸಲ್ಲಿರೋದು... ಸರಿನಾ?’</p>.<p>‘ನೊಬೆಲ್ ಅಶಾಂತಿ ಪ್ರಶಸ್ತಿ ಅಂತ ಏನರೆ ಇದ್ರೆ ಅವರಿಗೆ ಕೊಡಬೋದು ನೋಡು...’ ಮಂಜಮ್ಮ ನಕ್ಕಳು.</p>.<p>‘ಈಗ ನಾಯಿಗಳು ಯಾವಾಗ ಕಚ್ತಾವೆ ಹೇಳಕ್ಕೆ ಬರಲ್ಲ ಅಂತ ಕೋರ್ಟ್ ಹೇಳಿದೆ, ನೀನು ನಾಯಿಗಳ ಮುಖ ನೋಡಿ ಯಾವ ನಾಯಿ ಕಚ್ಚುತ್ತೆ, ಯಾವುದು ಕಚ್ಚಲ್ಲ ಹೇಳ್ತೀಯ?’</p>.<p>‘ಅದು ಕಷ್ಟ...’ ಎಂದ ತೆಪರೇಸಿ.</p>.<p>‘ಹೋಗ್ಲಿ, ಕೈ ಕಮಾಂಡು ಡಿಕೆಶಿ ಸಾಹೇಬ್ರನ್ನ ಅಸ್ಸಾಂ ಚುನಾವಣೆಗೆ ಉಸ್ತುವಾರಿ ಮಾಡಿದೆ, ಅದರ ಮನಸ್ಸಲ್ಲೇನಿದೆ ಹೇಳು ನೋಡಾಣ...’ </p>.<p>‘ಕರ್ನಾಟಕದ ಕುರ್ಚಿ ಕದನಕ್ಕೆ ವಿರಾಮ ಹಾಕೋ ಪ್ಲಾನು ಅನ್ಸುತ್ತೆ...’ </p>.<p>‘ಸರಿ, ನಮ್ ಕುಮಾರಣ್ಣ ನಂದೂ ಗಣಿ ರೆಡ್ಡಿ ಗಲಾಟೆ ಹಳೆ ಕಥೆ ಅಂದ್ರಂತಲ್ಲ, ಅವರ ಮನಸ್ಸಲ್ಲಿ ಏನಿರಬಹುದು?’</p>.<p>‘ಹೊಸ ಕತೆ ಶುರು ಮಾಡೋ ಪ್ಲಾನ್ ಇರಬಹುದು...’ </p>.<p>‘ಈಗ ಅದೆಲ್ಲ ಬೇಡ, ನಮ್ ಸಿದ್ರಾಮಣ್ಣ ಒಂದ್ಸಲ ನಾನೇ ಐದು ವರ್ಷ ಸಿಎಂ ಅಂತಾರೆ, ಇನ್ನೊಂದ್ಸಲ ಹೈಕಮಾಂಡ್ ಹೇಳಿದ್ದೇ ಫೈನಲ್ ಅಂತಾರೆ, ಮೊನ್ನೆ ‘ಎಷ್ಟು ದಿನ ಇರ್ತೀನೋ ಗೊತ್ತಿಲ್ಲ’ ಅಂದ್ರು... ಅವರ ಮನಸ್ಸಲ್ಲಿ ನಿಜವಾಗ್ಲೂ ಏನಿದೆ ಹೇಳ್ತೀಯ?’ ಮಂಜಮ್ಮ ಕೇಳಿದಳು.</p>.<p>‘ದೇವ್ರಾಣೆ ಗೊತ್ತಿಲ್ಲ, ನಾ ಸೋತೆ’ ಎಂದ ತೆಪರೇಸಿ. ಹರಟೆಕಟ್ಟೆಯಲ್ಲಿ ನಗುವಿನ ಅಲೆ ತೇಲಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಡಿಸಿಎಂ ಡಿಕೆಶಿ ಸಾಹೇಬ್ರು ಮೊನ್ನೆ ಸಿಎಂ ಸಾಹೇಬ್ರಿಗೆ ನಗ್ತಾ ನಗ್ತಾ ಕೇಕ್ ತಿನ್ನಿಸಿದ್ರಂತಪ... ಅವರ ಮನಸಲ್ಲಿ ಏನಿತ್ತೋ...’ ಹರಟೆಕಟ್ಟೆಯಲ್ಲಿ ದುಬ್ಬೀರ ಒಳ ಮನಸ್ಸಿನ ವಿಷಯ ಪ್ರಸ್ತಾಪಿಸಿದ.</p>.<p>‘ಇನ್ನೇನಿರುತ್ತೆ? ದಾಖಲೆ ಮಾಡಿದ್ದಾತು, ಇನ್ನಾದ್ರೂ ಕುರ್ಚಿ ಬಿಟ್ಟು ಕೊಡಿ ಅಂತ ಕೇಕ್ ತಿನ್ನಿಸಿರಬೇಕು... ಮುಖ ನೋಡಿದ್ರೆ ಮನಸ್ಸಲ್ಲಿ ಏನಿದೆ ಅಂತ ಗೊತ್ತಾಗಲ್ವಾ?’ ಗುಡ್ಡೆ ಮಾರ್ಮಿಕವಾಗಿ ನಕ್ಕ.</p>.<p>‘ಮುಖ ನೋಡಿದ್ರೆ ಮನಸ್ಸಲ್ಲಿರೋದು ಗೊತ್ತಾಗುತ್ತಾ? ನಿನ್ತೆಲಿ... ಈಗ ಟ್ರಂಪ್ ದಿನಕ್ಕೊಂತರಾ ಮುಖ ಮಾಡ್ತಾರೆ, ಅವರ ಮನಸ್ಸಲ್ಲಿ ಏನಿದೆ ಹೇಳ್ತೀಯ?’ ಗುಡ್ಡೆ ಸವಾಲು ಹಾಕಿದ.</p>.<p>‘ನೊಬೆಲ್ ಶಾಂತಿ ಪ್ರಶಸ್ತಿ ಒಂದೇ ಅವರ ಮುಖ, ಮನಸ್ಸಲ್ಲಿರೋದು... ಸರಿನಾ?’</p>.<p>‘ನೊಬೆಲ್ ಅಶಾಂತಿ ಪ್ರಶಸ್ತಿ ಅಂತ ಏನರೆ ಇದ್ರೆ ಅವರಿಗೆ ಕೊಡಬೋದು ನೋಡು...’ ಮಂಜಮ್ಮ ನಕ್ಕಳು.</p>.<p>‘ಈಗ ನಾಯಿಗಳು ಯಾವಾಗ ಕಚ್ತಾವೆ ಹೇಳಕ್ಕೆ ಬರಲ್ಲ ಅಂತ ಕೋರ್ಟ್ ಹೇಳಿದೆ, ನೀನು ನಾಯಿಗಳ ಮುಖ ನೋಡಿ ಯಾವ ನಾಯಿ ಕಚ್ಚುತ್ತೆ, ಯಾವುದು ಕಚ್ಚಲ್ಲ ಹೇಳ್ತೀಯ?’</p>.<p>‘ಅದು ಕಷ್ಟ...’ ಎಂದ ತೆಪರೇಸಿ.</p>.<p>‘ಹೋಗ್ಲಿ, ಕೈ ಕಮಾಂಡು ಡಿಕೆಶಿ ಸಾಹೇಬ್ರನ್ನ ಅಸ್ಸಾಂ ಚುನಾವಣೆಗೆ ಉಸ್ತುವಾರಿ ಮಾಡಿದೆ, ಅದರ ಮನಸ್ಸಲ್ಲೇನಿದೆ ಹೇಳು ನೋಡಾಣ...’ </p>.<p>‘ಕರ್ನಾಟಕದ ಕುರ್ಚಿ ಕದನಕ್ಕೆ ವಿರಾಮ ಹಾಕೋ ಪ್ಲಾನು ಅನ್ಸುತ್ತೆ...’ </p>.<p>‘ಸರಿ, ನಮ್ ಕುಮಾರಣ್ಣ ನಂದೂ ಗಣಿ ರೆಡ್ಡಿ ಗಲಾಟೆ ಹಳೆ ಕಥೆ ಅಂದ್ರಂತಲ್ಲ, ಅವರ ಮನಸ್ಸಲ್ಲಿ ಏನಿರಬಹುದು?’</p>.<p>‘ಹೊಸ ಕತೆ ಶುರು ಮಾಡೋ ಪ್ಲಾನ್ ಇರಬಹುದು...’ </p>.<p>‘ಈಗ ಅದೆಲ್ಲ ಬೇಡ, ನಮ್ ಸಿದ್ರಾಮಣ್ಣ ಒಂದ್ಸಲ ನಾನೇ ಐದು ವರ್ಷ ಸಿಎಂ ಅಂತಾರೆ, ಇನ್ನೊಂದ್ಸಲ ಹೈಕಮಾಂಡ್ ಹೇಳಿದ್ದೇ ಫೈನಲ್ ಅಂತಾರೆ, ಮೊನ್ನೆ ‘ಎಷ್ಟು ದಿನ ಇರ್ತೀನೋ ಗೊತ್ತಿಲ್ಲ’ ಅಂದ್ರು... ಅವರ ಮನಸ್ಸಲ್ಲಿ ನಿಜವಾಗ್ಲೂ ಏನಿದೆ ಹೇಳ್ತೀಯ?’ ಮಂಜಮ್ಮ ಕೇಳಿದಳು.</p>.<p>‘ದೇವ್ರಾಣೆ ಗೊತ್ತಿಲ್ಲ, ನಾ ಸೋತೆ’ ಎಂದ ತೆಪರೇಸಿ. ಹರಟೆಕಟ್ಟೆಯಲ್ಲಿ ನಗುವಿನ ಅಲೆ ತೇಲಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>