ಮಳೆಯಿಂದ ನದಿ, ಕೆರೆ, ಹೊಂಡ ತುಂಬಿದಾಗ ಚುನಾಯಿತ ಪ್ರತಿನಿಧಿಗಳು, ಊರಿನ ಮುಖಂಡರು, ಮಹಿಳೆಯರು ಬಾಗಿನ ಸಮರ್ಪಿಸುತ್ತಾರೆ. ಇದನ್ನೇ ನಾವು ಅನುಸರಿಸಿದರೆ, ಎಲ್ಲರೂ ಕೂಡ ಪೂಜಾ ಸಾಮಗ್ರಿ ಎಸೆಯುವ ಮೂಲಕ ಮತ್ತೆ ಹೊಂಡದ ನೀರು ಮಲಿನ ಆಗುವ ಸಾಧ್ಯತೆ ಇದೆ. ಆದ್ದರಿಂದ ಹೊಸದಾಗಿ ಏನಾದರೂ ಮಾಡಬೇಕು ಎಂಬ ಉದ್ದೇಶದಿಂದ ಈ ರೀತಿ ಮಾಡಿದ್ದೇವೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಹೇಳಿದರು.