ಕೂಡಲಸಂಗಮದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮಾತೆ ಮಹಾದೇವಿ, ‘ಬಹಿರಂಗ ಸಭೆಯಲ್ಲಿ ಒಂದು, ಗೋಪ್ಯ ಸಭೆಗಳಲ್ಲಿ ಮತ್ತೊಂದು ನಿಲುವು ವ್ಯಕ್ತಪಡಿಸುತ್ತಿರುವ ಮಹಾಸಭೆಯನ್ನು ಬಸವತತ್ವ ನಿಷ್ಠರು ಬಹಿಷ್ಕರಿಸಿ, ಮಹಾಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು’ ಎಂದು ಸಲಹೆ ನೀಡಿದ್ದಾರೆ. ‘ಹಳಕಟ್ಟಿ ಅವರು ವಚನಗಳನ್ನು ಸಂಗ್ರಹಿಸಲು ಸಾಕಷ್ಟು ಶ್ರಮ ಹಾಕಿದ್ದಾರೆ. ಆದರೂ ಅವರ ಶ್ರಮವನ್ನು ಅಗೌರವದಿಂದ ಕಾಣುವುದು ಸರಿಯಲ್ಲ ಎಂದರು.