ಇಲ್ಲಿನ ನ್ಯಾಯಾಲಯದ ಮುಂಭಾಗವಿರುವ ಹೋಟೆಲ್, ಟೀ ಅಂಗಡಿಯವರು ಪಾತ್ರೆ ತೊಳೆದ ನೀರನ್ನು ಕೆರೆಗೆ ಬಿಡುತ್ತಿದ್ದಾರೆ. ಉಳಿದ ಪದಾರ್ಥಗಳನ್ನು ಕೆರೆಗೆ ಹಾಕುವ ಮೂಲಕ ಮಾಲಿನ್ಯಕ್ಕೆ ಕಾರಣರಾಗಿದ್ದಾರೆ. ಅಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಇಲ್ಲಿನ ಪರಿಸರ, ಕೆರೆಯ ರಕ್ಷಣೆಗೆ ಸೂಕ್ತ ಕ್ರಮವಹಿಸಬೇಕು ಎಂದು ಪರಿಸರ ಪ್ರೇಮಿ ಎನ್.ದಿಲೀಪ್ ಒತ್ತಾಯಿಸಿದ್ದಾರೆ.