ಪಾಂಡವಪುರ (ಮಂಡ್ಯ): ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಚಲಿಸುತ್ತಿದ್ದ ರೈಲಿನ ಬೋಗಿ ಪ್ರತ್ಯೇಕಗೊಂಡು ಆತಂಕ ಸೃಷ್ಟಿಸಿತು.
ಬೆಳಿಗ್ಗೆ 7.15ಕ್ಕೆ ಮೈಸೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಚಾಮುಂಡಿ ಎಕ್ಸ್ಪ್ರೆಸ್ನ ಹಿಂಬದಿಯ ಬೋಗಿ ಪ್ರತ್ಯೇಕಗೊಂಡಿತು. ಈ ನಿಲ್ದಾಣದಲ್ಲಿ ನಿಲುಗಡೆ ಇದ್ದ ಕಾರಣ ರೈಲು ನಿಧಾನವಾಗಿ ಬರುತ್ತಿದ್ದುದರಿಂದ ಯಾವುದೇ ಅನಾಹುತವಾಗಿಲ್ಲ.
ಪ್ರತ್ಯೇಕಗೊಂಡಿದ್ದ ಬೋಗಿಯನ್ನು ತ್ವರಿತವಾಗಿ ಜೋಡಿಸಿ ರೈಲು ಸಂಚಾರಕ್ಕೆ ರೈಲ್ವೆ ಅಧಿಕಾರಿಗಳು ಅನುವು ಮಾಡಿಕೊಟ್ಟರು. ಚಾಮುಂಡಿ ಎಕ್ಸ್ಪ್ರೆಸ್ 10 ನಿಮಿಷ ತಡವಾಗಿ ಚಲಿಸಿತು.