<p><strong>ನವದೆಹಲಿ:</strong> ಹಿಂದೂಗಳ ಪವಿತ್ರ ಯಾತ್ರಾಸ್ಥಳವಾದ ಅಮರನಾಥ ಗುಹಾ ದೇವಾಲಯದಲ್ಲಿ ಇನ್ನು ಮುಂದೆ ಗಂಟೆ, ಜಾಗಟೆ ಬಾರಿಸುವಂತಿಲ್ಲ. ಜಯಘೋಷ, ಮಂತ್ರ ಪಠಿಸುವಂತಿಲ್ಲ!</p>.<p>ಹಿಮಾಲಯದ ಈ ಗುಹಾ ದೇವಾಲಯದ ಸುತ್ತಮುತ್ತಲಿನ ಪ್ರದೇಶವನ್ನು ‘ನಿಶ್ಯಬ್ದ ವಲಯ’ ಎಂದು ಘೋಷಿಸಿ ರಾಷ್ಟ್ರೀಯ ಹಸಿರು ನ್ಯಾಯಪೀಠ (ಎನ್ಜಿಟಿ) ಬುಧವಾರ ಆದೇಶ ಹೊರಡಿಸಿದೆ.</p>.<p>ದಕ್ಷಿಣ ಕಾಶ್ಮೀರದಲ್ಲಿರುವ ದೇವಾಲಯದ ಸುತ್ತಮುತ್ತಲಿನ ಪರಿಸರ ಸೂಕ್ಷ್ಮವಲಯದ ರಕ್ಷಣೆ ಮತ್ತು ಹಿಮ ಕುಸಿತ ತಡೆ ದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ ಎಂದು ಎನ್ಜಿಟಿ ಹೇಳಿದೆ.</p>.<p>ಹಾಗಂತ ಯಾತ್ರಿಗಳ ದರ್ಶನಕ್ಕೆ ಯಾವುದೇ ಅಡ್ಡಿ, ಆತಂಕವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಎನ್ಜಿಟಿ ಮುಖ್ಯಸ್ಥ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ಅವರು ದೇವಾಲಯದ ಆಡಳಿತ ಮಂಡಳಿಗೆ ತಾಕೀತು ಮಾಡಿದ್ದಾರೆ.</p>.<p>ಯಾತ್ರಿಕರ ಅನುಕೂಲಕ್ಕಾಗಿ ಮೂಲಸೌಕರ್ಯ ಒದಗಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.</p>.<p><strong>ಮೆಟ್ಟಿಲು ಬಳಿಯೇ ತಡೆ:</strong> ಗುಹಾ ದೇವಾಲಯದ ಮೆಟ್ಟಿಲುಗಳಿಂದ ಆಚೆಗೆ ಯಾರಿಗೂ ಏನನ್ನೂ ತೆಗೆದುಕೊಂಡು ಹೋಗಲು ಅವಕಾಶ ನೀಡಬಾರದು. ಮೆಟ್ಟಿಲು ಹತ್ತುವ ಪ್ರವೇಶ ಸ್ಥಳದಲ್ಲಿಯೇ ಎಲ್ಲ ಯಾತ್ರಿಕರನ್ನು ಕಟ್ಟುನಿಟ್ಟಾಗಿ ಪರೀಕ್ಷಿಸಿ ಬಿಡುವಂತೆ ಸೂಚಿಸಿದ್ದಾರೆ.</p>.<p>ಜನರು ತಮ್ಮ ವಸ್ತುಗಳನ್ನು ಇಡಲು ಪ್ರವೇಶ ಸ್ಥಳದಲ್ಲಿ ಚೆಕ್ಪಾಯಿಂಟ್ ನಿರ್ಮಿಸುವಂತೆ ಸಲಹೆ ಮಾಡಿದ್ದಾರೆ.</p>.<p><strong>ಕಬ್ಬಿಣ ಸರಳುಗಳಿಂದ ಮುಕ್ತಿ:</strong> ಶಿವಲಿಂಗ ಅಥವಾ ಅದನ್ನು ಹೋಲುವ ಮಂಜುಗಡ್ಡೆಯ ಕಂಬವನ್ನು ಭಕ್ತರು ಸ್ಪಷ್ಟವಾಗಿ ವೀಕ್ಷಿಸಲು ಅನುಕೂಲವಾಗುವಂತೆ ಅದರ ಮುಂದಿರುವ ಕಬ್ಬಿಣದ ಸರಳುಗಳನ್ನು ತೆಗೆದು ಹಾಕುವಂತೆ ಅವರು ದೇವಸ್ಥಾನದ ಆಡಳಿತ ಮಂಡಳಿಗೆ ಸೂಚಿಸಿದ್ದಾರೆ.</p>.<p><strong>ಮೂಲಸೌಕರ್ಯ ಕಲ್ಪಿಸಲು ಕ್ರಿಯಾ ಯೋಜನೆ</strong><br /> ಯಾತ್ರಿಕರಿಗೆ ಮೂಲಸೌಕರ್ಯ ಒದಗಿಸುವ ಬಗ್ಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಮೂರು ವಾರಗಳ ಒಳಗಾಗಿ ಸಲ್ಲಿಸುವಂತೆ ಪರಿಸರ ಮತ್ತು ಅರಣ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನೇತೃತ್ವದ ತಜ್ಞರ ಸಮಿತಿಗೆ ಸ್ವತಂತ್ರ ಕುಮಾರ್ ಸೂಚಿಸಿದ್ದಾರೆ.</p>.<p>ಯಾತ್ರಿಗಳ ಪ್ರಯಾಣಕ್ಕೆ ಸರಿಯಾದ ಮಾರ್ಗ ನಿರ್ಮಾಣ, ಸರದಿಯಲ್ಲಿ ನಿಲ್ಲಲು ಸಮರ್ಪಕ ಸೌಲಭ್ಯ, ದೇವಾಲಯ ಆವರಣದಲ್ಲಿ ಸ್ವಚ್ಛತೆ, ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳಬೇಕಾಗದ ಕ್ರಮಗಳ ಕುರಿತು ವರದಿ ನೀಡುವಂತೆ ಸೂಚಿಸಿದೆ.</p>.<p>ಯಾತ್ರಿಗಳಿಗೆ ಮೂಲ ಸೌಲಭ್ಯ ಕಲ್ಪಿಸದ ಅಮರನಾಥ ದೇವಾಲಯ ಆಡಳಿತ ಮಂಡಳಿಯನ್ನು ಇದೇ ನವೆಂಬರ್ನಲ್ಲಿ ಎನ್ಜಿಟಿ ತರಾಟೆಗೆ ತೆಗೆದುಕೊಂಡಿತ್ತು.</p>.<p>ಮೂಲ ಸೌಲಭ್ಯ ಕೊರತೆಯಿಂದ ಪರದಾಡುತ್ತಿರುವ ಯಾತ್ರಿಗಳಿಗೆ ಸರಿಯಾಗಿ ದರ್ಶನ ಪಡೆಯಲಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.</p>.<p>ಮೂಲಸೌಲಭ್ಯ ಒದಗಿಸುವಂತೆ 2012ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನವನ್ನು ದೇವಾಲಯದ ಆಡಳಿತ ಮಂಡಳಿ ಯಾಕೆ ಪಾಲಿಸಿಲ್ಲ ಎಂದು ಪ್ರಶ್ನಿಸಿತ್ತು.</p>.<p><strong>ತುಘಲಕ್ ಫತ್ವಾ: ವಿಎಚ್ಪಿ ಟೀಕೆ<br /> ನವದೆಹಲಿ: </strong>ಅಮರನಾಥ ದೇವಾಲಯದ ಪ್ರವೇಶ ಸ್ಥಳದಿಂದ ಆಚೆಗೆ ಯಾವುದೇ ಧಾರ್ಮಿಕ ಚಟುವಟಿಕೆಗಳನ್ನು ನಿಷೇಧಿಸಿರುವ ರಾಷ್ಟ್ರೀಯ ಹಸಿರುಪೀಠದ ಆದೇಶವನ್ನು ‘ತುಘಲಕ್ ಫತ್ವಾ’ ಎಂದು ವಿಶ್ವ ಹಿಂದೂ ಪರಿಷತ್ ಕಟುವಾಗಿ ಟೀಕಿಸಿದೆ.</p>.<p>ಸದಾ ಒಂದಿಲ್ಲ, ಒಂದು ಕಾರಣಕ್ಕಾಗಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡುವ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ ಎಂದು ವಿಎಚ್ಪಿ ಅಂತರರಾಷ್ಟ್ರೀಯ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಪ್ರತಿಕ್ರಿಯಿಸಿದ್ದಾರೆ.</p>.<p>ಎನ್ಜಿಟಿ ಈ ಆದೇಶವನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಹಿಂದೂಗಳ ಪವಿತ್ರ ಯಾತ್ರಾಸ್ಥಳವಾದ ಅಮರನಾಥ ಗುಹಾ ದೇವಾಲಯದಲ್ಲಿ ಇನ್ನು ಮುಂದೆ ಗಂಟೆ, ಜಾಗಟೆ ಬಾರಿಸುವಂತಿಲ್ಲ. ಜಯಘೋಷ, ಮಂತ್ರ ಪಠಿಸುವಂತಿಲ್ಲ!</p>.<p>ಹಿಮಾಲಯದ ಈ ಗುಹಾ ದೇವಾಲಯದ ಸುತ್ತಮುತ್ತಲಿನ ಪ್ರದೇಶವನ್ನು ‘ನಿಶ್ಯಬ್ದ ವಲಯ’ ಎಂದು ಘೋಷಿಸಿ ರಾಷ್ಟ್ರೀಯ ಹಸಿರು ನ್ಯಾಯಪೀಠ (ಎನ್ಜಿಟಿ) ಬುಧವಾರ ಆದೇಶ ಹೊರಡಿಸಿದೆ.</p>.<p>ದಕ್ಷಿಣ ಕಾಶ್ಮೀರದಲ್ಲಿರುವ ದೇವಾಲಯದ ಸುತ್ತಮುತ್ತಲಿನ ಪರಿಸರ ಸೂಕ್ಷ್ಮವಲಯದ ರಕ್ಷಣೆ ಮತ್ತು ಹಿಮ ಕುಸಿತ ತಡೆ ದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ ಎಂದು ಎನ್ಜಿಟಿ ಹೇಳಿದೆ.</p>.<p>ಹಾಗಂತ ಯಾತ್ರಿಗಳ ದರ್ಶನಕ್ಕೆ ಯಾವುದೇ ಅಡ್ಡಿ, ಆತಂಕವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಎನ್ಜಿಟಿ ಮುಖ್ಯಸ್ಥ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ಅವರು ದೇವಾಲಯದ ಆಡಳಿತ ಮಂಡಳಿಗೆ ತಾಕೀತು ಮಾಡಿದ್ದಾರೆ.</p>.<p>ಯಾತ್ರಿಕರ ಅನುಕೂಲಕ್ಕಾಗಿ ಮೂಲಸೌಕರ್ಯ ಒದಗಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.</p>.<p><strong>ಮೆಟ್ಟಿಲು ಬಳಿಯೇ ತಡೆ:</strong> ಗುಹಾ ದೇವಾಲಯದ ಮೆಟ್ಟಿಲುಗಳಿಂದ ಆಚೆಗೆ ಯಾರಿಗೂ ಏನನ್ನೂ ತೆಗೆದುಕೊಂಡು ಹೋಗಲು ಅವಕಾಶ ನೀಡಬಾರದು. ಮೆಟ್ಟಿಲು ಹತ್ತುವ ಪ್ರವೇಶ ಸ್ಥಳದಲ್ಲಿಯೇ ಎಲ್ಲ ಯಾತ್ರಿಕರನ್ನು ಕಟ್ಟುನಿಟ್ಟಾಗಿ ಪರೀಕ್ಷಿಸಿ ಬಿಡುವಂತೆ ಸೂಚಿಸಿದ್ದಾರೆ.</p>.<p>ಜನರು ತಮ್ಮ ವಸ್ತುಗಳನ್ನು ಇಡಲು ಪ್ರವೇಶ ಸ್ಥಳದಲ್ಲಿ ಚೆಕ್ಪಾಯಿಂಟ್ ನಿರ್ಮಿಸುವಂತೆ ಸಲಹೆ ಮಾಡಿದ್ದಾರೆ.</p>.<p><strong>ಕಬ್ಬಿಣ ಸರಳುಗಳಿಂದ ಮುಕ್ತಿ:</strong> ಶಿವಲಿಂಗ ಅಥವಾ ಅದನ್ನು ಹೋಲುವ ಮಂಜುಗಡ್ಡೆಯ ಕಂಬವನ್ನು ಭಕ್ತರು ಸ್ಪಷ್ಟವಾಗಿ ವೀಕ್ಷಿಸಲು ಅನುಕೂಲವಾಗುವಂತೆ ಅದರ ಮುಂದಿರುವ ಕಬ್ಬಿಣದ ಸರಳುಗಳನ್ನು ತೆಗೆದು ಹಾಕುವಂತೆ ಅವರು ದೇವಸ್ಥಾನದ ಆಡಳಿತ ಮಂಡಳಿಗೆ ಸೂಚಿಸಿದ್ದಾರೆ.</p>.<p><strong>ಮೂಲಸೌಕರ್ಯ ಕಲ್ಪಿಸಲು ಕ್ರಿಯಾ ಯೋಜನೆ</strong><br /> ಯಾತ್ರಿಕರಿಗೆ ಮೂಲಸೌಕರ್ಯ ಒದಗಿಸುವ ಬಗ್ಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಮೂರು ವಾರಗಳ ಒಳಗಾಗಿ ಸಲ್ಲಿಸುವಂತೆ ಪರಿಸರ ಮತ್ತು ಅರಣ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನೇತೃತ್ವದ ತಜ್ಞರ ಸಮಿತಿಗೆ ಸ್ವತಂತ್ರ ಕುಮಾರ್ ಸೂಚಿಸಿದ್ದಾರೆ.</p>.<p>ಯಾತ್ರಿಗಳ ಪ್ರಯಾಣಕ್ಕೆ ಸರಿಯಾದ ಮಾರ್ಗ ನಿರ್ಮಾಣ, ಸರದಿಯಲ್ಲಿ ನಿಲ್ಲಲು ಸಮರ್ಪಕ ಸೌಲಭ್ಯ, ದೇವಾಲಯ ಆವರಣದಲ್ಲಿ ಸ್ವಚ್ಛತೆ, ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳಬೇಕಾಗದ ಕ್ರಮಗಳ ಕುರಿತು ವರದಿ ನೀಡುವಂತೆ ಸೂಚಿಸಿದೆ.</p>.<p>ಯಾತ್ರಿಗಳಿಗೆ ಮೂಲ ಸೌಲಭ್ಯ ಕಲ್ಪಿಸದ ಅಮರನಾಥ ದೇವಾಲಯ ಆಡಳಿತ ಮಂಡಳಿಯನ್ನು ಇದೇ ನವೆಂಬರ್ನಲ್ಲಿ ಎನ್ಜಿಟಿ ತರಾಟೆಗೆ ತೆಗೆದುಕೊಂಡಿತ್ತು.</p>.<p>ಮೂಲ ಸೌಲಭ್ಯ ಕೊರತೆಯಿಂದ ಪರದಾಡುತ್ತಿರುವ ಯಾತ್ರಿಗಳಿಗೆ ಸರಿಯಾಗಿ ದರ್ಶನ ಪಡೆಯಲಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.</p>.<p>ಮೂಲಸೌಲಭ್ಯ ಒದಗಿಸುವಂತೆ 2012ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನವನ್ನು ದೇವಾಲಯದ ಆಡಳಿತ ಮಂಡಳಿ ಯಾಕೆ ಪಾಲಿಸಿಲ್ಲ ಎಂದು ಪ್ರಶ್ನಿಸಿತ್ತು.</p>.<p><strong>ತುಘಲಕ್ ಫತ್ವಾ: ವಿಎಚ್ಪಿ ಟೀಕೆ<br /> ನವದೆಹಲಿ: </strong>ಅಮರನಾಥ ದೇವಾಲಯದ ಪ್ರವೇಶ ಸ್ಥಳದಿಂದ ಆಚೆಗೆ ಯಾವುದೇ ಧಾರ್ಮಿಕ ಚಟುವಟಿಕೆಗಳನ್ನು ನಿಷೇಧಿಸಿರುವ ರಾಷ್ಟ್ರೀಯ ಹಸಿರುಪೀಠದ ಆದೇಶವನ್ನು ‘ತುಘಲಕ್ ಫತ್ವಾ’ ಎಂದು ವಿಶ್ವ ಹಿಂದೂ ಪರಿಷತ್ ಕಟುವಾಗಿ ಟೀಕಿಸಿದೆ.</p>.<p>ಸದಾ ಒಂದಿಲ್ಲ, ಒಂದು ಕಾರಣಕ್ಕಾಗಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡುವ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ ಎಂದು ವಿಎಚ್ಪಿ ಅಂತರರಾಷ್ಟ್ರೀಯ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಪ್ರತಿಕ್ರಿಯಿಸಿದ್ದಾರೆ.</p>.<p>ಎನ್ಜಿಟಿ ಈ ಆದೇಶವನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>