ಈ ಇಬ್ಬರಲ್ಲದೆ, ಜಾರ್ಖಂಡ್ನ ಮಾಜಿ ಮುಖ್ಯ ಕಾರ್ಯದರ್ಶಿ ಎ.ಕೆ. ಬಸು, ಖಾಸಗಿ ಕಂಪೆನಿ ವಿನಿ ಅಯರ್ನ್ ಎಂಡ್ ಸ್ಟೀಲ್ ಉದ್ಯೋಗ್ ಲಿ. (ವಿಸುಲ್) ಕೂಡ ಅಪರಾಧಿಗಳು ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಭರತ್ ಪರಾಶರ್ ಹೇಳಿದ್ದಾರೆ. ಜಾರ್ಖಂಡ್ನಲ್ಲಿರುವ ರಾಝರಾ ನಾರ್ಥ್ ಕಲ್ಲಿದ್ದಲು ನಿಕ್ಷೇಪವನ್ನು ಕೋಲ್ಕತ್ತದ ವಿಸುಲ್ಗೆ ಹಂಚಿಕೆ ಮಾಡುವಲ್ಲಿ ನಡೆದ ಅವ್ಯವಹಾರ ಮತ್ತು ಅಪರಾಧ ಒಳಸಂಚಿನಲ್ಲಿ ಇವರು ಭಾಗಿಯಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.