<p><strong>ಹಾವೇರಿ: </strong>ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಶ್ರೀ ಮತ್ತು ನಾಗನೂರಿನ ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ ತಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಿರುವುದಾಗಿ ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಸೋಮವಾರ ಇಲ್ಲಿ ಆರೋಪಿಸಿದರು.</p>.<p>‘ಉಭಯ ಶ್ರೀಗಳು ಹೇಳಿಕೊಳ್ಳುವಷ್ಟು ಸರಳ ಮಂದಿಯಲ್ಲ. ಆದರೆ, ಅವರಿಬ್ಬರೂ ದೊಡ್ಡ ಜಾಗದಲ್ಲಿದ್ದಾರೆ. ಹೀಗಾಗಿ ಅವರಿಂದ ರೋಸಿ ಹೋದರೂ ಸಮಾಜವು ಮೌನವಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.</p>.<p>‘ಸಚಿವ ವಿನಯ ಕುಲಕರ್ಣಿ ಮತ್ತು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನನಗೆ ಆತ್ಮೀಯರು. ಆದರೆ, ಈ ಖಾದಿಧಾರಿಗಳ ಹಿಂದೆ ಇರುವ ಉಭಯ ಖಾವಿಧಾರಿಗಳು ನನ್ನನ್ನು ತುಳಿದು ಹಾಕುವ ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು.</p>.<p>‘ಧರ್ಮಕಾರಣದಲ್ಲಿ ರಾಜ ಕಾರಣಿಗಳು ಮತ್ತು ರಾಜಕಾರಣದಲ್ಲಿ ಸ್ವಾಮೀಜಿಗಳು ಗುರುತಿಸಿಕೊಳ್ಳಬಾರದು. ಆದರೆ, ರಾಜಕಾರಣಿಗಳು ಆಮಿಷ ಮತ್ತು ಬೆದರಿಕೆಗಳಿಂದ ಪೀಠಾಧಿಪತಿ, ಮಠ ಹಾಗೂ ಮಠದ ಸಂಸ್ಥೆಗಳನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ದೇಶವನ್ನು ಭಯೋತ್ಪಾದಕರು ಆಕ್ರಮಿಸುವಂತೆ, ರಾಜಕಾರಣಿಗಳು ಮಠಗಳ ಕಬ್ಜಾಕ್ಕೆ ಯತ್ನಿಸುತ್ತಿದ್ದಾರೆ’ ಎಂದು ಹರಿಹಾಯ್ದರು.</p>.<p>‘ಅವರೇನಾದರೂ ವಿಧಾನಸೌಧ ವನ್ನು ಬಿಟ್ಟು ಕೊಡುತ್ತಾರಾ?’ ಎಂದು ಕೇಳಿದ ಅವರು, ಅಲ್ಲಿಗೆ ಸ್ವಾಮೀಜಿಗಳು ಹೋದರೆ ಹಾಸ್ಯಾಸ್ಪದ ಆಗಿ ಬಿಡುತ್ತದೆ ಎಂದೂ ಹೇಳಿದರು.</p>.<p>ಹೆಚ್ಚುತ್ತಿರುವ ಬೆದರಿಕೆ ‘ಇತ್ತೀಚೆಗೆ ಹಾವೇರಿಯ ಹುಕ್ಕೇರಿಮಠದಿಂದ ವಾಪಸ್ ಬರುವ ವೇಳೆಯಲ್ಲಿ ಕೆಲವರು ಬಂದು ನನಗೆ ಬೆದರಿಕೆ ಹಾಕಿದರು. ಇನ್ನೂ ಹಲವರು ನನ್ನ ತೇಜೋವಧೆ ಮಾಡುತ್ತಿದ್ದಾರೆ. ಸಮಾಜಕ್ಕಾಗಿ ನಾನು ಹುತಾತ್ಮನಾದರೂ ಪರವಾಗಿಲ್ಲ. ಧರ್ಮ ಒಡೆಯಲು ಬಿಡುವುದಿಲ್ಲ’ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.</p>.<p><strong>‘ಒಳಪಂಗಡಗಳ ಒಪ್ಪಿಗೆ ತೋರಿಸಿ’: </strong>‘ಪ್ರತ್ಯೇಕ ಲಿಂಗಾಯತ ಧರ್ಮ ಕುರಿತು ಹೋರಾಟ ನಡೆಸುವವರು, 99 ಒಳಪಂಗಡಗಳ ಸಮಾಜ ಬಾಂಧವರ ಸಭೆ ನಡೆಸಬೇಕು. ಅವರಿಂದ ನಾವೆಲ್ಲ ಲಿಂಗಾಯತರು ಎಂದು ಹೇಳಿಕೆ ಕೊಡಿಸಬೇಕು’ ಎಂದು ದಿಂಗಾಲೇಶ್ವರ ಸ್ವಾಮೀಜಿ ಸವಾಲು ಹಾಕಿದರು.</p>.<p><strong>‘ಆಚರಣೆ ಧರ್ಮವಲ್ಲ’</strong></p>.<p>‘ಲಿಂಗಾಯತ’ ಎನ್ನುವುದು ‘ವೀರಶೈವ’ ಧರ್ಮದ ದೀಕ್ಷಾ ಸಂಸ್ಕಾರದ ಒಂದು ಕ್ರಿಯೆ. ಒಂದು ಆಚರಣೆಯನ್ನೇ ‘ಧರ್ಮ’ ಎನ್ನುವುದು ದ್ರೋಹ. ಈ ಹಿಂದೆ ಜನಗಣತಿಯಲ್ಲಿ ‘ವೀರಶೈವ ಲಿಂಗಾಯತ’ ಎಂದೇ ನಮೂದಿಸುವಂತೆ ಎಲ್ಲರೂ ಹೇಳಿಕೆ ನೀಡಿದ್ದರು. ಅಂದು ಅವರೆಲ್ಲ ಆ ಪತ್ರಗಳಿಗೆ ಸಹಿ ಹಾಕಿದ್ದಾರೆ. ಈಗ ಮಾತ್ರ ತಿರುಗಿ ಬಿದ್ದಿದ್ದಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ: </strong>ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಶ್ರೀ ಮತ್ತು ನಾಗನೂರಿನ ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ ತಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಿರುವುದಾಗಿ ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಸೋಮವಾರ ಇಲ್ಲಿ ಆರೋಪಿಸಿದರು.</p>.<p>‘ಉಭಯ ಶ್ರೀಗಳು ಹೇಳಿಕೊಳ್ಳುವಷ್ಟು ಸರಳ ಮಂದಿಯಲ್ಲ. ಆದರೆ, ಅವರಿಬ್ಬರೂ ದೊಡ್ಡ ಜಾಗದಲ್ಲಿದ್ದಾರೆ. ಹೀಗಾಗಿ ಅವರಿಂದ ರೋಸಿ ಹೋದರೂ ಸಮಾಜವು ಮೌನವಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.</p>.<p>‘ಸಚಿವ ವಿನಯ ಕುಲಕರ್ಣಿ ಮತ್ತು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನನಗೆ ಆತ್ಮೀಯರು. ಆದರೆ, ಈ ಖಾದಿಧಾರಿಗಳ ಹಿಂದೆ ಇರುವ ಉಭಯ ಖಾವಿಧಾರಿಗಳು ನನ್ನನ್ನು ತುಳಿದು ಹಾಕುವ ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು.</p>.<p>‘ಧರ್ಮಕಾರಣದಲ್ಲಿ ರಾಜ ಕಾರಣಿಗಳು ಮತ್ತು ರಾಜಕಾರಣದಲ್ಲಿ ಸ್ವಾಮೀಜಿಗಳು ಗುರುತಿಸಿಕೊಳ್ಳಬಾರದು. ಆದರೆ, ರಾಜಕಾರಣಿಗಳು ಆಮಿಷ ಮತ್ತು ಬೆದರಿಕೆಗಳಿಂದ ಪೀಠಾಧಿಪತಿ, ಮಠ ಹಾಗೂ ಮಠದ ಸಂಸ್ಥೆಗಳನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ದೇಶವನ್ನು ಭಯೋತ್ಪಾದಕರು ಆಕ್ರಮಿಸುವಂತೆ, ರಾಜಕಾರಣಿಗಳು ಮಠಗಳ ಕಬ್ಜಾಕ್ಕೆ ಯತ್ನಿಸುತ್ತಿದ್ದಾರೆ’ ಎಂದು ಹರಿಹಾಯ್ದರು.</p>.<p>‘ಅವರೇನಾದರೂ ವಿಧಾನಸೌಧ ವನ್ನು ಬಿಟ್ಟು ಕೊಡುತ್ತಾರಾ?’ ಎಂದು ಕೇಳಿದ ಅವರು, ಅಲ್ಲಿಗೆ ಸ್ವಾಮೀಜಿಗಳು ಹೋದರೆ ಹಾಸ್ಯಾಸ್ಪದ ಆಗಿ ಬಿಡುತ್ತದೆ ಎಂದೂ ಹೇಳಿದರು.</p>.<p>ಹೆಚ್ಚುತ್ತಿರುವ ಬೆದರಿಕೆ ‘ಇತ್ತೀಚೆಗೆ ಹಾವೇರಿಯ ಹುಕ್ಕೇರಿಮಠದಿಂದ ವಾಪಸ್ ಬರುವ ವೇಳೆಯಲ್ಲಿ ಕೆಲವರು ಬಂದು ನನಗೆ ಬೆದರಿಕೆ ಹಾಕಿದರು. ಇನ್ನೂ ಹಲವರು ನನ್ನ ತೇಜೋವಧೆ ಮಾಡುತ್ತಿದ್ದಾರೆ. ಸಮಾಜಕ್ಕಾಗಿ ನಾನು ಹುತಾತ್ಮನಾದರೂ ಪರವಾಗಿಲ್ಲ. ಧರ್ಮ ಒಡೆಯಲು ಬಿಡುವುದಿಲ್ಲ’ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.</p>.<p><strong>‘ಒಳಪಂಗಡಗಳ ಒಪ್ಪಿಗೆ ತೋರಿಸಿ’: </strong>‘ಪ್ರತ್ಯೇಕ ಲಿಂಗಾಯತ ಧರ್ಮ ಕುರಿತು ಹೋರಾಟ ನಡೆಸುವವರು, 99 ಒಳಪಂಗಡಗಳ ಸಮಾಜ ಬಾಂಧವರ ಸಭೆ ನಡೆಸಬೇಕು. ಅವರಿಂದ ನಾವೆಲ್ಲ ಲಿಂಗಾಯತರು ಎಂದು ಹೇಳಿಕೆ ಕೊಡಿಸಬೇಕು’ ಎಂದು ದಿಂಗಾಲೇಶ್ವರ ಸ್ವಾಮೀಜಿ ಸವಾಲು ಹಾಕಿದರು.</p>.<p><strong>‘ಆಚರಣೆ ಧರ್ಮವಲ್ಲ’</strong></p>.<p>‘ಲಿಂಗಾಯತ’ ಎನ್ನುವುದು ‘ವೀರಶೈವ’ ಧರ್ಮದ ದೀಕ್ಷಾ ಸಂಸ್ಕಾರದ ಒಂದು ಕ್ರಿಯೆ. ಒಂದು ಆಚರಣೆಯನ್ನೇ ‘ಧರ್ಮ’ ಎನ್ನುವುದು ದ್ರೋಹ. ಈ ಹಿಂದೆ ಜನಗಣತಿಯಲ್ಲಿ ‘ವೀರಶೈವ ಲಿಂಗಾಯತ’ ಎಂದೇ ನಮೂದಿಸುವಂತೆ ಎಲ್ಲರೂ ಹೇಳಿಕೆ ನೀಡಿದ್ದರು. ಅಂದು ಅವರೆಲ್ಲ ಆ ಪತ್ರಗಳಿಗೆ ಸಹಿ ಹಾಕಿದ್ದಾರೆ. ಈಗ ಮಾತ್ರ ತಿರುಗಿ ಬಿದ್ದಿದ್ದಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>