<p><strong>ಷೇಖ್ ಅಬ್ದುಲ್ಲಾ: ಈಗ ಸರ್ವ ಸ್ವತಂತ್ರ ವ್ಯಕ್ತಿ</strong></p>.<p><strong>ನವದೆಹಲಿ, ಜ. 2–</strong> ಷೇಖ್ ಅಬ್ದುಲ್ಲಾ ಇಂದಿನಿಂದ ಸ್ವತಂತ್ರರು. ಕೇಂದ್ರ ಸರ್ಕಾರ ಇಂದು ಅವರ ಮೇಲೆ ಹೇರಿದ್ದ ಎಲ್ಲಾ ನಿರ್ಬಂಧಗಳನ್ನು ರದ್ದುಗೊಳಿಸಿತು.</p>.<p>ಬೆಳಿಗ್ಗೆ 9 ಗಂಟೆಗೆ ನಿರ್ಬಂಧಗಳನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ ಆಜ್ಞೆಯನ್ನು ಷೇಖ್ ಅಬ್ದುಲ್ಲಾರವರಿಗೆ ತಲುಪಿಸಲಾಯಿತು.</p>.<p>ಸ್ಥಾನಬದ್ಧತೆಯಿಂದ ವಿಮುಕ್ತರಾದ ಕೂಡಲೆ ಷೇಖ್ ಅಬ್ದುಲ್ಲಾ ರಾಷ್ಟ್ರಪತಿ ಡಾ. ಜಾಕೀರ್ ಹುಸೇನ್ರವರನ್ನು ಭೇಟಿ ಮಾಡಿದ್ದರು. ಬಳಿಕ ಅವರು ಜುಮ್ಮಾ ಮಸೀದಿಯಲ್ಲಿ ನಡೆದ ಈದ್ ಉಲ್ ಫಿತ್ತಾರ್ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದರು.</p>.<p><strong>ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಪುನಃ ಷೇಖ್ ಯತ್ನ</strong></p>.<p><strong>ನವದೆಹಲಿ, ಜ. 2–</strong> ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ತಾವು ನಡೆಸಿದ ಯತ್ನ ಜವಾಹರಲಾಲ್ ನೆಹ್ರೂ ಅವರ ನಿಧನದ ನಂತರ ನಿಂತು ಹೋಗಿದ್ದು, ಅದನ್ನು ಈಗ ಪುನಃ ನಡೆಸುವುದಾಗಿ ಷೇಖ್ ಅಬ್ದುಲ್ಲಾ ಇಂದು ಇಲ್ಲಿ ಹೇಳಿದರು.</p>.<p>ನೆಹ್ರೂ ಅವರಂತೆ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರೂ ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸುವರೇ ಎಂಬ ಪ್ರಶ್ನೆಗೆ, ತಂದೆಯ ಅಪೇಕ್ಷೆಯನ್ನು ಮಗಳು ಪೂರೈಸುವರೆಂದು ತಮ್ಮ ನಿರೀಕ್ಷೆ ಎಂದು ಅವರು ಹೇಳಿದರು.</p>.<p><strong>‘ಬದಲಿ ಹೃದಯದ’ಎರಡನೇ ಚಿಕಿತ್ಸೆ</strong></p>.<p><strong>ಕೇಪ್ಟೌನ್, ಜ. 2–</strong> ಗ್ರೂಟಿಷೂರ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ತಜ್ಞರು ಇಂದು ಸತ್ತ ವರ್ಣೀಯನೊಬ್ಬನ ಹೃದಯವನ್ನು 58 ವರ್ಷ ವಯಸ್ಸಿನ ಶ್ವೇತವರ್ಣೀಯನೊಬ್ಬನ ದೇಹದೊಳಕ್ಕೆ ಅಳವಡಿಸಿ ಶಸ್ತ್ರ ಚಿಕಿತ್ಸೆ ನಡೆಸಿದರು.</p>.<p>ಗ್ರೂಟಿಷೂರ್ ಆಸ್ಪತ್ರೆ ನಡೆಸಿರುವ ‘ಬದಲಿ ಹೃದಯ’ ಎರಡನೇ ಶಸ್ತ್ರ ಚಿಕಿತ್ಸೆ ಇದು.</p>.<p><strong>ರಾಜ್ಯದಲ್ಲಿ 20 ಲಕ್ಷ ವಿದ್ಯಾವಂತ ನಿರುದ್ಯೋಗಿಗಳು</strong></p>.<p><strong>ಬೆಂಗಳೂರು, ಜ. 2– </strong>ನಾಲ್ಕನೇ ಪಂಚವಾರ್ಷಿಕ ಯೋಜನೆ ಮುಗಿಯುವುದರೊಳಗೆ ಮೈಸೂರು ರಾಜ್ಯದಲ್ಲಿ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ 20 ಲಕ್ಷಗಳಿಗೇರುವ ಸಂಭವವಿದೆ.</p>.<p><strong>ಮಾನವ ಸ್ವಭಾವ ಪರಿವರ್ತನೆ ಪ್ರಯೋಗಾಲಯ: ಜೈಲುಗಳ ಬಗ್ಗೆ ಜ್ಯೋತ್ಸ್ನಾಶಹಾ ಕಲ್ಪನೆ</strong></p>.<p><strong>ಬೆಂಗಳೂರು, ಜ. 2–</strong> ತುರಂಗಗಳು, ಗಾಂಧೀಜಿಯು ಹೇಳಿದ ಹಾಗೆ ಅಪರಾಧ ಪ್ರವೃತ್ತಿಗೆ ಚಿಕಿತ್ಸೆ ಮಾಡುವ ‘ಆಸ್ಪತ್ರೆಗಳಾಗಿ’, ಅಪರಾಧಿಗಳ ಸುಧಾರಣೆ ಸೇವಾ ಡೈರೆಕ್ಟರ್ (ಕೇಂದ್ರದ) ಶ್ರೀಮತಿ ಜ್ಯೋತ್ಸ್ನಾ ಶಹಾರವರು ಆಶಿಸಿರುವ ಹಾಗೆ ‘ಮಾನವನ ಸ್ವಭಾವವನ್ನು ಪರಿವರ್ತಿಸುವ ಪ್ರಯೋಗಾಲಯಗಳಾಗಿ’ ಆಗುವ ದಿನ ಬಹು ದೂರ ಉಳಿದಿಲ್ಲ.</p>.<p>ಶ್ರೀಮತಿ ಜ್ಯೋತ್ಸ್ನಾರವರ ಅಭಿಪ್ರಾಯದಲ್ಲಿ ಜೈಲು ಸುಧಾರಣೆಗಳ ಬಗ್ಗೆ ನಿರೀಕ್ಷೆ ಕೈಗೂಡುವುದು ಹೊಸ, ಸಮಗ್ರ ಮತ್ತು ಏಕ ರೂಪದ ಅಖಿಲ ಭಾರತ ಬಂದೀಖಾನೆ ನಿಯಮಾವಳಿಯನ್ನು ಕಾರ್ಯಗತ ಮಾಡುವುದನ್ನು ಅವಲಂಬಿಸಿದೆ.</p>.<p><strong>ಹತ್ತು ಮಂದಿ ತಮಿಳು ಕವಿಗಳ ಪ್ರತಿಮೆ ಅನಾವರಣ</strong></p>.<p><strong>ಮದರಾಸು, ಜ. 2– </strong>ತಮಿಳು ಭಾಷೆ ಹಾಗೂ ಸಂಸ್ಕೃತಿಗೆ ಗಮನಾರ್ಹ ಸೇವೆ ಸಲ್ಲಿಸಿದ ಹತ್ತು ಮಂದಿ ಮಹಾ ಕವಿಗಳ ಹಾಗೂ ವಿದ್ವನ್ಮಣಿಗಳ ಪೂರ್ಣಾಕಾರದ ಪ್ರತಿಮೆಗಳನ್ನು ಇಂದು ರಾತ್ರಿ ಇಲ್ಲಿ ಅನಾವರಣ ಮಾಡಲಾಯಿತು.</p>.<p>ನಾಳೆ ಇಲ್ಲಿ ಪ್ರಾರಂಭವಾಗುವ ದ್ವಿತೀಯ ಅಂತರ ರಾಷ್ಟ್ರೀಯ ತಮಿಳು ಸಮ್ಮೇಳನಕ್ಕೆ ಸಂಬಂಧಿಸಿದಂತೆ ಮೇರಿನಾ ಬೀಚ್ನ ನಾನಾ ಸ್ಥಳಗಳಲ್ಲಿ ಅನಾವರಣ ಮಾಡಲಾದ ಈ ಪ್ರತಿಮೆಗಳಲ್ಲಿ ಇಬ್ಬರು ಮಹಿಳೆಯರ ಹಾಗೂ ಮೂವರು ವಿದೇಶಿಯರ ಪ್ರತಿಮೆಗಳೂ ಇವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಷೇಖ್ ಅಬ್ದುಲ್ಲಾ: ಈಗ ಸರ್ವ ಸ್ವತಂತ್ರ ವ್ಯಕ್ತಿ</strong></p>.<p><strong>ನವದೆಹಲಿ, ಜ. 2–</strong> ಷೇಖ್ ಅಬ್ದುಲ್ಲಾ ಇಂದಿನಿಂದ ಸ್ವತಂತ್ರರು. ಕೇಂದ್ರ ಸರ್ಕಾರ ಇಂದು ಅವರ ಮೇಲೆ ಹೇರಿದ್ದ ಎಲ್ಲಾ ನಿರ್ಬಂಧಗಳನ್ನು ರದ್ದುಗೊಳಿಸಿತು.</p>.<p>ಬೆಳಿಗ್ಗೆ 9 ಗಂಟೆಗೆ ನಿರ್ಬಂಧಗಳನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ ಆಜ್ಞೆಯನ್ನು ಷೇಖ್ ಅಬ್ದುಲ್ಲಾರವರಿಗೆ ತಲುಪಿಸಲಾಯಿತು.</p>.<p>ಸ್ಥಾನಬದ್ಧತೆಯಿಂದ ವಿಮುಕ್ತರಾದ ಕೂಡಲೆ ಷೇಖ್ ಅಬ್ದುಲ್ಲಾ ರಾಷ್ಟ್ರಪತಿ ಡಾ. ಜಾಕೀರ್ ಹುಸೇನ್ರವರನ್ನು ಭೇಟಿ ಮಾಡಿದ್ದರು. ಬಳಿಕ ಅವರು ಜುಮ್ಮಾ ಮಸೀದಿಯಲ್ಲಿ ನಡೆದ ಈದ್ ಉಲ್ ಫಿತ್ತಾರ್ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದರು.</p>.<p><strong>ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಪುನಃ ಷೇಖ್ ಯತ್ನ</strong></p>.<p><strong>ನವದೆಹಲಿ, ಜ. 2–</strong> ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ತಾವು ನಡೆಸಿದ ಯತ್ನ ಜವಾಹರಲಾಲ್ ನೆಹ್ರೂ ಅವರ ನಿಧನದ ನಂತರ ನಿಂತು ಹೋಗಿದ್ದು, ಅದನ್ನು ಈಗ ಪುನಃ ನಡೆಸುವುದಾಗಿ ಷೇಖ್ ಅಬ್ದುಲ್ಲಾ ಇಂದು ಇಲ್ಲಿ ಹೇಳಿದರು.</p>.<p>ನೆಹ್ರೂ ಅವರಂತೆ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರೂ ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸುವರೇ ಎಂಬ ಪ್ರಶ್ನೆಗೆ, ತಂದೆಯ ಅಪೇಕ್ಷೆಯನ್ನು ಮಗಳು ಪೂರೈಸುವರೆಂದು ತಮ್ಮ ನಿರೀಕ್ಷೆ ಎಂದು ಅವರು ಹೇಳಿದರು.</p>.<p><strong>‘ಬದಲಿ ಹೃದಯದ’ಎರಡನೇ ಚಿಕಿತ್ಸೆ</strong></p>.<p><strong>ಕೇಪ್ಟೌನ್, ಜ. 2–</strong> ಗ್ರೂಟಿಷೂರ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ತಜ್ಞರು ಇಂದು ಸತ್ತ ವರ್ಣೀಯನೊಬ್ಬನ ಹೃದಯವನ್ನು 58 ವರ್ಷ ವಯಸ್ಸಿನ ಶ್ವೇತವರ್ಣೀಯನೊಬ್ಬನ ದೇಹದೊಳಕ್ಕೆ ಅಳವಡಿಸಿ ಶಸ್ತ್ರ ಚಿಕಿತ್ಸೆ ನಡೆಸಿದರು.</p>.<p>ಗ್ರೂಟಿಷೂರ್ ಆಸ್ಪತ್ರೆ ನಡೆಸಿರುವ ‘ಬದಲಿ ಹೃದಯ’ ಎರಡನೇ ಶಸ್ತ್ರ ಚಿಕಿತ್ಸೆ ಇದು.</p>.<p><strong>ರಾಜ್ಯದಲ್ಲಿ 20 ಲಕ್ಷ ವಿದ್ಯಾವಂತ ನಿರುದ್ಯೋಗಿಗಳು</strong></p>.<p><strong>ಬೆಂಗಳೂರು, ಜ. 2– </strong>ನಾಲ್ಕನೇ ಪಂಚವಾರ್ಷಿಕ ಯೋಜನೆ ಮುಗಿಯುವುದರೊಳಗೆ ಮೈಸೂರು ರಾಜ್ಯದಲ್ಲಿ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ 20 ಲಕ್ಷಗಳಿಗೇರುವ ಸಂಭವವಿದೆ.</p>.<p><strong>ಮಾನವ ಸ್ವಭಾವ ಪರಿವರ್ತನೆ ಪ್ರಯೋಗಾಲಯ: ಜೈಲುಗಳ ಬಗ್ಗೆ ಜ್ಯೋತ್ಸ್ನಾಶಹಾ ಕಲ್ಪನೆ</strong></p>.<p><strong>ಬೆಂಗಳೂರು, ಜ. 2–</strong> ತುರಂಗಗಳು, ಗಾಂಧೀಜಿಯು ಹೇಳಿದ ಹಾಗೆ ಅಪರಾಧ ಪ್ರವೃತ್ತಿಗೆ ಚಿಕಿತ್ಸೆ ಮಾಡುವ ‘ಆಸ್ಪತ್ರೆಗಳಾಗಿ’, ಅಪರಾಧಿಗಳ ಸುಧಾರಣೆ ಸೇವಾ ಡೈರೆಕ್ಟರ್ (ಕೇಂದ್ರದ) ಶ್ರೀಮತಿ ಜ್ಯೋತ್ಸ್ನಾ ಶಹಾರವರು ಆಶಿಸಿರುವ ಹಾಗೆ ‘ಮಾನವನ ಸ್ವಭಾವವನ್ನು ಪರಿವರ್ತಿಸುವ ಪ್ರಯೋಗಾಲಯಗಳಾಗಿ’ ಆಗುವ ದಿನ ಬಹು ದೂರ ಉಳಿದಿಲ್ಲ.</p>.<p>ಶ್ರೀಮತಿ ಜ್ಯೋತ್ಸ್ನಾರವರ ಅಭಿಪ್ರಾಯದಲ್ಲಿ ಜೈಲು ಸುಧಾರಣೆಗಳ ಬಗ್ಗೆ ನಿರೀಕ್ಷೆ ಕೈಗೂಡುವುದು ಹೊಸ, ಸಮಗ್ರ ಮತ್ತು ಏಕ ರೂಪದ ಅಖಿಲ ಭಾರತ ಬಂದೀಖಾನೆ ನಿಯಮಾವಳಿಯನ್ನು ಕಾರ್ಯಗತ ಮಾಡುವುದನ್ನು ಅವಲಂಬಿಸಿದೆ.</p>.<p><strong>ಹತ್ತು ಮಂದಿ ತಮಿಳು ಕವಿಗಳ ಪ್ರತಿಮೆ ಅನಾವರಣ</strong></p>.<p><strong>ಮದರಾಸು, ಜ. 2– </strong>ತಮಿಳು ಭಾಷೆ ಹಾಗೂ ಸಂಸ್ಕೃತಿಗೆ ಗಮನಾರ್ಹ ಸೇವೆ ಸಲ್ಲಿಸಿದ ಹತ್ತು ಮಂದಿ ಮಹಾ ಕವಿಗಳ ಹಾಗೂ ವಿದ್ವನ್ಮಣಿಗಳ ಪೂರ್ಣಾಕಾರದ ಪ್ರತಿಮೆಗಳನ್ನು ಇಂದು ರಾತ್ರಿ ಇಲ್ಲಿ ಅನಾವರಣ ಮಾಡಲಾಯಿತು.</p>.<p>ನಾಳೆ ಇಲ್ಲಿ ಪ್ರಾರಂಭವಾಗುವ ದ್ವಿತೀಯ ಅಂತರ ರಾಷ್ಟ್ರೀಯ ತಮಿಳು ಸಮ್ಮೇಳನಕ್ಕೆ ಸಂಬಂಧಿಸಿದಂತೆ ಮೇರಿನಾ ಬೀಚ್ನ ನಾನಾ ಸ್ಥಳಗಳಲ್ಲಿ ಅನಾವರಣ ಮಾಡಲಾದ ಈ ಪ್ರತಿಮೆಗಳಲ್ಲಿ ಇಬ್ಬರು ಮಹಿಳೆಯರ ಹಾಗೂ ಮೂವರು ವಿದೇಶಿಯರ ಪ್ರತಿಮೆಗಳೂ ಇವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>