ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯ ಸರ್ಕಾರವು ಕುಲಶಾಸ್ತ್ರ ಅಧ್ಯಯನ ನಡೆಸಲು ಮೈಸೂರು ಬುಡಕಟ್ಟು ಅಧ್ಯಯನ ಸಂಸ್ಥೆಗೆ ಈ ಹಿಂದೆ ವಹಿಸಿತ್ತು. ಜತೆಗೆ, ಅಧ್ಯಯನಕ್ಕೆ ₹ 11 ಲಕ್ಷ ಅನುದಾನವನ್ನೂ ಬಿಡುಗಡೆ ಮಾಡಲಾಗಿತ್ತು. ಆದರೆ, ಕೆಲವರು ಕುತಂತ್ರ ನಡೆಸಿದ ಪರಿಣಾಮ ಅಧ್ಯಯನ ಸ್ಥಗಿತ ಮಾಡಲಾಗಿತ್ತು. ಮರು ಚಾಲನೆ ನೀಡುವ ಮೂಲಕ ಸಾಧನಾ ಸಂಭ್ರಮವನ್ನು ಸಾರ್ಥಕ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.