<p><strong>ಚಳ್ಳಕೆರೆ</strong>: ತಾಲ್ಲೂಕು ಪರಶುರಾಂಪುರ ಹೋಬಳಿಯ ಪುರ್ಲಹಳ್ಳಿಯ ವಸಲು ದಿನ್ನೆಯಲ್ಲಿ ಬುಧವಾರ ಬೆಳಿಗಿನ ಜಾವ ಕ್ಯಾತೆದೇವರಿಗೆ ಬಾರೆಕಳ್ಳೆಯ ಗುಡಿ ನಿರ್ಮಾಣ ಮಾಡುವ ಮೂಲಕ ಕಳಸ ಜ್ಯೋತಿ ಸ್ಥಾಪಿಸಲಾಯಿತು.</p>.<p>ವಸಲು ದಿನ್ನೆಯಲ್ಲಿ ಬಾರೆ ಕಳ್ಳೆಯಿಂದ ಗುಡಿ ನಿರ್ಮಿಸುವುದು ಜಾತ್ರೆಯ ಒಂದು ವಿಶೇಷ. ಕ್ಯಾತಗೊಂಡನಹಳ್ಳಿಯಿಂದ ದೇವರ ಪೂಜೆ ಮರ ಕಡಿದು ತಂದ ಜನರು, ಅದನ್ನು ಮಧ್ಯದಲ್ಲಿ ಇಟ್ಟು ಸುತ್ತಲು ಅಡ್ಡ ಸಾಪುಗಳನ್ನ ಹಾಕುತ್ತಾರೆ.</p>.<p>ಗುಡಿ ಕಟ್ಟಿಗೆ ಸೇರಿದ ಬೊಮ್ಮನಗೌಡರು ಹಾಗೂ ಕೋಣನ ಗೌಡರು ಒಂದೇ ದೇವಸ್ಥಾನದ ಅರ್ಧರ್ಧ ಭಾಗವನ್ನು ಬಾರೆ ಕಳ್ಳೆ, ತುಗ್ಗಲಿ ಮೋರು, ಮುಂತಾದ ವಸ್ತುಗಳನ್ನು ಬಳಸಿ 15ರಿಂದ 20 ನಿಮಿಷಗಳಲ್ಲಿ ನಿರ್ಮಾಣ ಮಾಡುವುದು ನೆರೆದವರಲ್ಲಿ ರೋಮಾಂಚನವನ್ನು ಉಂಟುಮಾಡಿತು.</p>.<p>ಗುಡುಕಟ್ಟಿದ ನಂತರ ಬೊಮ್ಮನ ಗೌಡರ ಮತ್ತು ಕೋಣನ ಗೌಡರ ಒಬ್ಬೊಬ್ಬ ಈರಗಾರರು ಕಳ್ಳೆಗುಡಿಯ ಮೇಲೆ ತಾಮುಂದು – ನಾಮುಂದು ಎಂದು ಕಳಸ ಪ್ರತಿಷ್ಠಾಪಿಸುವ ದೃಶ್ಯ ನೋಡುಗರ ಮನಸೂರೆಗೊಂಡಿತು. ಈ ಬಾರಿ ಕಸ್ತೂರಿ ತಿಮ್ಮಣಹಳ್ಳಿಯ ರಾಜಣ್ಣ ಮತ್ತು ಕ್ಯಾತಗೊಂಡನಹಳ್ಳಿಯ ರಾಜು ಎಂಬುವವರು ಬಾರೆ ಕಳ್ಳೆಯ ಮೇಲೆ ಕಳಸವನ್ನು ಸ್ಥಾಪಿಸಿ ಬಂದರು.</p>.<p>ಗುರುವಾರ ಬಂಜಿಗೆರೆಯಿಂದ ವೀರಣ್ಣ ದೇವರು, ಬತವಿನ ದೇವರು, ಐಗ್ಲಾರಹಳ್ಳಿಯ ತಾಳಿದೇವರು, ಜೊತೆಗೆ ಚನ್ನಮ್ಮನಾಗತಿಹಳ್ಳಿಯ ಕ್ಯಾತೆದೇವರ ಉತ್ಸವ ಮೂರ್ತಿಗಳನ್ನು ಪುರ್ಲಹಳ್ಳಿ ವಸಲು ದಿನ್ನೆಯಲ್ಲಿ ಕಟ್ಟಿರುವ ಗುಡಿಗೆ ತಂದು ಜಾತ್ರೆ ಮುಗಿಯುವರೆಗೆ ಸ್ಥಾಪಿಸಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಳ್ಳಕೆರೆ</strong>: ತಾಲ್ಲೂಕು ಪರಶುರಾಂಪುರ ಹೋಬಳಿಯ ಪುರ್ಲಹಳ್ಳಿಯ ವಸಲು ದಿನ್ನೆಯಲ್ಲಿ ಬುಧವಾರ ಬೆಳಿಗಿನ ಜಾವ ಕ್ಯಾತೆದೇವರಿಗೆ ಬಾರೆಕಳ್ಳೆಯ ಗುಡಿ ನಿರ್ಮಾಣ ಮಾಡುವ ಮೂಲಕ ಕಳಸ ಜ್ಯೋತಿ ಸ್ಥಾಪಿಸಲಾಯಿತು.</p>.<p>ವಸಲು ದಿನ್ನೆಯಲ್ಲಿ ಬಾರೆ ಕಳ್ಳೆಯಿಂದ ಗುಡಿ ನಿರ್ಮಿಸುವುದು ಜಾತ್ರೆಯ ಒಂದು ವಿಶೇಷ. ಕ್ಯಾತಗೊಂಡನಹಳ್ಳಿಯಿಂದ ದೇವರ ಪೂಜೆ ಮರ ಕಡಿದು ತಂದ ಜನರು, ಅದನ್ನು ಮಧ್ಯದಲ್ಲಿ ಇಟ್ಟು ಸುತ್ತಲು ಅಡ್ಡ ಸಾಪುಗಳನ್ನ ಹಾಕುತ್ತಾರೆ.</p>.<p>ಗುಡಿ ಕಟ್ಟಿಗೆ ಸೇರಿದ ಬೊಮ್ಮನಗೌಡರು ಹಾಗೂ ಕೋಣನ ಗೌಡರು ಒಂದೇ ದೇವಸ್ಥಾನದ ಅರ್ಧರ್ಧ ಭಾಗವನ್ನು ಬಾರೆ ಕಳ್ಳೆ, ತುಗ್ಗಲಿ ಮೋರು, ಮುಂತಾದ ವಸ್ತುಗಳನ್ನು ಬಳಸಿ 15ರಿಂದ 20 ನಿಮಿಷಗಳಲ್ಲಿ ನಿರ್ಮಾಣ ಮಾಡುವುದು ನೆರೆದವರಲ್ಲಿ ರೋಮಾಂಚನವನ್ನು ಉಂಟುಮಾಡಿತು.</p>.<p>ಗುಡುಕಟ್ಟಿದ ನಂತರ ಬೊಮ್ಮನ ಗೌಡರ ಮತ್ತು ಕೋಣನ ಗೌಡರ ಒಬ್ಬೊಬ್ಬ ಈರಗಾರರು ಕಳ್ಳೆಗುಡಿಯ ಮೇಲೆ ತಾಮುಂದು – ನಾಮುಂದು ಎಂದು ಕಳಸ ಪ್ರತಿಷ್ಠಾಪಿಸುವ ದೃಶ್ಯ ನೋಡುಗರ ಮನಸೂರೆಗೊಂಡಿತು. ಈ ಬಾರಿ ಕಸ್ತೂರಿ ತಿಮ್ಮಣಹಳ್ಳಿಯ ರಾಜಣ್ಣ ಮತ್ತು ಕ್ಯಾತಗೊಂಡನಹಳ್ಳಿಯ ರಾಜು ಎಂಬುವವರು ಬಾರೆ ಕಳ್ಳೆಯ ಮೇಲೆ ಕಳಸವನ್ನು ಸ್ಥಾಪಿಸಿ ಬಂದರು.</p>.<p>ಗುರುವಾರ ಬಂಜಿಗೆರೆಯಿಂದ ವೀರಣ್ಣ ದೇವರು, ಬತವಿನ ದೇವರು, ಐಗ್ಲಾರಹಳ್ಳಿಯ ತಾಳಿದೇವರು, ಜೊತೆಗೆ ಚನ್ನಮ್ಮನಾಗತಿಹಳ್ಳಿಯ ಕ್ಯಾತೆದೇವರ ಉತ್ಸವ ಮೂರ್ತಿಗಳನ್ನು ಪುರ್ಲಹಳ್ಳಿ ವಸಲು ದಿನ್ನೆಯಲ್ಲಿ ಕಟ್ಟಿರುವ ಗುಡಿಗೆ ತಂದು ಜಾತ್ರೆ ಮುಗಿಯುವರೆಗೆ ಸ್ಥಾಪಿಸಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>