<p><strong>ವಿಜಯಪುರ:</strong> ಸಿರಿಧಾನ್ಯಗಳಲ್ಲೊಂದಾದ ಸಜ್ಜೆಯ ಧಾರಣೆ ಪಾತಾಳಕ್ಕೆ ಕುಸಿದಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಉತ್ತಮ ಬೆಲೆ ದೊರಕಬಹುದು ಎಂಬ ನಿರೀಕ್ಷೆಯಿಂದ ಇದುವರೆಗೂ ಉತ್ಪನ್ನ ಕಾಪಿಟ್ಟು ಕಾದಿದ್ದ ರೈತರು, ವಿಧಿಯಿಲ್ಲದೆ ಸಿಕ್ಕಷ್ಟು ರೊಕ್ಕಕ್ಕೆ ಮಾರುತ್ತಿದ್ದಾರೆ.</p>.<p>‘ಧಾರಣೆ ಹೆಚ್ಚಬಹುದು ಎಂದು ಎರಡು ತಿಂಗಳಿಂದ ಕಾದಿದ್ದೇನೆ. ಒಂದು ಸಾವಿರ ರೂಪಾಯಿ ಗಡಿ ದಾಟಿದರೆ ಪುಣ್ಯ ಎನ್ನುವಂಥ ಪರಿಸ್ಥಿತಿಯಿದೆ. ವ್ಯಾಪಾರಿಗಳನ್ನು ಕೇಳಿದರೆ ಬೇಡಿಕೆಯೇ ಇಲ್ಲ. ಕೊಂಡು ನಾವೇನು ಮಾಡೋಣ ಎನ್ನುತ್ತಿದ್ದಾರೆ. ಇಷ್ಟು ದಿನವೇ ಕಾದಿದ್ದೇನಂತೆ; ಇನ್ನೊಂದಿಷ್ಟು ದಿನ ಕಾಯುತ್ತೇನೆ. ಧಾರಣೆ ಸಿಗದಿದ್ದರೆ ಮನೆಯಲ್ಲಿರುವ 15 ಕ್ವಿಂಟಲ್ ಸಜ್ಜೆಯನ್ನು ಸಿಕ್ಕಷ್ಟು ರೊಕ್ಕಕ್ಕೆ ಮಾರಾಟ ಮಾಡಬೇಕಾಗುತ್ತದೆ’ ಎಂದು ತಾಂಬಾದ ಶ್ರೀಶೈಲ ಬರಡೋಲ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಈ ವರ್ಸ ಸಜ್ಜಿ ಬೆಳೆದೋರ್ದು ಭಾಳ ತ್ರಾಸ ಐತ್ರಿ. ಖರ್ಚಿನ ರೊಕ್ಕಾನ... ಹುಟ್ಟವಲ್ದು. ಅರ್ಧಕರ್ಧ ಬೆಳೀನ ₹925ರ ಹಂಗ ಮಾರೇನಿ. ಇನ್ನರ್ಧ... ನೋಡ್ಬೇಕು. ಧಾರಣಿ ಬಂದೀತಂತ ಕಾಯಾಕತ್ತೇನಿ. ಏನಾಕ್ಕೈತೋ ತಿಳೀವಲ್ದು’ ಎಂದು ಇಂಚಗೇರಿಯ ಪ್ರಗತಿಪರ ರೈತ ಶೆಟ್ಟೆಪ್ಪ ದುಂಡಪ್ಪ ನಾವಿ ಅಳಲು ತೋಡಿಕೊಂಡರು.</p>.<p>ಸಜ್ಜೆಯನ್ನು ಖರೀದಿಸುವವರೇ ಇಲ್ಲ. ಹೊರಗಿನಿಂದಲೂ ಬೇಡಿಕೆ ಬಂದಿಲ್ಲ. ಹೀಗಾಗಿ ಧಾರಣೆ ಕುಸಿದಿದೆ. ಇತ್ತೀಚೆಗೆ ಮಾರುಕಟ್ಟೆಗೆ ಆವಕವೂ ಕಡಿಮೆಯಾಗಿದೆ ಎಂದು ಎಪಿಎಂಸಿ ಮಾರುಕಟ್ಟೆ ವ್ಯಾಪಾರಿ ಎಸ್.ವಿ.ಮಠ ತಿಳಿಸಿದರು.</p>.<p><strong>ಬದಲಾದ ಆಹಾರ ಪದ್ಧತಿ: </strong>ಈಚೆಗಿನ ದಿನಗಳಲ್ಲಿ ಆಹಾರ ಪದ್ಧತಿಯಲ್ಲಿನ ಬದಲಾವಣೆ, ಬಳಕೆಯ ಪ್ರಮಾಣ ಕಡಿಮೆಯಾದಂತೆ, ಧಾರಣೆಯೂ ಇಳಿಮುಖವಾಗಿದೆ. ಹೀಗಾಗಿ ಬಿತ್ತನೆ ಪ್ರದೇಶವೂ ಕುಂಠಿತಗೊಳ್ಳುತ್ತಿದೆ. ಎರಡ್ಮೂರು ವರ್ಷಗಳ ಹಿಂದೆ ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ 45,000 ಹೆಕ್ಟೇರ್ನಲ್ಲಿ ಬಿತ್ತನೆಯಾಗುತ್ತಿತ್ತು. ಈ ಬಾರಿ 27,000 ಹೆಕ್ಟೇರ್ ಬಿತ್ತನೆಯಾಗಿತ್ತು ಎಂದು ವಿಜಯಪುರ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಮಂಜುನಾಥ್ ಹೇಳಿದರು.</p>.<p>ರಾಜ್ಯದಲ್ಲಿ ವಾರ್ಷಿಕ 1.25 ಲಕ್ಷದಿಂದ 1.50 ಲಕ್ಷ ಹೆಕ್ಟೇರ್ನಲ್ಲಿ ಸಜ್ಜೆ ಬಿತ್ತನೆಯಾಗುತ್ತದೆ. ಕೊಪ್ಪಳ, ವಿಜಯಪುರ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ, ರಾಯಚೂರು, ಬಳ್ಳಾರಿ, ಚಿತ್ರದುರ್ಗದ ಮಳೆಯಾಶ್ರಿತ ತಾಲ್ಲೂಕಿನ ಕೆಲವೆಡೆ ಸಜ್ಜೆ ಬೆಳೆಯಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.</p>.<p>‘ಸಜ್ಜೆ ಔಷಧೀಯ ಗುಣ ಹೊಂದಿರುವ ಆಹಾರ ಧಾನ್ಯ. ಹೃದಯ ಸಂಬಂಧಿ ರೋಗಗಳು, ಮಧುಮೇಹ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಮಹತ್ವವನ್ನು ಬಿಂಬಿಸಲು ಇಲಾಖೆಯು ಮೇಳಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ರೂಪಿಸಿದೆ’ ಎಂದು ಹೇಳಿದರು.</p>.<p>*<br /> ಸಜ್ಜೆ ಕಡುಬು, ಸಜ್ಜೆ ರೊಟ್ಟಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಬಳಸುವವರ ಸಂಖ್ಯೆ ಕಡಿಮೆಯಾದಂತೆ ಧಾರಣೆಯೂ ಇಳಿಮುಖವಾಗಿದೆ.<br /> <em><strong>-ಆರ್.ಎಸ್.ಲೋಣಿ, ವ್ಯಾಪಾರಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ಸಿರಿಧಾನ್ಯಗಳಲ್ಲೊಂದಾದ ಸಜ್ಜೆಯ ಧಾರಣೆ ಪಾತಾಳಕ್ಕೆ ಕುಸಿದಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಉತ್ತಮ ಬೆಲೆ ದೊರಕಬಹುದು ಎಂಬ ನಿರೀಕ್ಷೆಯಿಂದ ಇದುವರೆಗೂ ಉತ್ಪನ್ನ ಕಾಪಿಟ್ಟು ಕಾದಿದ್ದ ರೈತರು, ವಿಧಿಯಿಲ್ಲದೆ ಸಿಕ್ಕಷ್ಟು ರೊಕ್ಕಕ್ಕೆ ಮಾರುತ್ತಿದ್ದಾರೆ.</p>.<p>‘ಧಾರಣೆ ಹೆಚ್ಚಬಹುದು ಎಂದು ಎರಡು ತಿಂಗಳಿಂದ ಕಾದಿದ್ದೇನೆ. ಒಂದು ಸಾವಿರ ರೂಪಾಯಿ ಗಡಿ ದಾಟಿದರೆ ಪುಣ್ಯ ಎನ್ನುವಂಥ ಪರಿಸ್ಥಿತಿಯಿದೆ. ವ್ಯಾಪಾರಿಗಳನ್ನು ಕೇಳಿದರೆ ಬೇಡಿಕೆಯೇ ಇಲ್ಲ. ಕೊಂಡು ನಾವೇನು ಮಾಡೋಣ ಎನ್ನುತ್ತಿದ್ದಾರೆ. ಇಷ್ಟು ದಿನವೇ ಕಾದಿದ್ದೇನಂತೆ; ಇನ್ನೊಂದಿಷ್ಟು ದಿನ ಕಾಯುತ್ತೇನೆ. ಧಾರಣೆ ಸಿಗದಿದ್ದರೆ ಮನೆಯಲ್ಲಿರುವ 15 ಕ್ವಿಂಟಲ್ ಸಜ್ಜೆಯನ್ನು ಸಿಕ್ಕಷ್ಟು ರೊಕ್ಕಕ್ಕೆ ಮಾರಾಟ ಮಾಡಬೇಕಾಗುತ್ತದೆ’ ಎಂದು ತಾಂಬಾದ ಶ್ರೀಶೈಲ ಬರಡೋಲ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಈ ವರ್ಸ ಸಜ್ಜಿ ಬೆಳೆದೋರ್ದು ಭಾಳ ತ್ರಾಸ ಐತ್ರಿ. ಖರ್ಚಿನ ರೊಕ್ಕಾನ... ಹುಟ್ಟವಲ್ದು. ಅರ್ಧಕರ್ಧ ಬೆಳೀನ ₹925ರ ಹಂಗ ಮಾರೇನಿ. ಇನ್ನರ್ಧ... ನೋಡ್ಬೇಕು. ಧಾರಣಿ ಬಂದೀತಂತ ಕಾಯಾಕತ್ತೇನಿ. ಏನಾಕ್ಕೈತೋ ತಿಳೀವಲ್ದು’ ಎಂದು ಇಂಚಗೇರಿಯ ಪ್ರಗತಿಪರ ರೈತ ಶೆಟ್ಟೆಪ್ಪ ದುಂಡಪ್ಪ ನಾವಿ ಅಳಲು ತೋಡಿಕೊಂಡರು.</p>.<p>ಸಜ್ಜೆಯನ್ನು ಖರೀದಿಸುವವರೇ ಇಲ್ಲ. ಹೊರಗಿನಿಂದಲೂ ಬೇಡಿಕೆ ಬಂದಿಲ್ಲ. ಹೀಗಾಗಿ ಧಾರಣೆ ಕುಸಿದಿದೆ. ಇತ್ತೀಚೆಗೆ ಮಾರುಕಟ್ಟೆಗೆ ಆವಕವೂ ಕಡಿಮೆಯಾಗಿದೆ ಎಂದು ಎಪಿಎಂಸಿ ಮಾರುಕಟ್ಟೆ ವ್ಯಾಪಾರಿ ಎಸ್.ವಿ.ಮಠ ತಿಳಿಸಿದರು.</p>.<p><strong>ಬದಲಾದ ಆಹಾರ ಪದ್ಧತಿ: </strong>ಈಚೆಗಿನ ದಿನಗಳಲ್ಲಿ ಆಹಾರ ಪದ್ಧತಿಯಲ್ಲಿನ ಬದಲಾವಣೆ, ಬಳಕೆಯ ಪ್ರಮಾಣ ಕಡಿಮೆಯಾದಂತೆ, ಧಾರಣೆಯೂ ಇಳಿಮುಖವಾಗಿದೆ. ಹೀಗಾಗಿ ಬಿತ್ತನೆ ಪ್ರದೇಶವೂ ಕುಂಠಿತಗೊಳ್ಳುತ್ತಿದೆ. ಎರಡ್ಮೂರು ವರ್ಷಗಳ ಹಿಂದೆ ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ 45,000 ಹೆಕ್ಟೇರ್ನಲ್ಲಿ ಬಿತ್ತನೆಯಾಗುತ್ತಿತ್ತು. ಈ ಬಾರಿ 27,000 ಹೆಕ್ಟೇರ್ ಬಿತ್ತನೆಯಾಗಿತ್ತು ಎಂದು ವಿಜಯಪುರ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಮಂಜುನಾಥ್ ಹೇಳಿದರು.</p>.<p>ರಾಜ್ಯದಲ್ಲಿ ವಾರ್ಷಿಕ 1.25 ಲಕ್ಷದಿಂದ 1.50 ಲಕ್ಷ ಹೆಕ್ಟೇರ್ನಲ್ಲಿ ಸಜ್ಜೆ ಬಿತ್ತನೆಯಾಗುತ್ತದೆ. ಕೊಪ್ಪಳ, ವಿಜಯಪುರ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ, ರಾಯಚೂರು, ಬಳ್ಳಾರಿ, ಚಿತ್ರದುರ್ಗದ ಮಳೆಯಾಶ್ರಿತ ತಾಲ್ಲೂಕಿನ ಕೆಲವೆಡೆ ಸಜ್ಜೆ ಬೆಳೆಯಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.</p>.<p>‘ಸಜ್ಜೆ ಔಷಧೀಯ ಗುಣ ಹೊಂದಿರುವ ಆಹಾರ ಧಾನ್ಯ. ಹೃದಯ ಸಂಬಂಧಿ ರೋಗಗಳು, ಮಧುಮೇಹ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಮಹತ್ವವನ್ನು ಬಿಂಬಿಸಲು ಇಲಾಖೆಯು ಮೇಳಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ರೂಪಿಸಿದೆ’ ಎಂದು ಹೇಳಿದರು.</p>.<p>*<br /> ಸಜ್ಜೆ ಕಡುಬು, ಸಜ್ಜೆ ರೊಟ್ಟಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಬಳಸುವವರ ಸಂಖ್ಯೆ ಕಡಿಮೆಯಾದಂತೆ ಧಾರಣೆಯೂ ಇಳಿಮುಖವಾಗಿದೆ.<br /> <em><strong>-ಆರ್.ಎಸ್.ಲೋಣಿ, ವ್ಯಾಪಾರಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>