<p>‘ಈ ಬಾರಿಯಾದರೂ ನಮ್ಮ ಈರಪ್ಪಗೆ ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕಿತ್ತು…’ ಬೈಟು ಬಳಗದಲ್ಲಿ ಬದ್ರಿ ಅನುಕಂಪ ಸೂಚಿಸಿದ.</p>.<p>‘ಪಾಪ, ಮಂತ್ರಿಯ ಡ್ರೈವರ್ನಿಂದ ಮುಖ್ಯಮಂತ್ರಿ ಅಡ್ವೈಸರ್ವರೆಗೆ ವಶೀಲಿ ಹಚ್ಚಿದರೂ ಕನ್ನಡಾಂಬೆ ಒಲಿಯಲಿಲ್ಲ’.</p>.<p>‘ಹೌದು, ಆತನ ದೊಡ್ಡಮಟ್ಟದ ಪ್ರಭಾವವೂ ಸಹಾಯಕ್ಕೆ ಬರಲಿಲ್ಲ ನೋಡು…’</p>.<p>‘ಯಾವುದೇ ಪದವಿ, ಪ್ರಶಸ್ತಿ, ಹುದ್ದೆಗೆ ಬೇಕಿರುವುದು ದೊಡ್ಡ ಪ್ರಭಾವ ಅಲ್ಲ, ದೊಡ್ಡ ಹಣೆ’– ಥೇಟ್ ಮಧುಗಿರಿ ರಾಜಣ್ಣ ಥರ ಅದೇನೋ ಹುಳ ಬಿಟ್ಟ ಕೊಟ್ರಿ. ಎಲ್ಲರೂ ಮುಖಮುಖ ನೋಡಿಕೊಂಡರು. ಕೊನೆಗೆ ಕೊಟ್ರಿಯೇ ವಿವರಣೆ ಕೊಟ್ಟ:</p>.<p>‘ದಾನೆ ದಾನೆ ಪೆ ಲಿಖಾ ಹೈ ಖಾನೆ ವಾಲೆ ಕಾ ನಾಮ್ ಅಂತಾರೆ. ಹಾಗೇ ಹಣೆ ಹಣೆ ಮೇಲೆ ಹುದ್ದೆಯ, ಪ್ರಶಸ್ತಿಯ ಹೆಸರು ಬರೆದಿರುತ್ತದೆ’.</p>.<p>‘ದೊಡ್ಡ ಹಣೆಯ ಮೇಲೆ ದೊಡ್ಡಕ್ಷರದಲ್ಲಿ ಬರೆದರಷ್ಟೇ ಸಾಲದು, ಬರಹದ ಭಾಷೆಯೂ ಮುಖ್ಯವಾಗುತ್ತದೆ’.</p>.<p>‘ಬ್ರಹ್ಮ ದೊಡ್ಡ ಹುದ್ದೆಯನ್ನೇ ಬರೆದಿರಬಹುದು, ಕಿತಾಪತಿ ಚಿತ್ರಗುಪ್ತ ಚಿಕ್ಕದಾಗಿ ಓದಿಕೊಂಡರೇ...’</p>.<p>‘ಹಾಗೇ ಆದಂತಿದೆ, ಈರಪ್ಪನ ಹಣೆಯ ಮೇಲೆ ಸಂಸ್ಕೃತದಲ್ಲಿ ಬರೆದ ಪ್ರಶಸ್ತಿ ಹೆಸರು ಓದುವಲ್ಲಿ ಸಂಸ್ಕೃತಿ ಸಚಿವ ತಂಗಡಗಿ ತಡವರಿಸಿದ್ದಾರೆ!’</p>.<p>‘ಅದರಲ್ಲಿ ಅಚ್ಚರಿಯೇನಿಲ್ಲ. ಬಂಡೆಯಣ್ಣನ ಹಣೆಯ ಮೇಲಿನ ದೆಹಲಿ ಬ್ರಹ್ಮನ ಬರಹ ಹಿಂದಿಯಲ್ಲಿ ಇರೋದೇ ಈಗಿನ ರಾಜಕೀಯ ಫಜೀತಿಗೆ ಕಾರಣ. ಅಪ್ಪಟ ಕನ್ನಡ ಕುವರ ಯತೀಂದ್ರ ಅದನ್ನು ‘ಉಪಮುಖ್ಯಮಂತ್ರಿ’ ಎಂದು ಓದಿಕೊಂಡರೆ, ಮಾಗಡಿ ಬಾಲಕೃಷ್ಣಗೆ ಅದು ‘ಮುಖ್ಯಮಂತ್ರಿ’ ಅಂತ ಕಾಣಿಸುತ್ತಿದೆ’.</p>.<p>‘ಒಕ್ಕೂಟ ವಿರೋಧಿ ಹಿಂದಿ ಹಣೆಬರಹ ಸಾಕು, ಕನ್ನಡ ಹಣೆಬರಹ ಬೇಕು’ ತಿಂಗಳೇಶ ರಾಜ್ಯೋತ್ಸವಕ್ಕೆ ಹೊಸ ಘೋಷಣೆ ಸಿದ್ಧಪಡಿಸಿದ! </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಈ ಬಾರಿಯಾದರೂ ನಮ್ಮ ಈರಪ್ಪಗೆ ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕಿತ್ತು…’ ಬೈಟು ಬಳಗದಲ್ಲಿ ಬದ್ರಿ ಅನುಕಂಪ ಸೂಚಿಸಿದ.</p>.<p>‘ಪಾಪ, ಮಂತ್ರಿಯ ಡ್ರೈವರ್ನಿಂದ ಮುಖ್ಯಮಂತ್ರಿ ಅಡ್ವೈಸರ್ವರೆಗೆ ವಶೀಲಿ ಹಚ್ಚಿದರೂ ಕನ್ನಡಾಂಬೆ ಒಲಿಯಲಿಲ್ಲ’.</p>.<p>‘ಹೌದು, ಆತನ ದೊಡ್ಡಮಟ್ಟದ ಪ್ರಭಾವವೂ ಸಹಾಯಕ್ಕೆ ಬರಲಿಲ್ಲ ನೋಡು…’</p>.<p>‘ಯಾವುದೇ ಪದವಿ, ಪ್ರಶಸ್ತಿ, ಹುದ್ದೆಗೆ ಬೇಕಿರುವುದು ದೊಡ್ಡ ಪ್ರಭಾವ ಅಲ್ಲ, ದೊಡ್ಡ ಹಣೆ’– ಥೇಟ್ ಮಧುಗಿರಿ ರಾಜಣ್ಣ ಥರ ಅದೇನೋ ಹುಳ ಬಿಟ್ಟ ಕೊಟ್ರಿ. ಎಲ್ಲರೂ ಮುಖಮುಖ ನೋಡಿಕೊಂಡರು. ಕೊನೆಗೆ ಕೊಟ್ರಿಯೇ ವಿವರಣೆ ಕೊಟ್ಟ:</p>.<p>‘ದಾನೆ ದಾನೆ ಪೆ ಲಿಖಾ ಹೈ ಖಾನೆ ವಾಲೆ ಕಾ ನಾಮ್ ಅಂತಾರೆ. ಹಾಗೇ ಹಣೆ ಹಣೆ ಮೇಲೆ ಹುದ್ದೆಯ, ಪ್ರಶಸ್ತಿಯ ಹೆಸರು ಬರೆದಿರುತ್ತದೆ’.</p>.<p>‘ದೊಡ್ಡ ಹಣೆಯ ಮೇಲೆ ದೊಡ್ಡಕ್ಷರದಲ್ಲಿ ಬರೆದರಷ್ಟೇ ಸಾಲದು, ಬರಹದ ಭಾಷೆಯೂ ಮುಖ್ಯವಾಗುತ್ತದೆ’.</p>.<p>‘ಬ್ರಹ್ಮ ದೊಡ್ಡ ಹುದ್ದೆಯನ್ನೇ ಬರೆದಿರಬಹುದು, ಕಿತಾಪತಿ ಚಿತ್ರಗುಪ್ತ ಚಿಕ್ಕದಾಗಿ ಓದಿಕೊಂಡರೇ...’</p>.<p>‘ಹಾಗೇ ಆದಂತಿದೆ, ಈರಪ್ಪನ ಹಣೆಯ ಮೇಲೆ ಸಂಸ್ಕೃತದಲ್ಲಿ ಬರೆದ ಪ್ರಶಸ್ತಿ ಹೆಸರು ಓದುವಲ್ಲಿ ಸಂಸ್ಕೃತಿ ಸಚಿವ ತಂಗಡಗಿ ತಡವರಿಸಿದ್ದಾರೆ!’</p>.<p>‘ಅದರಲ್ಲಿ ಅಚ್ಚರಿಯೇನಿಲ್ಲ. ಬಂಡೆಯಣ್ಣನ ಹಣೆಯ ಮೇಲಿನ ದೆಹಲಿ ಬ್ರಹ್ಮನ ಬರಹ ಹಿಂದಿಯಲ್ಲಿ ಇರೋದೇ ಈಗಿನ ರಾಜಕೀಯ ಫಜೀತಿಗೆ ಕಾರಣ. ಅಪ್ಪಟ ಕನ್ನಡ ಕುವರ ಯತೀಂದ್ರ ಅದನ್ನು ‘ಉಪಮುಖ್ಯಮಂತ್ರಿ’ ಎಂದು ಓದಿಕೊಂಡರೆ, ಮಾಗಡಿ ಬಾಲಕೃಷ್ಣಗೆ ಅದು ‘ಮುಖ್ಯಮಂತ್ರಿ’ ಅಂತ ಕಾಣಿಸುತ್ತಿದೆ’.</p>.<p>‘ಒಕ್ಕೂಟ ವಿರೋಧಿ ಹಿಂದಿ ಹಣೆಬರಹ ಸಾಕು, ಕನ್ನಡ ಹಣೆಬರಹ ಬೇಕು’ ತಿಂಗಳೇಶ ರಾಜ್ಯೋತ್ಸವಕ್ಕೆ ಹೊಸ ಘೋಷಣೆ ಸಿದ್ಧಪಡಿಸಿದ! </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>