ಅಮೀನಗಡ (ಬಾಗಲಕೋಟೆ ಜಿಲ್ಲೆ): ಸಮೀಪದ ಸಿದ್ದನಕೊಳ್ಳದ ಉತ್ಸವ ಪ್ರಯುಕ್ತ ನೀಡುವ ‘ಸಿದ್ದಶ್ರೀ ಪ್ರಶಸ್ತಿ’ಗೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ ಜಿ.ಆಳ್ವಾ ಆಯ್ಕೆಯಾಗಿದ್ದಾರೆ.
ಜ. 14ರಂದು ನಡೆಯಲಿರುವ ಜಾತ್ರಾ ಮಹೋತ್ಸವದಲ್ಲಿ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿಯು ₹ 25 ಸಾವಿರ ನಗದು, ಫಲಕ, ನೆನಪಿನ ಕಾಣಿಕೆ, ಸನ್ಮಾನಒಳಗೊಂಡಿದೆ ಎಂದು ಸಿದ್ದನಕೊಳ್ಳ ಧರ್ಮಾಧಿಕಾರಿ ಡಾ.ಶಿವಕುಮಾರ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.