<p><strong>ಕಲಬುರ್ಗಿ:</strong> ‘ನಾಟಕ ರಚನೆ ಪ್ರಕ್ರಿಯೆಯು ರಂಗಭೂಮಿಯ ನಿರಂತರ ಚಟುವಟಿಕೆಗೆ ಪೂರಕವಾಗುವುದು. ಅಲ್ಲದೇ ಪ್ರತಿಭಾವಂತ ರಂಗಕರ್ಮಿಗಳನ್ನು ಬೆಳಕಿಗೆ ತರಲು ನೆರವಾಗುವುದು’ ಎಂದು ರಂಗ ಸಂಘಟಕ ವಿಶ್ವರಾಜ ಪಾಟೀಲ ಅಭಿಪ್ರಾಯಪಟ್ಟರು.</p>.<p>ರಂಗಾಯಣದಲ್ಲಿ ಗುರುವಾರ ನಡೆದ ನಾಟಕ ರಚನೆ ಮತ್ತು ಆಯ್ಕೆ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಂಗಭೂಮಿ ಹಿತದೃಷ್ಟಿಯಿಂದ ನಾಟಕ ರಚನಾ ಕಮ್ಮಟ ಅಗತ್ಯ’ ಎಂದರು.</p>.<p>‘ನಾಟಕ ರಚನಾ ಕಮ್ಮಟವು ತನ್ನದೇ ಆದ ಛಾಪನ್ನು ಹೊಂದಿದ್ದು, ಬೆಂಗಳೂರಿನಂತಹ ಮಹಾನಗರದಲ್ಲಿ ಪ್ರಭಾವ ಬೀರಿದೆ. ಅಲ್ಲಿ ನಡೆಯುವ ಕಮ್ಮಟಗಳು ಈಗ ಸಾಂಸ್ಕೃತಿಕ ಸ್ವರೂಪ ಪಡೆದಿವೆ’ ಎಂದು ಅವರು ತಿಳಿಸಿದರು.</p>.<p>‘ಉತ್ತಮ ನಾಟಕಗಳನ್ನು ರೂಪಿಸಲು ಮತ್ತು ಕಲಾವಿದರಿಗೆ ಸೂಕ್ತ ಮಾರ್ಗದರ್ಶನ ನೀಡಲು ನಾಟಕ ರಚನಾ ಕಮ್ಮಟಗಳು ಸಹಕಾರಿ ಆಗುತ್ತವೆ. ಕಮ್ಮಟಗಳು ಬೆಂಗಳೂರಿಗೆ ಮಾತ್ರವೇ ಸೀಮಿತಗೊಳ್ಳದೆ ರಾಜ್ಯವ್ಯಾಪಿ ವಿಸ್ತರಿಸಬೇಕು. ಕಲಬುರ್ಗಿಯಲ್ಲಿ ರಚನಾ ಕಮ್ಮಟ ನಡೆಯುತ್ತಿರುವುದು ಸಂತಸದ ಸಂಗತಿ’ ಎಂದರು.</p>.<p>ಹಿರಿಯ ರಂಗಕರ್ಮಿ ಎಲ್.ಬಿ.ಕೆ.ಆಲ್ದಾಳ ಮಾತನಾಡಿ, ‘ರಂಗಭೂಮಿಯ ಮೇಲೆ ಆಸಕ್ತಿ ಹೊಂದಿ ಹೆಚ್ಚಿನ ಸಾಧನೆ ಮಾಡಲು ಪ್ರಯತ್ನಿಸುತ್ತಿರುವ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು. ಅವರಿಗೆ ಹಿರಿಯ ರಂಗಕರ್ಮಿಗಳು ಸೂಕ್ತ ಮಾರ್ಗದರ್ಶನ ನೀಡಬೇಕು. ಈ ನಿಟ್ಟಿನಲ್ಲಿ ರಂಗಾಸಕ್ತರು ಮುಂದಾಗಬೇಕು’ ಎಂದು ಸಲಹೆ ನೀಡಿದರು.</p>.<p>ಹಿರಿಯ ರಂಗಕರ್ಮಿ ಪಾರ್ವತಿ ವಿ.ಸೋನಾರೆ ಮಾತನಾಡಿ, ‘ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ನಾಟಕ ರಚನಾ ಕಮ್ಮಟ ನಡೆಯುತ್ತಿರುವುದು ಸಂತಸದ ವಿಷಯ. ಬೀದರ್ನಲ್ಲೂ ರಂಗಕರ್ಮಿಗಳು ಮತ್ತು ರಂಗಾಸಕ್ತರಿದ್ದು, ಅಲ್ಲಿಯೂ ಇಂತಹ ಕಮ್ಮಟಗಳನ್ನು ಆಯೋಜಿಸಬೇಕು. ಈ ಕಾರ್ಯಕ್ಕೆ ಅಗತ್ಯ ಸಹಕಾರ ನೀಡಲಾಗುವುದು’ ಎಂದರು.</p>.<p>ರಂಗಾಯಣ ನಿರ್ದೇಶಕ ಮಹೇಶ ವಿ. ಪಾಟೀಲ ನಾಟಕ ರಚನೆ ಮತ್ತು ಆಯ್ಕೆ ಕಾರ್ಯಗಾರದ ಸ್ವರೂಪ ವಿವರಿಸಿದರು. ಕಾರ್ಯಾಗಾರದ ಭಾಗವಾಗಿ ಶುಕ್ರವಾರ ಸಂಜೆ 6 ರಿಂದ 8ರವರೆಗೆ ಮುಖಾಮುಖಿ ಚರ್ಚೆ ನಡೆಯಲಿದೆ. ಶನಿವಾರ ಕಾರ್ಯಾಗಾರದ ಸಮಾರೋಪ ಸಮಾರಂಭ ಜರುಗುವುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ:</strong> ‘ನಾಟಕ ರಚನೆ ಪ್ರಕ್ರಿಯೆಯು ರಂಗಭೂಮಿಯ ನಿರಂತರ ಚಟುವಟಿಕೆಗೆ ಪೂರಕವಾಗುವುದು. ಅಲ್ಲದೇ ಪ್ರತಿಭಾವಂತ ರಂಗಕರ್ಮಿಗಳನ್ನು ಬೆಳಕಿಗೆ ತರಲು ನೆರವಾಗುವುದು’ ಎಂದು ರಂಗ ಸಂಘಟಕ ವಿಶ್ವರಾಜ ಪಾಟೀಲ ಅಭಿಪ್ರಾಯಪಟ್ಟರು.</p>.<p>ರಂಗಾಯಣದಲ್ಲಿ ಗುರುವಾರ ನಡೆದ ನಾಟಕ ರಚನೆ ಮತ್ತು ಆಯ್ಕೆ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಂಗಭೂಮಿ ಹಿತದೃಷ್ಟಿಯಿಂದ ನಾಟಕ ರಚನಾ ಕಮ್ಮಟ ಅಗತ್ಯ’ ಎಂದರು.</p>.<p>‘ನಾಟಕ ರಚನಾ ಕಮ್ಮಟವು ತನ್ನದೇ ಆದ ಛಾಪನ್ನು ಹೊಂದಿದ್ದು, ಬೆಂಗಳೂರಿನಂತಹ ಮಹಾನಗರದಲ್ಲಿ ಪ್ರಭಾವ ಬೀರಿದೆ. ಅಲ್ಲಿ ನಡೆಯುವ ಕಮ್ಮಟಗಳು ಈಗ ಸಾಂಸ್ಕೃತಿಕ ಸ್ವರೂಪ ಪಡೆದಿವೆ’ ಎಂದು ಅವರು ತಿಳಿಸಿದರು.</p>.<p>‘ಉತ್ತಮ ನಾಟಕಗಳನ್ನು ರೂಪಿಸಲು ಮತ್ತು ಕಲಾವಿದರಿಗೆ ಸೂಕ್ತ ಮಾರ್ಗದರ್ಶನ ನೀಡಲು ನಾಟಕ ರಚನಾ ಕಮ್ಮಟಗಳು ಸಹಕಾರಿ ಆಗುತ್ತವೆ. ಕಮ್ಮಟಗಳು ಬೆಂಗಳೂರಿಗೆ ಮಾತ್ರವೇ ಸೀಮಿತಗೊಳ್ಳದೆ ರಾಜ್ಯವ್ಯಾಪಿ ವಿಸ್ತರಿಸಬೇಕು. ಕಲಬುರ್ಗಿಯಲ್ಲಿ ರಚನಾ ಕಮ್ಮಟ ನಡೆಯುತ್ತಿರುವುದು ಸಂತಸದ ಸಂಗತಿ’ ಎಂದರು.</p>.<p>ಹಿರಿಯ ರಂಗಕರ್ಮಿ ಎಲ್.ಬಿ.ಕೆ.ಆಲ್ದಾಳ ಮಾತನಾಡಿ, ‘ರಂಗಭೂಮಿಯ ಮೇಲೆ ಆಸಕ್ತಿ ಹೊಂದಿ ಹೆಚ್ಚಿನ ಸಾಧನೆ ಮಾಡಲು ಪ್ರಯತ್ನಿಸುತ್ತಿರುವ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು. ಅವರಿಗೆ ಹಿರಿಯ ರಂಗಕರ್ಮಿಗಳು ಸೂಕ್ತ ಮಾರ್ಗದರ್ಶನ ನೀಡಬೇಕು. ಈ ನಿಟ್ಟಿನಲ್ಲಿ ರಂಗಾಸಕ್ತರು ಮುಂದಾಗಬೇಕು’ ಎಂದು ಸಲಹೆ ನೀಡಿದರು.</p>.<p>ಹಿರಿಯ ರಂಗಕರ್ಮಿ ಪಾರ್ವತಿ ವಿ.ಸೋನಾರೆ ಮಾತನಾಡಿ, ‘ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ನಾಟಕ ರಚನಾ ಕಮ್ಮಟ ನಡೆಯುತ್ತಿರುವುದು ಸಂತಸದ ವಿಷಯ. ಬೀದರ್ನಲ್ಲೂ ರಂಗಕರ್ಮಿಗಳು ಮತ್ತು ರಂಗಾಸಕ್ತರಿದ್ದು, ಅಲ್ಲಿಯೂ ಇಂತಹ ಕಮ್ಮಟಗಳನ್ನು ಆಯೋಜಿಸಬೇಕು. ಈ ಕಾರ್ಯಕ್ಕೆ ಅಗತ್ಯ ಸಹಕಾರ ನೀಡಲಾಗುವುದು’ ಎಂದರು.</p>.<p>ರಂಗಾಯಣ ನಿರ್ದೇಶಕ ಮಹೇಶ ವಿ. ಪಾಟೀಲ ನಾಟಕ ರಚನೆ ಮತ್ತು ಆಯ್ಕೆ ಕಾರ್ಯಗಾರದ ಸ್ವರೂಪ ವಿವರಿಸಿದರು. ಕಾರ್ಯಾಗಾರದ ಭಾಗವಾಗಿ ಶುಕ್ರವಾರ ಸಂಜೆ 6 ರಿಂದ 8ರವರೆಗೆ ಮುಖಾಮುಖಿ ಚರ್ಚೆ ನಡೆಯಲಿದೆ. ಶನಿವಾರ ಕಾರ್ಯಾಗಾರದ ಸಮಾರೋಪ ಸಮಾರಂಭ ಜರುಗುವುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>