ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ರಾಜ್ಯದಲ್ಲಿ ಅಶಾಂತಿಗೆ ಕಾರಣವಾಗಿರುವ ಯಾವುದೇ ಸಂಘಟನೆಯನ್ನು ಸರ್ಕಾರ ನಿಷೇಧಿಸಬೇಕು. ಜ.9ರಂದು ಮಂಗಳೂರಿನಲ್ಲಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಸೌಹಾರ್ದ ನಡಿಗೆ ಏರ್ಪಡಿಸಿದ್ದು ಎಲ್ಲಾ ಜಾತ್ಯತೀತ, ಪ್ರಗತಿಪರ ಮನಸ್ಸುಗಳು ಇದರಲ್ಲಿ ಪಾಲ್ಗೊಳ್ಳಬೇಕು ಎಂದರು. ಜೆಡಿಎಸ್ ಮುಖಂಡರಾದ ಕನ್ನಪ್ಪ ಬೆಳಲಮಕ್ಕಿ, ಸೈಯದ್ ಜಾಕೀರ್, ಅಣ್ಣಪ್ಪ ಎಚ್.ಕೆ, ವಸಂತ ಶೇಟ್, ದುಷ್ಯಂತ ಜಿಗಳೆಮನೆ, ತಾಸ್ವಿನ್ ಆಲಿ, ರೊಡ್ಡಿ ದೇವಪ್ಪ ಹಾಜರಿದ್ದರು.