ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಶಿವರಾಜ ಚಿತಳೆ, ರಾಕೇಶ ಮಾಳಗೆ, ಬಾಹುಸಾಹೇಬ್ ಶಿಂಗೆ, ವಿದ್ಯಾಧರ ಚಿತಳೆ ಮತ್ತು ರಾಹುಲ್ ಮುಂತಾದವರು ಮಾತನಾಡಿ, ಮಹಾರಾಷ್ಟ್ರ ಸರ್ಕಾರ ವಿರುದ್ದ ಕಿಡಿಕಾರಿ ದಲಿತರನ್ನು ರಕ್ಷಿಸುವಲ್ಲಿ ವಿಫಲರಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ನಾರಾಯಣ ನಾಯಿಕ್ ಮತ್ತು ಪಿಎಸ್ಐ ಸಂಗಮೇಶ ದಿಡಗಿನಹಾಳ ಅವರಿಗೆ ಮನವಿ ಸಲ್ಲಿಸಿದರು.