ಅವನು ಪೂರ್ತಿಯಾಗಿ ಕಣ್ಮರೆಯಾಗುವ ಕ್ರಮದಲ್ಲಿ
ಮೇಜಿನ ಮೇಲೆ ಅವನ ಚಾಳೀಸು ಕಾಲು ಚಾಚಿಕೊಂಡು
ಎದುರು ನೋಡುತ್ತಿತ್ತು.
ಪುಸ್ತಕ ತೆರೆದಿತ್ತು
ಚಾಳೀಸು ಬಾಗಿಲಕಡೆ ನೋಡುತ್ತಲೇಇತ್ತು
ಅವನ ಪಾದರಕ್ಷೆಗಳಿಗೆ ಸತ್ಯ ಗೊತ್ತಿದ್ದರೂ ಒಳಗೆ ಹೋಗುವುದಿಲ್ಲ
ದೂರದ ಕಿಟಕಿಗೆ ಕವಿತೆಯೊಂದು ಜೋತುಬಿದ್ದಿತ್ತು
ಮನೆಯೊಳಕ್ಕೆ ಇನ್ನು ಯಾವ ಬೆಳಕೂ ಇಣುಕುವುದಿಲ್ಲ
ಮಳೆಗೆ ಆ ಬೀದಿಯಲ್ಲಿ ಕೆಲಸವಿರುವುದಿಲ್ಲ
ಅವನು ಕಣ್ಮರೆಯಾಗಿದ್ದಾನೆಂಬ ಸುದ್ದಿ
ಪತ್ರಿಕೆಯಲ್ಲಿ ಮುಖ್ಯ ಶೀರ್ಷಿಕೆಯಾಗುತ್ತಿತ್ತು.
ತೆಲುಗಿನಲ್ಲಿ: ಮೆರ್ಸಿ ಮಾರ್ಗರೆಟ್ (2017 ಸಾಲಿನ ಕೇಂದ್ರಸಾಹಿತ್ಯ ಯುವ ಪುರಸ್ಕಾರ ಪಡೆದ ಕವಿ) ಕನ್ನಡಕ್ಕೆ: ಸೃಜನ್