<p><strong>ಬೆಂಗಳೂರು: </strong>ದೊಡ್ಡ ಬಳ್ಳಾಪುರದ ಕಾಡನೂರು ಗ್ರಾಮದಿಂದ ಟ್ರ್ಯಾಕ್ಟರ್ ಮೂಲಕ ರಾಗಿ ತೆನೆ ತರುವಾಗ ಹುಲ್ಲಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಟ್ರ್ಯಾಕ್ಟರ್ ಹೊತ್ತಿ ಉರಿದ ಘಟನೆ ಹೆಸರಘಟ್ಟ ಗ್ರಾಮದ ಕೆರೆ ರಸ್ತೆಯಲ್ಲಿ ನಡೆದಿದೆ.</p>.<p>ಹುಲ್ಲಿಗೆ ಹತ್ತಿದ ಬೆಂಕಿ ಬಹುಬೇಗನೆ ಇಡೀ ಟ್ರ್ಯಾಕ್ಟರನ್ನು ಅವರಿಸಿಕೊಂಡಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದರು.</p>.<p>ಟ್ರ್ಯಾಕ್ಟರ್ಗೆ ಬೆಂಕಿ ಹತ್ತಿದ ಹತ್ತು ನಿಮಿಷಕ್ಕೆ ಪೀಣ್ಯ ವಿಭಾಗದಿಂದ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರು.</p>.<p>ಟ್ರ್ಯಾಕ್ಟರ್ನ ನಾಲ್ಕು ಟೈರ್ ಸಂಪೂರ್ಣ ಬೆಂಕಿಗೆ ಅಹುತಿಯಾಗಿದೆ.</p>.<p>‘ಒಂದೂವರೆ ಎಕರೆ ಜಮೀನಿನಲ್ಲಿ ರಾಗಿಯನ್ನು ಬೆಳೆದಿದ್ದೆ. ಈ ವರ್ಷ ಉತ್ತಮ ಮಳೆಯಾಗಿ ಒಳ್ಳೆಯ ಇಳುವರಿ ಬಂದಿತ್ತು. ರಾಗಿಯನ್ನು ಕಟಾವು ಮಾಡಿ ಕಣ ಮಾಡಲು ಹೆಸರಘಟ್ಟ ಸಮೀಪ ಇರುವ ಮುದ್ದಿನಪಾಳ್ಯಕ್ಕೆ ತರುತ್ತಿದ್ದೆ. ಸುಮಾರು ₹60,000 ಮೌಲ್ಯದ ರಾಗಿ ತೆನೆ ಬೆಂಕಿಗೆ ಆಹುತಿಯಾಗಿದೆ. ರಾಗಿ ಬೆಳೆ ಚೆನ್ನಾಗಿ ಬಂತು. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎಂದು ರೈತ ನಾಗರಾಜು ಬೇಸರ<br /> ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ದೊಡ್ಡ ಬಳ್ಳಾಪುರದ ಕಾಡನೂರು ಗ್ರಾಮದಿಂದ ಟ್ರ್ಯಾಕ್ಟರ್ ಮೂಲಕ ರಾಗಿ ತೆನೆ ತರುವಾಗ ಹುಲ್ಲಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಟ್ರ್ಯಾಕ್ಟರ್ ಹೊತ್ತಿ ಉರಿದ ಘಟನೆ ಹೆಸರಘಟ್ಟ ಗ್ರಾಮದ ಕೆರೆ ರಸ್ತೆಯಲ್ಲಿ ನಡೆದಿದೆ.</p>.<p>ಹುಲ್ಲಿಗೆ ಹತ್ತಿದ ಬೆಂಕಿ ಬಹುಬೇಗನೆ ಇಡೀ ಟ್ರ್ಯಾಕ್ಟರನ್ನು ಅವರಿಸಿಕೊಂಡಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದರು.</p>.<p>ಟ್ರ್ಯಾಕ್ಟರ್ಗೆ ಬೆಂಕಿ ಹತ್ತಿದ ಹತ್ತು ನಿಮಿಷಕ್ಕೆ ಪೀಣ್ಯ ವಿಭಾಗದಿಂದ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರು.</p>.<p>ಟ್ರ್ಯಾಕ್ಟರ್ನ ನಾಲ್ಕು ಟೈರ್ ಸಂಪೂರ್ಣ ಬೆಂಕಿಗೆ ಅಹುತಿಯಾಗಿದೆ.</p>.<p>‘ಒಂದೂವರೆ ಎಕರೆ ಜಮೀನಿನಲ್ಲಿ ರಾಗಿಯನ್ನು ಬೆಳೆದಿದ್ದೆ. ಈ ವರ್ಷ ಉತ್ತಮ ಮಳೆಯಾಗಿ ಒಳ್ಳೆಯ ಇಳುವರಿ ಬಂದಿತ್ತು. ರಾಗಿಯನ್ನು ಕಟಾವು ಮಾಡಿ ಕಣ ಮಾಡಲು ಹೆಸರಘಟ್ಟ ಸಮೀಪ ಇರುವ ಮುದ್ದಿನಪಾಳ್ಯಕ್ಕೆ ತರುತ್ತಿದ್ದೆ. ಸುಮಾರು ₹60,000 ಮೌಲ್ಯದ ರಾಗಿ ತೆನೆ ಬೆಂಕಿಗೆ ಆಹುತಿಯಾಗಿದೆ. ರಾಗಿ ಬೆಳೆ ಚೆನ್ನಾಗಿ ಬಂತು. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎಂದು ರೈತ ನಾಗರಾಜು ಬೇಸರ<br /> ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>