‘ಒಂದೂವರೆ ಎಕರೆ ಜಮೀನಿನಲ್ಲಿ ರಾಗಿಯನ್ನು ಬೆಳೆದಿದ್ದೆ. ಈ ವರ್ಷ ಉತ್ತಮ ಮಳೆಯಾಗಿ ಒಳ್ಳೆಯ ಇಳುವರಿ ಬಂದಿತ್ತು. ರಾಗಿಯನ್ನು ಕಟಾವು ಮಾಡಿ ಕಣ ಮಾಡಲು ಹೆಸರಘಟ್ಟ ಸಮೀಪ ಇರುವ ಮುದ್ದಿನಪಾಳ್ಯಕ್ಕೆ ತರುತ್ತಿದ್ದೆ. ಸುಮಾರು ₹60,000 ಮೌಲ್ಯದ ರಾಗಿ ತೆನೆ ಬೆಂಕಿಗೆ ಆಹುತಿಯಾಗಿದೆ. ರಾಗಿ ಬೆಳೆ ಚೆನ್ನಾಗಿ ಬಂತು. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎಂದು ರೈತ ನಾಗರಾಜು ಬೇಸರ
ವ್ಯಕ್ತಪಡಿಸಿದರು.