<p><strong>ನವದೆಹಲಿ:</strong> ಸರ್ಕಾರಿ ಸ್ವಾಮ್ಯದ ನಾಗರಿಕ ವಿಮಾನ ಯಾನ ಸಂಸ್ಥೆ ಏರ್ ಇಂಡಿಯಾದ ಷೇರು ವಿಕ್ರಯಕ್ಕೆ ಇದು ಸೂಕ್ತ ಸಮಯ ಅಲ್ಲ. ಸಂಸ್ಥೆಯ ಪುನಶ್ಚೇತನಕ್ಕೆ ಐದು ವರ್ಷಗಳವರೆಗೆ ಕಾಲಾವಕಾಶವನ್ನೇಕೆ ನೀಡಬಾರದು ಎಂದು ಸಂಸದೀಯ ಸಮಿತಿಯು ಕೇಂದ್ರ ಸರ್ಕಾರವನ್ನು ಕೇಳಿಕೊಂಡಿದೆ.</p>.<p>‘ಏಐ’ ಬಲವರ್ಧನೆಗೆ ಕೇಂದ್ರ ಸರ್ಕಾರ ಹಲವು ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತಿದೆ. ಷೇರು ವಿಕ್ರಯ, ಬಂಡವಾಳ ನೆರವು, ಖಾಸಗೀಕರಣಗೊಳಿಸುವುದನ್ನೂ ಪರಿಶೀಲಿಸುತ್ತಿದೆ.</p>.<p>ಉದ್ದೇಶಿತ ಷೇರು ವಿಕ್ರಯದ ಬಗ್ಗೆ ಸಂಸದೀಯ ಸ್ಥಾಯಿ ಸಮಿತಿ ಕರಡು ವರದಿ ಸಿದ್ಧಪಡಿಸಿದ್ದು, ಹಲವಾರು ಶಿಫಾರಸುಗಳನ್ನು ಮಾಡಿದೆ.</p>.<p>2012 ರಿಂದ 2022ರವರೆಗೆ ಸಂಸ್ಥೆಯ ಪುನಶ್ಚೇತನ ಮತ್ತು ಆರ್ಥಿಕ ಪುನರ್ರಚನೆ ಯೋಜನೆ (ಎಫ್ಆರ್ಪಿ) ಜಾರಿಯಲ್ಲಿದೆ. ಇದರಿಂದ ‘ಏಐ’ ವಿವಿಧ ರೀತಿಯಲ್ಲಿ ಸುಧಾರಣೆ ಕಾಣುತ್ತಿದೆ. ಅತ್ಯಂತ ಅಪಾಯಕಾರಿ ಸ್ಥಿತಿಯಿಂದ ಹೊರಬರುತ್ತಿದೆ. ಹೀಗಾಗಿ ಈ ಯೋಜನೆಗಳ ಅವಧಿ ಮುಗಿದ ಬಳಿಕವೇ ಸಂಸ್ಥೆಯ ಸ್ಥಿತಿಗತಿ ಪರಿಶೀಲನೆ ನಡೆಸಿ ಅದರಂತೆ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದೆ.</p>.<p>ಸಂಸ್ಥೆಯು ಕಾರ್ಯಾಚರಣೆಯ ಲಾಭ ಗಳಿಸುತ್ತಿದೆ. ಇಂತಹ ಸಂದರ್ಭದಲ್ಲಿ ಷೇರು ವಿಕ್ರಯ ನಿರ್ಧಾರ ಸರಿಯಲ್ಲ ಎನ್ನುವುದು ಸಮಿತಿಯ ಅಭಿಪ್ರಾಯವಾಗಿದೆ.</p>.<p>ಅಂಗ ಸಂಸ್ಥೆಗಳಾದ ಏರ್ ಇಂಡಿಯಾ ಟ್ರಾನ್ಸ್ಪೋರ್ಟ್ ಸರ್ವೀಸಸ್ ಲಿಮಿಟೆಡ್, ಏರ್ ಇಂಡಿಯಾ ಎಸ್ಎಟಿಎಸ್ ಏರ್ಪೋರ್ಟ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್, ಅಲಯನ್ಸ್ ಏರ್ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಲಾಭದಲ್ಲಿವೆ. ಹೀಗಾಗಿ ಈ ಸಂಸ್ಥೆಗಳ ಷೇರುವಿಕ್ರಯ ಮಾಡದಂತೆಯೂ ತಿಳಿಸಿದೆ.</p>.<p>‘ಸಂಸ್ಥೆಯನ್ನು ಪ್ರಗತಿ ಹಾದಿಗೆ ಕೊಂಡೊಯ್ಯಲು ಸಮಗ್ರವಾಗಿ ಯೋಜನೆ ರೂಪಿಸಲಿಲ್ಲ. ಇದರಿಂದ ಸಂಸ್ಥೆಯ ಆರ್ಥಿಕ ಮತ್ತು ಕಾರ್ಯಾಚರಣೆ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಾಯಿತು. ಆ ನಷ್ಟ ತುಂಬಿಕೊಳ್ಳಲು ಸಂಸ್ಥೆಯು ಗರಿಷ್ಠ ಬಡ್ಡಿದರಕ್ಕೆ ಸಾಲ ಪಡೆಯಬೇಕಾದ ಸಂದರ್ಭ ಎದುರಾಯಿತು’ ಎಂದು ಸಮಿತಿಯು ವಿಶ್ಲೇಷಣೆ ಮಾಡಿದೆ.</p>.<p>ವಿಮಾನಯಾನ ಸಚಿವಾಲಯದ ನೀತಿ ನಿರ್ದೇಶನಗಳಿಂದಾಗಿಯೇ ಸಂಸ್ಥೆ ನಷ್ಟಕ್ಕೆ ಒಳಗಾಗಿದೆ. ಕಡಿಮೆ ನಿಯಂತ್ರಣದೊಂದಿಗೆ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿಯೇ ಕಾರ್ಯನಿರ್ವಹಿಸಲು ಏರ್ಇಂಡಿಯಾಗೆ ಅನುಮತಿ ನೀಡಬಹುದಿತ್ತು ಎಂದು ಅಭಿಪ್ರಾಯಪಟ್ಟಿದೆ.</p>.<p>ಏರ್ ಇಂಡಿಯಾ ದೇಶದ ಹೆಮ್ಮೆಯ ಪ್ರತೀಕ. ಅದನ್ನು ಖಾಸಗೀಕರಣ ಅಥವಾ ಷೇರು ವಿಕ್ರಯ ಮಾಡುವುದು ಅಷ್ಟು ಸೂಕ್ತವಲ್ಲ. ಬದಲಾಗಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ಬಗ್ಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ತನ್ನ ನಿರ್ಧಾರಗಳನ್ನು ಪರಾಮರ್ಶೆ ನಡೆಸಲಿ ಎಂದಿದೆ.</p>.<p>ದೇಶ ಅಥವಾ ವಿದೇಶಗಳಲ್ಲಿ ನೈಸರ್ಗಿಕ ವಿಕೋಪ, ಸಾಮಾಜಿಕ ಅಥವಾ ರಾಜಕೀಯ ಅಶಾಂತಿ ಉಂಟಾದ ಸಂದರ್ಭಗಳಲ್ಲಿ ಏರ್ ಇಂಡಿಯಾ ಸೇವೆ ಒದಗಿಸಿದೆ. ಹೀಗಾಗಿ ನೀತಿ ಆಯೋಗ ಹೇಳಿರುವಂತೆ ಕೇವಲ ವ್ಯಾವಹಾರಿಕ ದೃಷ್ಟಿಯಿಂದಷ್ಟೇ ಸಂಸ್ಥೆಯನ್ನು ಪರಿಗಣಿಸುವುದು ಅಷ್ಟು ಸಮಂಜಸವಲ್ಲ ಎಂದು ಸಮಿತಿ ಹೇಳಿದೆ.</p>.<p>***</p>.<p><strong>ಸಮಿತಿ ಶಿಫಾರಸು</strong></p>.<p>* ಖಾಸಗೀಕರಣದ ನಿರ್ಧಾರ ಪರಾಮರ್ಶೆ ಮಾಡಿ</p>.<p>* ಸರ್ಕಾರವೇ ಸಾಲ ವಜಾ ಮಾಡಲಿ</p>.<p>* ಸಂಸ್ಥೆಯ ಉದ್ಯೋಗಿಗಳ ಹಿತರಕ್ಷಣೆ ಕ್ರಮ ಅಗತ್ಯ</p>.<p>* ಅಂಗ ಸಂಸ್ಥೆಗಳ ಷೇರು ವಿಕ್ರಯ ಬೇಡ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಸರ್ಕಾರಿ ಸ್ವಾಮ್ಯದ ನಾಗರಿಕ ವಿಮಾನ ಯಾನ ಸಂಸ್ಥೆ ಏರ್ ಇಂಡಿಯಾದ ಷೇರು ವಿಕ್ರಯಕ್ಕೆ ಇದು ಸೂಕ್ತ ಸಮಯ ಅಲ್ಲ. ಸಂಸ್ಥೆಯ ಪುನಶ್ಚೇತನಕ್ಕೆ ಐದು ವರ್ಷಗಳವರೆಗೆ ಕಾಲಾವಕಾಶವನ್ನೇಕೆ ನೀಡಬಾರದು ಎಂದು ಸಂಸದೀಯ ಸಮಿತಿಯು ಕೇಂದ್ರ ಸರ್ಕಾರವನ್ನು ಕೇಳಿಕೊಂಡಿದೆ.</p>.<p>‘ಏಐ’ ಬಲವರ್ಧನೆಗೆ ಕೇಂದ್ರ ಸರ್ಕಾರ ಹಲವು ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತಿದೆ. ಷೇರು ವಿಕ್ರಯ, ಬಂಡವಾಳ ನೆರವು, ಖಾಸಗೀಕರಣಗೊಳಿಸುವುದನ್ನೂ ಪರಿಶೀಲಿಸುತ್ತಿದೆ.</p>.<p>ಉದ್ದೇಶಿತ ಷೇರು ವಿಕ್ರಯದ ಬಗ್ಗೆ ಸಂಸದೀಯ ಸ್ಥಾಯಿ ಸಮಿತಿ ಕರಡು ವರದಿ ಸಿದ್ಧಪಡಿಸಿದ್ದು, ಹಲವಾರು ಶಿಫಾರಸುಗಳನ್ನು ಮಾಡಿದೆ.</p>.<p>2012 ರಿಂದ 2022ರವರೆಗೆ ಸಂಸ್ಥೆಯ ಪುನಶ್ಚೇತನ ಮತ್ತು ಆರ್ಥಿಕ ಪುನರ್ರಚನೆ ಯೋಜನೆ (ಎಫ್ಆರ್ಪಿ) ಜಾರಿಯಲ್ಲಿದೆ. ಇದರಿಂದ ‘ಏಐ’ ವಿವಿಧ ರೀತಿಯಲ್ಲಿ ಸುಧಾರಣೆ ಕಾಣುತ್ತಿದೆ. ಅತ್ಯಂತ ಅಪಾಯಕಾರಿ ಸ್ಥಿತಿಯಿಂದ ಹೊರಬರುತ್ತಿದೆ. ಹೀಗಾಗಿ ಈ ಯೋಜನೆಗಳ ಅವಧಿ ಮುಗಿದ ಬಳಿಕವೇ ಸಂಸ್ಥೆಯ ಸ್ಥಿತಿಗತಿ ಪರಿಶೀಲನೆ ನಡೆಸಿ ಅದರಂತೆ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದೆ.</p>.<p>ಸಂಸ್ಥೆಯು ಕಾರ್ಯಾಚರಣೆಯ ಲಾಭ ಗಳಿಸುತ್ತಿದೆ. ಇಂತಹ ಸಂದರ್ಭದಲ್ಲಿ ಷೇರು ವಿಕ್ರಯ ನಿರ್ಧಾರ ಸರಿಯಲ್ಲ ಎನ್ನುವುದು ಸಮಿತಿಯ ಅಭಿಪ್ರಾಯವಾಗಿದೆ.</p>.<p>ಅಂಗ ಸಂಸ್ಥೆಗಳಾದ ಏರ್ ಇಂಡಿಯಾ ಟ್ರಾನ್ಸ್ಪೋರ್ಟ್ ಸರ್ವೀಸಸ್ ಲಿಮಿಟೆಡ್, ಏರ್ ಇಂಡಿಯಾ ಎಸ್ಎಟಿಎಸ್ ಏರ್ಪೋರ್ಟ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್, ಅಲಯನ್ಸ್ ಏರ್ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಲಾಭದಲ್ಲಿವೆ. ಹೀಗಾಗಿ ಈ ಸಂಸ್ಥೆಗಳ ಷೇರುವಿಕ್ರಯ ಮಾಡದಂತೆಯೂ ತಿಳಿಸಿದೆ.</p>.<p>‘ಸಂಸ್ಥೆಯನ್ನು ಪ್ರಗತಿ ಹಾದಿಗೆ ಕೊಂಡೊಯ್ಯಲು ಸಮಗ್ರವಾಗಿ ಯೋಜನೆ ರೂಪಿಸಲಿಲ್ಲ. ಇದರಿಂದ ಸಂಸ್ಥೆಯ ಆರ್ಥಿಕ ಮತ್ತು ಕಾರ್ಯಾಚರಣೆ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಾಯಿತು. ಆ ನಷ್ಟ ತುಂಬಿಕೊಳ್ಳಲು ಸಂಸ್ಥೆಯು ಗರಿಷ್ಠ ಬಡ್ಡಿದರಕ್ಕೆ ಸಾಲ ಪಡೆಯಬೇಕಾದ ಸಂದರ್ಭ ಎದುರಾಯಿತು’ ಎಂದು ಸಮಿತಿಯು ವಿಶ್ಲೇಷಣೆ ಮಾಡಿದೆ.</p>.<p>ವಿಮಾನಯಾನ ಸಚಿವಾಲಯದ ನೀತಿ ನಿರ್ದೇಶನಗಳಿಂದಾಗಿಯೇ ಸಂಸ್ಥೆ ನಷ್ಟಕ್ಕೆ ಒಳಗಾಗಿದೆ. ಕಡಿಮೆ ನಿಯಂತ್ರಣದೊಂದಿಗೆ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿಯೇ ಕಾರ್ಯನಿರ್ವಹಿಸಲು ಏರ್ಇಂಡಿಯಾಗೆ ಅನುಮತಿ ನೀಡಬಹುದಿತ್ತು ಎಂದು ಅಭಿಪ್ರಾಯಪಟ್ಟಿದೆ.</p>.<p>ಏರ್ ಇಂಡಿಯಾ ದೇಶದ ಹೆಮ್ಮೆಯ ಪ್ರತೀಕ. ಅದನ್ನು ಖಾಸಗೀಕರಣ ಅಥವಾ ಷೇರು ವಿಕ್ರಯ ಮಾಡುವುದು ಅಷ್ಟು ಸೂಕ್ತವಲ್ಲ. ಬದಲಾಗಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ಬಗ್ಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ತನ್ನ ನಿರ್ಧಾರಗಳನ್ನು ಪರಾಮರ್ಶೆ ನಡೆಸಲಿ ಎಂದಿದೆ.</p>.<p>ದೇಶ ಅಥವಾ ವಿದೇಶಗಳಲ್ಲಿ ನೈಸರ್ಗಿಕ ವಿಕೋಪ, ಸಾಮಾಜಿಕ ಅಥವಾ ರಾಜಕೀಯ ಅಶಾಂತಿ ಉಂಟಾದ ಸಂದರ್ಭಗಳಲ್ಲಿ ಏರ್ ಇಂಡಿಯಾ ಸೇವೆ ಒದಗಿಸಿದೆ. ಹೀಗಾಗಿ ನೀತಿ ಆಯೋಗ ಹೇಳಿರುವಂತೆ ಕೇವಲ ವ್ಯಾವಹಾರಿಕ ದೃಷ್ಟಿಯಿಂದಷ್ಟೇ ಸಂಸ್ಥೆಯನ್ನು ಪರಿಗಣಿಸುವುದು ಅಷ್ಟು ಸಮಂಜಸವಲ್ಲ ಎಂದು ಸಮಿತಿ ಹೇಳಿದೆ.</p>.<p>***</p>.<p><strong>ಸಮಿತಿ ಶಿಫಾರಸು</strong></p>.<p>* ಖಾಸಗೀಕರಣದ ನಿರ್ಧಾರ ಪರಾಮರ್ಶೆ ಮಾಡಿ</p>.<p>* ಸರ್ಕಾರವೇ ಸಾಲ ವಜಾ ಮಾಡಲಿ</p>.<p>* ಸಂಸ್ಥೆಯ ಉದ್ಯೋಗಿಗಳ ಹಿತರಕ್ಷಣೆ ಕ್ರಮ ಅಗತ್ಯ</p>.<p>* ಅಂಗ ಸಂಸ್ಥೆಗಳ ಷೇರು ವಿಕ್ರಯ ಬೇಡ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>