<p><strong>ಬೆಂಗಳೂರು:</strong> ಮ್ಯಾಕ್ಸ್ ಲೈಫ್ ಇನ್ಶ್ಯೂರೆನ್ಸ್ ಕಂಪನಿ, ಪೊಲೀಸ್ ಇಲಾಖೆ ಹಾಗೂ ಯುಎಫ್ ಅಕಾಡೆಮಿ ಸಹಯೋಗದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಆಯೋಜಿಸಿದ್ದ ‘ದಿ ರನ್’ ಜಾಗೃತಿ ಓಟವು ಗರುಡಾ ಮಾಲ್ ಬಳಿಯ ಸುಲೇಮಾನ್ ಹಾಕಿ ಮೈದಾನ<br /> ದಲ್ಲಿ ಭಾನುವಾರ ನಡೆಯಿತು.</p>.<p>ಟೆನಿಸ್ ಆಟಗಾರ ಶ್ರೀನಾಥ್ ಪ್ರಹ್ಲಾದ್, ಮ್ಯಾರಥಾನ್ ಪಟು ವೈಶಾಲಿ ಕಸ್ತೂರೆ ಸೇರಿದಂತೆ 1,500ಕ್ಕೂ ಹೆಚ್ಚು ಜನ ಓಟದಲ್ಲಿ ಪಾಲ್ಗೊಂಡಿದ್ದರು.</p>.<p>21 ಕಿ.ಮೀ.ವಿಭಾಗದ ಓಟದಲ್ಲಿ ಧರ್ಮೇಂದ್ರ ರೆಡ್ಡಿ ಹಾಗೂ ರಾಜಶ್ರೀ ತನ್ಹಾಲ್, 10 ಕಿ.ಮೀ ವಿಭಾಗದಲ್ಲಿ ನಿರ್ಮಲ್ ಕುಮಾರ್, ಶೃತಿ ಕಡೆಮನೆ ಹಾಗೂ ತಿಪ್ಪವ್ವ ಸಣ್ಣಕ್ಕಿ, 5 ಕಿ.ಮೀ. ವಿಭಾಗದಲ್ಲಿ ಪಾಟೇಶ್ವರಿ ಸಿಂಗ್, ಅನನ್ಯ ದೀಪ್ ಹಾಗೂ 2.5 ಕಿ.ಮೀ. ವಿಭಾಗದಲ್ಲಿ ಕ್ಲಿಂಟನ್ ಮಿರಾನ್ ವಿಜೇತರಾದರು. ಓಟದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಪ್ರಮಾಣಪತ್ರ ನೀಡಲಾಯಿತು.</p>.<p>ಕಂಪನಿಯ ಮಾರ್ಕೆಂಟಿಂಗ್ ವಿಭಾಗ ನಿರ್ದೇಶಕ ಮಾಣಿಕ್ ನಂಗಿಯಾ ‘ಓಟದಲ್ಲಿ ಎಲ್ಲ ವಯೋಮಾನದವರು ಭಾಗಿಯಾಗಿರುವುದು ಸಂತಸ ತಂದಿದೆ. ಆರೋಗ್ಯ ಕಾಪಾಡಿಕೊಳ್ಳಲು ಇಂಥ ಓಟಗಳು ಅಗತ್ಯ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮ್ಯಾಕ್ಸ್ ಲೈಫ್ ಇನ್ಶ್ಯೂರೆನ್ಸ್ ಕಂಪನಿ, ಪೊಲೀಸ್ ಇಲಾಖೆ ಹಾಗೂ ಯುಎಫ್ ಅಕಾಡೆಮಿ ಸಹಯೋಗದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಆಯೋಜಿಸಿದ್ದ ‘ದಿ ರನ್’ ಜಾಗೃತಿ ಓಟವು ಗರುಡಾ ಮಾಲ್ ಬಳಿಯ ಸುಲೇಮಾನ್ ಹಾಕಿ ಮೈದಾನ<br /> ದಲ್ಲಿ ಭಾನುವಾರ ನಡೆಯಿತು.</p>.<p>ಟೆನಿಸ್ ಆಟಗಾರ ಶ್ರೀನಾಥ್ ಪ್ರಹ್ಲಾದ್, ಮ್ಯಾರಥಾನ್ ಪಟು ವೈಶಾಲಿ ಕಸ್ತೂರೆ ಸೇರಿದಂತೆ 1,500ಕ್ಕೂ ಹೆಚ್ಚು ಜನ ಓಟದಲ್ಲಿ ಪಾಲ್ಗೊಂಡಿದ್ದರು.</p>.<p>21 ಕಿ.ಮೀ.ವಿಭಾಗದ ಓಟದಲ್ಲಿ ಧರ್ಮೇಂದ್ರ ರೆಡ್ಡಿ ಹಾಗೂ ರಾಜಶ್ರೀ ತನ್ಹಾಲ್, 10 ಕಿ.ಮೀ ವಿಭಾಗದಲ್ಲಿ ನಿರ್ಮಲ್ ಕುಮಾರ್, ಶೃತಿ ಕಡೆಮನೆ ಹಾಗೂ ತಿಪ್ಪವ್ವ ಸಣ್ಣಕ್ಕಿ, 5 ಕಿ.ಮೀ. ವಿಭಾಗದಲ್ಲಿ ಪಾಟೇಶ್ವರಿ ಸಿಂಗ್, ಅನನ್ಯ ದೀಪ್ ಹಾಗೂ 2.5 ಕಿ.ಮೀ. ವಿಭಾಗದಲ್ಲಿ ಕ್ಲಿಂಟನ್ ಮಿರಾನ್ ವಿಜೇತರಾದರು. ಓಟದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಪ್ರಮಾಣಪತ್ರ ನೀಡಲಾಯಿತು.</p>.<p>ಕಂಪನಿಯ ಮಾರ್ಕೆಂಟಿಂಗ್ ವಿಭಾಗ ನಿರ್ದೇಶಕ ಮಾಣಿಕ್ ನಂಗಿಯಾ ‘ಓಟದಲ್ಲಿ ಎಲ್ಲ ವಯೋಮಾನದವರು ಭಾಗಿಯಾಗಿರುವುದು ಸಂತಸ ತಂದಿದೆ. ಆರೋಗ್ಯ ಕಾಪಾಡಿಕೊಳ್ಳಲು ಇಂಥ ಓಟಗಳು ಅಗತ್ಯ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>