‘ಕೆಎಸ್ಆರ್ಟಿಸಿ ಚಾಲಕರಾಗಿರುವ ಉಪ್ಪಿನಂಗಡಿ ನಿವಾಸಿ ಬಾಲಕೃಷ್ಣ ಪೂಜಾರಿ ಮತ್ತು ವಾಟ್ಸ್ ಆ್ಯಪ್ ಗುಂಪೊಂದರ ‘ಅಡ್ಮಿನ್’ ಕೂಡ ಆಗಿದ್ದ ಬಂಟ್ವಾಳ ತಾಲ್ಲೂಕಿನ ಇರಾ ನಿವಾಸಿ ಸತೀಶ್ ಬಂಧಿತರು. ಭಾರತಿ ನೀಡಿದ್ದ ದೂರನ್ನು ಆಧರಿಸಿ ತನಿಖೆ ನಡೆಸಿದ ಬಂಟ್ವಾಳ ನಗರ ಠಾಣೆ ಪೊಲೀಸರು ಇಬ್ಬರನ್ನೂ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ' ಎಂದು ದಕ್ಷಿಣ ಕನ್ನಡ ಎಸ್ಪಿ ಸಿ.ಎಚ್.ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.