ತಾಲ್ಲೂಕಿನ ಕಣಕುಂಬಿ ಹಾಗೂ ಗೋವಾದ ಸೂರಲ್ ಗ್ರಾಮಗಳ ಬಳಿಯ ಮಹದಾಯಿ ನದಿ ಪಾತ್ರದಲ್ಲಿ ಆಂದೋಲನ ನಡೆಸಲಾಯಿತು. ಸೂರಲ್ ಗ್ರಾಮದ ಸಾತೇರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಸಂಘಟನೆ ಮುಖಂಡ ಆನಂದ ಶಿರೋಡಕರ್, ‘ಮಹದಾಯಿ ನದಿ ಉಳಿಸಬೇಕು ಎಂದು ಸಾರ್ವಜನಿಕರಿಗೆ ಅರಿವು ಮೂಡಿಸಲು ಏಳು ದಿನಗಳವರೆಗೆ ಆಂದೋಲನ ನಡೆಸಲಾಗುವುದು’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.