<p><strong>ಬೆಂಗಳೂರು:</strong> ಮಹದೇವಪುರ ಕ್ಷೇತ್ರದ ಹಗದೂರು ವಾರ್ಡ್ ವ್ಯಾಪ್ತಿಯ ಆರ್.ನಾರಾಯಣಪುರ ಕೆರೆ ಬಳಿ ಸ್ಥಳೀಯರು ‘ಕೆರೆ ಉಳಿವಿಗಾಗಿ ಸಂಕ್ರಾಂತಿ ಹಬ್ಬ’ ಹಮ್ಮಿಕೊಂಡಿದ್ದರು.</p>.<p>‘ಇಪ್ಪತ್ತು ವರ್ಷಗಳ ಹಿಂದೆ ನಾರಾಯಣಪುರ ಕೆರೆ ನೀರು ಶುದ್ಧವಾಗಿತ್ತು. ಸುತ್ತಮುತ್ತಲಿನ ಜನ ಈ ನೀರನ್ನೇ ಬಳಸುತ್ತಿದ್ದರು. ಕೆರೆ ದಂಡೆ ಮೇಲೆ ಪ್ರತಿ ವರ್ಷ ಸಂಕ್ರಾಂತಿ ಹಬ್ಬ ಆಚರಿಸುತ್ತಿದ್ದರು’ ಎಂದು ಕಾಂಗ್ರೆಸ್ ಮುಖಂಡ ನಲ್ಲೂರುಹಳ್ಳಿ ಟಿ.ನಾಗೇಶ್ ಹೇಳಿದರು.</p>.<p>‘ಈಗ ಕೆರೆ ಸಂಪೂರ್ಣ ಮಲಿನಗೊಂಡಿದೆ. ಇಲ್ಲಿನ ನಿವಾಸಿಗಳು ಮನಸ್ಸು ಮಾಡಿದರೆ, ಕೆರೆಯನ್ನು ಮತ್ತೆ ಮೊದಲಿನಂತೆ ಮಾಡಬಹುದು’ ಎಂದು ಸಲಹೆ ನೀಡಿದರು.</p>.<p>ಸ್ಥಳೀಯ ನಿವಾಸಿಗಳ ಸಂಘದ ಮುಖ್ಯಸ್ಥರಾದ ರಮಣಿ ರಾಧಾಕೃಷ್ಣ, ‘ಕೆರೆಯನ್ನು ಉಳಿಸುವ ಭಾಗವಾಗಿ ದಂಡೆ ಮೇಲೆ ಸಂಕ್ರಾಂತಿ ಹಬ್ಬ ಆಚರಿಸುತ್ತಿದ್ದೇವೆ. ಇದರಿಂದಾಗಿ ಸ್ಥಳೀಯರಲ್ಲಿ ಕೆರೆ ಬಗ್ಗೆ ಅರಿವು ಮೂಡಿದರೆ, ನಮ್ಮ ಪ್ರಯತ್ನ ಸಾರ್ಥಕವಾಗುತ್ತದೆ’ ಎಂದರು.</p>.<p>ಯುನಿಕ್ ಸಂಸ್ಥೆಯ ಅಜೇಯ, ‘ಕೆರೆ ಅಭಿವೃದ್ಧಿಗಾಗಿ ಬಿಬಿಎಂಪಿ ಜತೆ ಕೈಜೋಡಿಸಿದ್ದೇವೆ. ಹಂತ ಹಂತವಾಗಿ ಕೆರೆ ಅಭಿವೃದ್ಧಿ ಮಾಡಲಾಗುವುದು’ ಎಂದು ಭರವಸೆ ನೀಡಿದರು.</p>.<p>ಹಬ್ಬದ ಸಡಗರದಲ್ಲಿ ಭಾಗವಹಿಸಿದ ಸ್ಥಳೀಯರು ಪರಸ್ಪರ ಎಳ್ಳುಬೆಲ್ಲ, ಕಬ್ಬು ಹಂಚಿಕೊಂಡು ಸಂಭ್ರಮಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮಹದೇವಪುರ ಕ್ಷೇತ್ರದ ಹಗದೂರು ವಾರ್ಡ್ ವ್ಯಾಪ್ತಿಯ ಆರ್.ನಾರಾಯಣಪುರ ಕೆರೆ ಬಳಿ ಸ್ಥಳೀಯರು ‘ಕೆರೆ ಉಳಿವಿಗಾಗಿ ಸಂಕ್ರಾಂತಿ ಹಬ್ಬ’ ಹಮ್ಮಿಕೊಂಡಿದ್ದರು.</p>.<p>‘ಇಪ್ಪತ್ತು ವರ್ಷಗಳ ಹಿಂದೆ ನಾರಾಯಣಪುರ ಕೆರೆ ನೀರು ಶುದ್ಧವಾಗಿತ್ತು. ಸುತ್ತಮುತ್ತಲಿನ ಜನ ಈ ನೀರನ್ನೇ ಬಳಸುತ್ತಿದ್ದರು. ಕೆರೆ ದಂಡೆ ಮೇಲೆ ಪ್ರತಿ ವರ್ಷ ಸಂಕ್ರಾಂತಿ ಹಬ್ಬ ಆಚರಿಸುತ್ತಿದ್ದರು’ ಎಂದು ಕಾಂಗ್ರೆಸ್ ಮುಖಂಡ ನಲ್ಲೂರುಹಳ್ಳಿ ಟಿ.ನಾಗೇಶ್ ಹೇಳಿದರು.</p>.<p>‘ಈಗ ಕೆರೆ ಸಂಪೂರ್ಣ ಮಲಿನಗೊಂಡಿದೆ. ಇಲ್ಲಿನ ನಿವಾಸಿಗಳು ಮನಸ್ಸು ಮಾಡಿದರೆ, ಕೆರೆಯನ್ನು ಮತ್ತೆ ಮೊದಲಿನಂತೆ ಮಾಡಬಹುದು’ ಎಂದು ಸಲಹೆ ನೀಡಿದರು.</p>.<p>ಸ್ಥಳೀಯ ನಿವಾಸಿಗಳ ಸಂಘದ ಮುಖ್ಯಸ್ಥರಾದ ರಮಣಿ ರಾಧಾಕೃಷ್ಣ, ‘ಕೆರೆಯನ್ನು ಉಳಿಸುವ ಭಾಗವಾಗಿ ದಂಡೆ ಮೇಲೆ ಸಂಕ್ರಾಂತಿ ಹಬ್ಬ ಆಚರಿಸುತ್ತಿದ್ದೇವೆ. ಇದರಿಂದಾಗಿ ಸ್ಥಳೀಯರಲ್ಲಿ ಕೆರೆ ಬಗ್ಗೆ ಅರಿವು ಮೂಡಿದರೆ, ನಮ್ಮ ಪ್ರಯತ್ನ ಸಾರ್ಥಕವಾಗುತ್ತದೆ’ ಎಂದರು.</p>.<p>ಯುನಿಕ್ ಸಂಸ್ಥೆಯ ಅಜೇಯ, ‘ಕೆರೆ ಅಭಿವೃದ್ಧಿಗಾಗಿ ಬಿಬಿಎಂಪಿ ಜತೆ ಕೈಜೋಡಿಸಿದ್ದೇವೆ. ಹಂತ ಹಂತವಾಗಿ ಕೆರೆ ಅಭಿವೃದ್ಧಿ ಮಾಡಲಾಗುವುದು’ ಎಂದು ಭರವಸೆ ನೀಡಿದರು.</p>.<p>ಹಬ್ಬದ ಸಡಗರದಲ್ಲಿ ಭಾಗವಹಿಸಿದ ಸ್ಥಳೀಯರು ಪರಸ್ಪರ ಎಳ್ಳುಬೆಲ್ಲ, ಕಬ್ಬು ಹಂಚಿಕೊಂಡು ಸಂಭ್ರಮಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>