<p><strong>ಬೀದರ್:</strong> ತೆಲಂಗಾಣ-ಛತ್ತೀಸ್ಗಡ ಗಡಿಯಲ್ಲಿ ನಕ್ಸಲರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ನಕ್ಸಲರ ಗುಂಡಿಗೆ ಬಲಿಯಾದ ತೆಲಂಗಾಣ ನಕ್ಸಲ್ ನಿಗ್ರಹ ಪಡೆಯ ಗ್ರೇಹೌಂಡ್ಸ್ನ ಕಮಾಂಡೊ ಬೀದರ್ನ ಸುಶೀಲ್ಕುಮಾರ ಅಂತ್ಯಕ್ರಿಯೆ ನಗರದಲ್ಲಿ ಶನಿವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.</p>.<p>ಗ್ರೇಸ್ ಕಾಲೊನಿಯಲ್ಲಿರುವ ನಿವಾಸದಿಂದ ಪಾರ್ಥೀವ ಶರೀರದ ಮೆರವಣಿಗೆಯನ್ನು ಆರಂಭಿಸಿ ಮೆಥೊಡಿಸ್ಟ್ ಚರ್ಚ್ ಮುಂಭಾಗದ ಮೈದಾನಕ್ಕೆ ತರಲಾಯಿತು. ಯುವಕರು ‘ಸುಶೀಲ್ಕುಮಾರ ಅಮರ್ ರಹೇ’ ಎಂದು ಘೋಷಣೆಗಳನ್ನು ಕೂಗಿದರು.</p>.<p>ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್, ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಶೇಖರ ರೆಡ್ಡಿ ಅವರು ಪಾರ್ಥಿವ ಶರೀರದ ಮುಂದೆ ಪುಷ್ಪಗುಚ್ಛವಿರಿಸಿ ಅಂತಿಮ ನಮನ ಸಲ್ಲಿಸಿದರು.</p>.<p>ಬೀದರ್ ಜಿಲ್ಲಾ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಸುಶೀಲ್ಕುಮಾರ ಅವರಿಗೆ ಗೌರವ ಸಲ್ಲಿಸಿದರು. ತೆಲಂಗಾಣ ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳು ಸಹ ಗೌರವ ಸಮರ್ಪಿಸಿದರು.</p>.<p>ಮಂಗಲಪೇಟ್ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಮೆಥೊಡಿಸ್ಟ್ ಚರ್ಚ್ ಜಿಲ್ಲಾ ಮೇಲ್ವಿಚಾರಕ ಜೈಪಾಲ್ ಅವರು ಅಂತ್ಯ ಸಂಸ್ಕಾರದ ವಿಧಿವಿಧಾನ ನಡೆಸಿಕೊಟ್ಟರು.</p>.<p><strong>₹ 60 ಲಕ್ಷ ಪರಿಹಾರ ಘೋಷಣೆ</strong></p>.<p>ಸುಶೀಲ್ಕುಮಾರ ಅವರ ಕುಟುಂಬಕ್ಕೆ ತೆಲಂಗಾಣ ಸರ್ಕಾರ ₹ 60 ಲಕ್ಷ ಪರಿಹಾರ ಘೋಷಿಸಿದೆ.</p>.<p>ಅಲ್ಲಿನ ಡಿಜಿಪಿ ಮಹೇಂದ್ರ ರೆಡ್ಡಿ ಹಾಗೂ ಗುಪ್ತದಳ ವಿಭಾಗದ ಐಜಿ ನವಿನ್ಚಂದ್ರ ಶನಿವಾರ ಬೆಳಿಗ್ಗೆ ಹೆಲಿಕಾಪ್ಟರ್ ಮೂಲಕ ಬೀದರ್ಗೆ ಬಂದು ಸುಶೀಲ್ಕುಮಾರ ಪತ್ನಿ ಸುಷ್ಮಾ, ತಂದೆ ವಿಜಯ ಬೋಪನಪಳ್ಳಿ ಹಾಗೂ ತಾಯಿ ಶಾರದಾ ಅವರಿಗೆ ಸಾಂತ್ವನ ಹೇಳಿದರು.</p>.<p>‘ಸುಶೀಲ್ಕುಮಾರ ಅವರ ಉಳಿದ ಸೇವಾ ಅವಧಿಯ ವೇತನ, ಸುಷ್ಮಾ ಅವರಿಗೆ ಸರ್ಕಾರಿ ನೌಕರಿ ಹಾಗೂ ತೆಲಂಗಾಣ ಸರ್ಕಾರದಿಂದ ₹ 60 ಲಕ್ಷ ಪರಿಹಾರ ಕೊಡಲಾಗುವುದು’ ಎಂದು ಡಿಜಿಪಿ ಮಹೇಂದ್ರ ರೆಡ್ಡಿ ಭರವಸೆ ನೀಡಿದರು. ನಂತರ ಸುಶೀಲ್ಕುಮಾರ ಅವರ ಅಂತ್ಯ ಸಂಸ್ಕಾರಕ್ಕಾಗಿ ₹ 3 ಲಕ್ಷ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ತೆಲಂಗಾಣ-ಛತ್ತೀಸ್ಗಡ ಗಡಿಯಲ್ಲಿ ನಕ್ಸಲರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ನಕ್ಸಲರ ಗುಂಡಿಗೆ ಬಲಿಯಾದ ತೆಲಂಗಾಣ ನಕ್ಸಲ್ ನಿಗ್ರಹ ಪಡೆಯ ಗ್ರೇಹೌಂಡ್ಸ್ನ ಕಮಾಂಡೊ ಬೀದರ್ನ ಸುಶೀಲ್ಕುಮಾರ ಅಂತ್ಯಕ್ರಿಯೆ ನಗರದಲ್ಲಿ ಶನಿವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.</p>.<p>ಗ್ರೇಸ್ ಕಾಲೊನಿಯಲ್ಲಿರುವ ನಿವಾಸದಿಂದ ಪಾರ್ಥೀವ ಶರೀರದ ಮೆರವಣಿಗೆಯನ್ನು ಆರಂಭಿಸಿ ಮೆಥೊಡಿಸ್ಟ್ ಚರ್ಚ್ ಮುಂಭಾಗದ ಮೈದಾನಕ್ಕೆ ತರಲಾಯಿತು. ಯುವಕರು ‘ಸುಶೀಲ್ಕುಮಾರ ಅಮರ್ ರಹೇ’ ಎಂದು ಘೋಷಣೆಗಳನ್ನು ಕೂಗಿದರು.</p>.<p>ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್, ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಶೇಖರ ರೆಡ್ಡಿ ಅವರು ಪಾರ್ಥಿವ ಶರೀರದ ಮುಂದೆ ಪುಷ್ಪಗುಚ್ಛವಿರಿಸಿ ಅಂತಿಮ ನಮನ ಸಲ್ಲಿಸಿದರು.</p>.<p>ಬೀದರ್ ಜಿಲ್ಲಾ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಸುಶೀಲ್ಕುಮಾರ ಅವರಿಗೆ ಗೌರವ ಸಲ್ಲಿಸಿದರು. ತೆಲಂಗಾಣ ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳು ಸಹ ಗೌರವ ಸಮರ್ಪಿಸಿದರು.</p>.<p>ಮಂಗಲಪೇಟ್ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಮೆಥೊಡಿಸ್ಟ್ ಚರ್ಚ್ ಜಿಲ್ಲಾ ಮೇಲ್ವಿಚಾರಕ ಜೈಪಾಲ್ ಅವರು ಅಂತ್ಯ ಸಂಸ್ಕಾರದ ವಿಧಿವಿಧಾನ ನಡೆಸಿಕೊಟ್ಟರು.</p>.<p><strong>₹ 60 ಲಕ್ಷ ಪರಿಹಾರ ಘೋಷಣೆ</strong></p>.<p>ಸುಶೀಲ್ಕುಮಾರ ಅವರ ಕುಟುಂಬಕ್ಕೆ ತೆಲಂಗಾಣ ಸರ್ಕಾರ ₹ 60 ಲಕ್ಷ ಪರಿಹಾರ ಘೋಷಿಸಿದೆ.</p>.<p>ಅಲ್ಲಿನ ಡಿಜಿಪಿ ಮಹೇಂದ್ರ ರೆಡ್ಡಿ ಹಾಗೂ ಗುಪ್ತದಳ ವಿಭಾಗದ ಐಜಿ ನವಿನ್ಚಂದ್ರ ಶನಿವಾರ ಬೆಳಿಗ್ಗೆ ಹೆಲಿಕಾಪ್ಟರ್ ಮೂಲಕ ಬೀದರ್ಗೆ ಬಂದು ಸುಶೀಲ್ಕುಮಾರ ಪತ್ನಿ ಸುಷ್ಮಾ, ತಂದೆ ವಿಜಯ ಬೋಪನಪಳ್ಳಿ ಹಾಗೂ ತಾಯಿ ಶಾರದಾ ಅವರಿಗೆ ಸಾಂತ್ವನ ಹೇಳಿದರು.</p>.<p>‘ಸುಶೀಲ್ಕುಮಾರ ಅವರ ಉಳಿದ ಸೇವಾ ಅವಧಿಯ ವೇತನ, ಸುಷ್ಮಾ ಅವರಿಗೆ ಸರ್ಕಾರಿ ನೌಕರಿ ಹಾಗೂ ತೆಲಂಗಾಣ ಸರ್ಕಾರದಿಂದ ₹ 60 ಲಕ್ಷ ಪರಿಹಾರ ಕೊಡಲಾಗುವುದು’ ಎಂದು ಡಿಜಿಪಿ ಮಹೇಂದ್ರ ರೆಡ್ಡಿ ಭರವಸೆ ನೀಡಿದರು. ನಂತರ ಸುಶೀಲ್ಕುಮಾರ ಅವರ ಅಂತ್ಯ ಸಂಸ್ಕಾರಕ್ಕಾಗಿ ₹ 3 ಲಕ್ಷ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>