<p><strong>ಬಳ್ಳಾರಿ: </strong>‘ರಾಜ್ಯದ ಪ್ರಮುಖ ಸಹಕಾರಿ ಬ್ಯಾಂಕ್ಗಳಲ್ಲಿ ಒಂದಾದ ಸುಕೊ ಬ್ಯಾಂಕ್, 2017–18ರ ಆರ್ಥಿಕ ವರ್ಷದಲ್ಲಿ ₹ 806 ಕೋಟಿ ವಹಿವಾಟು ನಡೆಸಿದೆ’ ಎಂದು ಬ್ಯಾಂಕ್ನ ಅಧ್ಯಕ್ಷ ಮೋಹಿತ್ ಮಸ್ಕಿ ಅವರು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>‘₹ 490 ಕೋಟಿ ಠೇವಣಿ ಸಂಗ್ರಹಿಸಿದ್ದು, ₹ 316 ಕೋಟಿ ಸಾಲ ನೀಡಲಾಗಿದೆ. ಅಲ್ಲದೇ, ₹ 3 ಕೋಟಿ ಆದಾಯ ತೆರಿಗೆ ಪಾವತಿಸಲಾಗಿದೆ. ಆರ್ಥಿಕ ವರ್ಷದಲ್ಲಿ ₹ 7.90 ಕೋಟಿ ಲಾಭವಾಗಿದೆ. ನಿವ್ವಳ ಲಾಭ ₹ 4.5 ಕೋಟಿ ಆಗಿದ್ದು, ಅದರಲ್ಲಿ ಬ್ಯಾಂಕ್ನ ಷೇರುದಾರರಿಗೆ ಶೇ 14 ರಷ್ಟು ಲಾಭಾಂಶ ನೀಡಲಾಗುವುದು.</p>.<p>‘ಈ ವರ್ಷದಲ್ಲಿ ತುಮಕೂರು, ಚಿತ್ರದುರ್ಗ (2ನೇ ಶಾಖೆ), ಹೊಳಲ್ಕೆರೆ, ಹೊಸಪೇಟೆ (2ನೇ ಶಾಖೆ), ಶಿರಸಿ, ಹುನಗುಂದ, ಬಾಗಲಕೋಟೆ ಹಾಗೂ ಬಾದಾಮಿಯಲ್ಲಿ ನೂತನ ಶಾಖೆಗಳನ್ನು ಪ್ರಾರಂಭಿಸಲಾಗುವುದು. ಈಗಾಗಲೇ ಆರ್ಬಿಐಗೆ ಅನುಮತಿಗಾಗಿ ಅರ್ಜಿಯನ್ನು ಸಲ್ಲಿಸಲಾಗಿದೆ. ಪ್ರಸ್ತುತ ಬ್ಯಾಂಕಿನ ಶಾಖೆಗಳು 20 ಇವೆ.</p>.<p>‘ಬ್ಯಾಂಕ್ನ ಗ್ರಾಹಕರಿಗೆ ಮೇ 1ರಿಂದ ಭೀಮ್, ಫೋನ್ ಪೇ, ತೇಜ್ ಹಾಗೂ ಪೇಟಿಎಂಗಳಲ್ಲಿ ವ್ಯವಹರಿಸುವ ಸೌಲಭ್ಯ ಕಲ್ಪಿಸಲಾಗುವುದು. ಆರ್ಬಿಐನಿಂದ ಐಎಫ್ಎಸ್ಸಿ ಕೋಡ್ ಪಡೆಯುವುದರ ಮೂಲಕ ಕೋಡ್ ಪಡೆದ ಉತ್ತರ ಕರ್ನಾಟಕದ ಮೊದಲ ಸಹಕಾರಿ ಬ್ಯಾಂಕ್ ಎನಿಸಲಿದೆ’ ಎಂದರು.</p>.<p><strong>ಉತ್ತಮ ಕೃಷಿಕ, ಕೃಷಿ ತಂತ್ರಜ್ಞ ಪ್ರಶಸ್ತಿ</strong><br /> ‘ಬ್ಯಾಂಕ್ನ ಬೆಳ್ಳಿಹಬ್ಬ ಆಚರಣೆಗೆ ಸಿದ್ಧತೆ ನಡೆದಿದ್ದು, ಕೃಷಿಕರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಉತ್ತಮ ಕೃಷಿಕರಾಗಿ ಬೆಳಗಾವಿ ಜಿಲ್ಲೆಯ ಅಜ್ಜಪ್ಪ ಕುಳಗೋಡು ಮತ್ತು ಉತ್ತಮ ಕೃಷಿ ತಂತ್ರಜ್ಞರಾಗಿ ಧಾರವಾಡ ಜಿಲ್ಲೆಯ ನವಲಗುಂದದ ಧರ್ಮಾರೆಡ್ಡಿ ಲಕ್ಕಣ್ಣವರ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ ₹1 ಲಕ್ಷ ನಗದು ಒಳಗೊಂಡಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ: </strong>‘ರಾಜ್ಯದ ಪ್ರಮುಖ ಸಹಕಾರಿ ಬ್ಯಾಂಕ್ಗಳಲ್ಲಿ ಒಂದಾದ ಸುಕೊ ಬ್ಯಾಂಕ್, 2017–18ರ ಆರ್ಥಿಕ ವರ್ಷದಲ್ಲಿ ₹ 806 ಕೋಟಿ ವಹಿವಾಟು ನಡೆಸಿದೆ’ ಎಂದು ಬ್ಯಾಂಕ್ನ ಅಧ್ಯಕ್ಷ ಮೋಹಿತ್ ಮಸ್ಕಿ ಅವರು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>‘₹ 490 ಕೋಟಿ ಠೇವಣಿ ಸಂಗ್ರಹಿಸಿದ್ದು, ₹ 316 ಕೋಟಿ ಸಾಲ ನೀಡಲಾಗಿದೆ. ಅಲ್ಲದೇ, ₹ 3 ಕೋಟಿ ಆದಾಯ ತೆರಿಗೆ ಪಾವತಿಸಲಾಗಿದೆ. ಆರ್ಥಿಕ ವರ್ಷದಲ್ಲಿ ₹ 7.90 ಕೋಟಿ ಲಾಭವಾಗಿದೆ. ನಿವ್ವಳ ಲಾಭ ₹ 4.5 ಕೋಟಿ ಆಗಿದ್ದು, ಅದರಲ್ಲಿ ಬ್ಯಾಂಕ್ನ ಷೇರುದಾರರಿಗೆ ಶೇ 14 ರಷ್ಟು ಲಾಭಾಂಶ ನೀಡಲಾಗುವುದು.</p>.<p>‘ಈ ವರ್ಷದಲ್ಲಿ ತುಮಕೂರು, ಚಿತ್ರದುರ್ಗ (2ನೇ ಶಾಖೆ), ಹೊಳಲ್ಕೆರೆ, ಹೊಸಪೇಟೆ (2ನೇ ಶಾಖೆ), ಶಿರಸಿ, ಹುನಗುಂದ, ಬಾಗಲಕೋಟೆ ಹಾಗೂ ಬಾದಾಮಿಯಲ್ಲಿ ನೂತನ ಶಾಖೆಗಳನ್ನು ಪ್ರಾರಂಭಿಸಲಾಗುವುದು. ಈಗಾಗಲೇ ಆರ್ಬಿಐಗೆ ಅನುಮತಿಗಾಗಿ ಅರ್ಜಿಯನ್ನು ಸಲ್ಲಿಸಲಾಗಿದೆ. ಪ್ರಸ್ತುತ ಬ್ಯಾಂಕಿನ ಶಾಖೆಗಳು 20 ಇವೆ.</p>.<p>‘ಬ್ಯಾಂಕ್ನ ಗ್ರಾಹಕರಿಗೆ ಮೇ 1ರಿಂದ ಭೀಮ್, ಫೋನ್ ಪೇ, ತೇಜ್ ಹಾಗೂ ಪೇಟಿಎಂಗಳಲ್ಲಿ ವ್ಯವಹರಿಸುವ ಸೌಲಭ್ಯ ಕಲ್ಪಿಸಲಾಗುವುದು. ಆರ್ಬಿಐನಿಂದ ಐಎಫ್ಎಸ್ಸಿ ಕೋಡ್ ಪಡೆಯುವುದರ ಮೂಲಕ ಕೋಡ್ ಪಡೆದ ಉತ್ತರ ಕರ್ನಾಟಕದ ಮೊದಲ ಸಹಕಾರಿ ಬ್ಯಾಂಕ್ ಎನಿಸಲಿದೆ’ ಎಂದರು.</p>.<p><strong>ಉತ್ತಮ ಕೃಷಿಕ, ಕೃಷಿ ತಂತ್ರಜ್ಞ ಪ್ರಶಸ್ತಿ</strong><br /> ‘ಬ್ಯಾಂಕ್ನ ಬೆಳ್ಳಿಹಬ್ಬ ಆಚರಣೆಗೆ ಸಿದ್ಧತೆ ನಡೆದಿದ್ದು, ಕೃಷಿಕರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಉತ್ತಮ ಕೃಷಿಕರಾಗಿ ಬೆಳಗಾವಿ ಜಿಲ್ಲೆಯ ಅಜ್ಜಪ್ಪ ಕುಳಗೋಡು ಮತ್ತು ಉತ್ತಮ ಕೃಷಿ ತಂತ್ರಜ್ಞರಾಗಿ ಧಾರವಾಡ ಜಿಲ್ಲೆಯ ನವಲಗುಂದದ ಧರ್ಮಾರೆಡ್ಡಿ ಲಕ್ಕಣ್ಣವರ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ ₹1 ಲಕ್ಷ ನಗದು ಒಳಗೊಂಡಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>