<p><strong>ನವದೆಹಲಿ: </strong>ಹೆಂಡತಿಯು ಗಂಡನ ಚರಾಸ್ತಿ ಅಲ್ಲ ಅಥವಾ ಆಕೆ ಒಂದು ವಸ್ತುವೂ ಅಲ್ಲ. ಹೆಂಡತಿಯ ಜತೆ ಬದುಕಲು ಗಂಡನಿಗೆ ಇಷ್ಟ ಇರಬಹುದು. ಆದರೆ ಹೆಂಡತಿಗೆ ಇಷ್ಟ ಇಲ್ಲದೆ ಇದ್ದರೆ ಜತೆಗೆ ವಾಸಿಸುವಂತೆ ಗಂಡ ಬಲವಂತ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.</p>.<p>ಮಹಿಳೆಯೊಬ್ಬರು ಗಂಡನ ವಿರುದ್ಧ ಸಲ್ಲಿಸಿದ ದೌರ್ಜನ್ಯ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕೂರ್ ಮತ್ತು ದೀಪಕ್ ಗುಪ್ತಾ ಅವರ ಪೀಠ ಹೀಗೆ ಹೇಳಿದೆ.</p>.<p>ಆದರೆ, ಹೆಂಡತಿಯ ಜತೆಗೇ ವಾಸಿಸಲು ಬಯಸುವುದಾಗಿ ಗಂಡ ನೀಡಿದ ಹೇಳಿಕೆಗೆ ಪೀಠವು ಅಸಮಾಧಾನ ವ್ಯಕ್ತಪಡಿಸಿತು. ‘ಆಕೆಗೆ ನಿಮ್ಮ ಜತೆಗೆ ವಾಸಿಸಲು ಇಷ್ಟ ಇಲ್ಲ ಎಂದ ಮೇಲೆ ಅವರ ಜತೆಗೆ ನೀವು ನೆಲೆಸುವುದು ಹೇಗೆ ಸಾಧ್ಯ’ ಎಂದು ಪೀಠ ಪ್ರಶ್ನಿಸಿತು.</p>.<p>ತಮ್ಮ ಕಕ್ಷಿದಾರರು ಯಾವುದೇ ಕಾರಣಕ್ಕೂ ಗಂಡನ ಜತೆಗೆ ಇರುವುದಿಲ್ಲ ಎಂದು ಹೆಂಡತಿಯ ಪರ ವಕೀಲರು ಸ್ಪಷ್ಟವಾಗಿ ಹೇಳಿದರು. ಹಾಗಾಗಿ ‘ಗಂಡ ತನ್ನ ನಿಲುವನ್ನು ಬದಲಾಯಿಸಿಕೊಳ್ಳಲೇಬೇಕು. ಯಾವುದೇ ವ್ಯಕ್ತಿ ಇಷ್ಟೊಂದು ಅವಿವೇಕದಿಂದ ವರ್ತಿಸುವುದು ಸಾಧ್ಯವಿಲ್ಲ’ ಎಂದು ಪೀಠ ಸೂಚಿಸಿತು.</p>.<p>ತಮ್ಮ ಕಕ್ಷಿದಾರನ ನಿಲುವು ಬದಲಾಯಿಸಲು ಪ್ರಯತ್ನಿಸುವುದಾಗಿ ಗಂಡನ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು. </p>.<p>ಗಂಡನ ದೌರ್ಜನ್ಯ ಸಹಿಸಲಾಗದು. ಅವರಿಂದ ವಿಚ್ಛೇದನ ಪಡೆಯಲು ಬಯಸುವುದಾಗಿ ಮಹಿಳೆ ತಿಳಿಸಿದರು. ‘ಗಂಡನ ವಿರುದ್ಧ ದಾಖಲಿಸಲಾಗಿರುವ ದೌರ್ಜನ್ಯ ಪ್ರಕರಣವನ್ನು ಕೈಬಿಡುತ್ತೇನೆ. ನನಗೆ ಅವರಿಂದ ಜೀವನಾಂಶವೂ ಬೇಡ. ಅವರ ಜತೆಗೆ ಜೀವಿಸುವುದಕ್ಕೆ ಸಾಧ್ಯವೇ ಇಲ್ಲ’ ಎಂದು ಮಹಿಳೆ ಹೇಳಿದರು.</p>.<p>ಇದಕ್ಕೂ ಮೊದಲು, ಈ ಗಂಡ–ಹೆಂಡತಿ ನಡುವೆ ಸಾಮರಸ್ಯ ಮೂಡಿಸಲು ಸುಪ್ರೀಂ ಕೋರ್ಟ್ ಪ್ರಯತ್ನಿಸಿತ್ತು.</p>.<p>ಗಂಡ ಮತ್ತು ಹೆಂಡತಿ ಇಬ್ಬರೂ ವಿದ್ಯಾವಂತರು. ಹಾಗಾಗಿ ಅವರಿಬ್ಬರ ನಡುವೆ ಸಂಧಾನ ಸಾಧ್ಯವಾಗಬಹುದು ಎಂದು ಪೀಠ ಹಿಂದೆ ಹೇಳಿತ್ತು. ಇಬ್ಬರ ನಡುವಣ ಭಿನ್ನಾಭಿಪ್ರಾಯವನ್ನು ಮಾತುಕತೆ ಮೂಲಕ ಬಗೆಹರಿಸಬಹುದು. ದಾವೆ ಹೂಡಿದರೆ ಅದು ಇತ್ಯರ್ಥವಾಗಲು ದೀರ್ಘ ಕಾಲ ಬೇಕಾಗುತ್ತದೆ ಎಂದು ತಿಳಿ ಹೇಳಿತ್ತು.</p>.<p>ತಮ್ಮ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಂಡು ಸಂಧಾನ ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಇಬ್ಬರಿಗೂ ಸೂಚಿಸಿತ್ತು. ಆದರೆ ಸಂಧಾನದ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ.</p>.<p><strong>ಮಹಿಳೆಯೊಬ್ಬರು ಗಂಡನ ವಿರುದ್ಧ ಸಲ್ಲಿಸಿದ್ದ ದೌರ್ಜನ್ಯ ಪ್ರಕರಣದ ವಿಚಾರಣೆ</strong></p>.<p><strong>ಕಕ್ಷಿದಾರನ ನಿಲುವು ಬದಲಾಯಿಸಲು ಯತ್ನಿಸುವುದಾಗಿ ಹೇಳಿಕೆ</strong></p>.<p><strong>ಗಂಡ–ಹೆಂಡತಿ ನಡುವೆ ಸಾಮರಸ್ಯ ಮೂಡಿಸಲು ಸುಪ್ರೀಂ ಕೋರ್ಟ್ ಪ್ರಯತ್ನ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಹೆಂಡತಿಯು ಗಂಡನ ಚರಾಸ್ತಿ ಅಲ್ಲ ಅಥವಾ ಆಕೆ ಒಂದು ವಸ್ತುವೂ ಅಲ್ಲ. ಹೆಂಡತಿಯ ಜತೆ ಬದುಕಲು ಗಂಡನಿಗೆ ಇಷ್ಟ ಇರಬಹುದು. ಆದರೆ ಹೆಂಡತಿಗೆ ಇಷ್ಟ ಇಲ್ಲದೆ ಇದ್ದರೆ ಜತೆಗೆ ವಾಸಿಸುವಂತೆ ಗಂಡ ಬಲವಂತ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.</p>.<p>ಮಹಿಳೆಯೊಬ್ಬರು ಗಂಡನ ವಿರುದ್ಧ ಸಲ್ಲಿಸಿದ ದೌರ್ಜನ್ಯ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕೂರ್ ಮತ್ತು ದೀಪಕ್ ಗುಪ್ತಾ ಅವರ ಪೀಠ ಹೀಗೆ ಹೇಳಿದೆ.</p>.<p>ಆದರೆ, ಹೆಂಡತಿಯ ಜತೆಗೇ ವಾಸಿಸಲು ಬಯಸುವುದಾಗಿ ಗಂಡ ನೀಡಿದ ಹೇಳಿಕೆಗೆ ಪೀಠವು ಅಸಮಾಧಾನ ವ್ಯಕ್ತಪಡಿಸಿತು. ‘ಆಕೆಗೆ ನಿಮ್ಮ ಜತೆಗೆ ವಾಸಿಸಲು ಇಷ್ಟ ಇಲ್ಲ ಎಂದ ಮೇಲೆ ಅವರ ಜತೆಗೆ ನೀವು ನೆಲೆಸುವುದು ಹೇಗೆ ಸಾಧ್ಯ’ ಎಂದು ಪೀಠ ಪ್ರಶ್ನಿಸಿತು.</p>.<p>ತಮ್ಮ ಕಕ್ಷಿದಾರರು ಯಾವುದೇ ಕಾರಣಕ್ಕೂ ಗಂಡನ ಜತೆಗೆ ಇರುವುದಿಲ್ಲ ಎಂದು ಹೆಂಡತಿಯ ಪರ ವಕೀಲರು ಸ್ಪಷ್ಟವಾಗಿ ಹೇಳಿದರು. ಹಾಗಾಗಿ ‘ಗಂಡ ತನ್ನ ನಿಲುವನ್ನು ಬದಲಾಯಿಸಿಕೊಳ್ಳಲೇಬೇಕು. ಯಾವುದೇ ವ್ಯಕ್ತಿ ಇಷ್ಟೊಂದು ಅವಿವೇಕದಿಂದ ವರ್ತಿಸುವುದು ಸಾಧ್ಯವಿಲ್ಲ’ ಎಂದು ಪೀಠ ಸೂಚಿಸಿತು.</p>.<p>ತಮ್ಮ ಕಕ್ಷಿದಾರನ ನಿಲುವು ಬದಲಾಯಿಸಲು ಪ್ರಯತ್ನಿಸುವುದಾಗಿ ಗಂಡನ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು. </p>.<p>ಗಂಡನ ದೌರ್ಜನ್ಯ ಸಹಿಸಲಾಗದು. ಅವರಿಂದ ವಿಚ್ಛೇದನ ಪಡೆಯಲು ಬಯಸುವುದಾಗಿ ಮಹಿಳೆ ತಿಳಿಸಿದರು. ‘ಗಂಡನ ವಿರುದ್ಧ ದಾಖಲಿಸಲಾಗಿರುವ ದೌರ್ಜನ್ಯ ಪ್ರಕರಣವನ್ನು ಕೈಬಿಡುತ್ತೇನೆ. ನನಗೆ ಅವರಿಂದ ಜೀವನಾಂಶವೂ ಬೇಡ. ಅವರ ಜತೆಗೆ ಜೀವಿಸುವುದಕ್ಕೆ ಸಾಧ್ಯವೇ ಇಲ್ಲ’ ಎಂದು ಮಹಿಳೆ ಹೇಳಿದರು.</p>.<p>ಇದಕ್ಕೂ ಮೊದಲು, ಈ ಗಂಡ–ಹೆಂಡತಿ ನಡುವೆ ಸಾಮರಸ್ಯ ಮೂಡಿಸಲು ಸುಪ್ರೀಂ ಕೋರ್ಟ್ ಪ್ರಯತ್ನಿಸಿತ್ತು.</p>.<p>ಗಂಡ ಮತ್ತು ಹೆಂಡತಿ ಇಬ್ಬರೂ ವಿದ್ಯಾವಂತರು. ಹಾಗಾಗಿ ಅವರಿಬ್ಬರ ನಡುವೆ ಸಂಧಾನ ಸಾಧ್ಯವಾಗಬಹುದು ಎಂದು ಪೀಠ ಹಿಂದೆ ಹೇಳಿತ್ತು. ಇಬ್ಬರ ನಡುವಣ ಭಿನ್ನಾಭಿಪ್ರಾಯವನ್ನು ಮಾತುಕತೆ ಮೂಲಕ ಬಗೆಹರಿಸಬಹುದು. ದಾವೆ ಹೂಡಿದರೆ ಅದು ಇತ್ಯರ್ಥವಾಗಲು ದೀರ್ಘ ಕಾಲ ಬೇಕಾಗುತ್ತದೆ ಎಂದು ತಿಳಿ ಹೇಳಿತ್ತು.</p>.<p>ತಮ್ಮ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಂಡು ಸಂಧಾನ ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಇಬ್ಬರಿಗೂ ಸೂಚಿಸಿತ್ತು. ಆದರೆ ಸಂಧಾನದ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ.</p>.<p><strong>ಮಹಿಳೆಯೊಬ್ಬರು ಗಂಡನ ವಿರುದ್ಧ ಸಲ್ಲಿಸಿದ್ದ ದೌರ್ಜನ್ಯ ಪ್ರಕರಣದ ವಿಚಾರಣೆ</strong></p>.<p><strong>ಕಕ್ಷಿದಾರನ ನಿಲುವು ಬದಲಾಯಿಸಲು ಯತ್ನಿಸುವುದಾಗಿ ಹೇಳಿಕೆ</strong></p>.<p><strong>ಗಂಡ–ಹೆಂಡತಿ ನಡುವೆ ಸಾಮರಸ್ಯ ಮೂಡಿಸಲು ಸುಪ್ರೀಂ ಕೋರ್ಟ್ ಪ್ರಯತ್ನ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>