<p><strong>ಹರಪನಹಳ್ಳಿ: </strong>ಭಾನುವಾರ ಸಂಜೆ ಬೀಸಿದ ಭಾರಿ ಬಿರುಗಾಳಿಗೆ ತಾಲ್ಲೂಕಿನ ಅರಸನಾಳು ನವಗ್ರಾಮದ ಒಂಬತ್ತು ಮನೆಗಳ ಚಾವಣಿ ಹಾರಿಹೋಗಿದ್ದು, ಅಪಾರ ಪ್ರಮಾಣದ ನಷ್ಟವಾಗಿದೆ.</p>.<p>ಯರಬಳ್ಳಿ ಮಂಜುಳಮ್ಮ, ಕರಿಯಮ್ಮ ನೆರ್ಕಿ, ಹಡಪದ ಗಂಗಮ್ಮ, ಕುರುವಪ್ಪನವರ ಬಸಮ್ಮ, ಸುಶೀಲಮ್ಮ ಭೀಮಪ್ಪ, ಹುಲಿಕಟ್ಟಿ ನಾಗರಾಜ, ನಿಂಗನಗೌಡರ ಮಾಳಮ್ಮನವರ, ಕಮ್ಮಾರ ಶಾಂತಮ್ಮ, ಬುಕಪ್ಪರ ಬಸಪ್ಪ ಅವರ ಮನೆ ಚಾವಣಿ ಕಿತ್ತು ಹೋಗಿದೆ. ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.</p>.<p>ಸಂಜೆ 6.30ರ ಸುಮಾರಿಗೆ ಭಾರಿ ಪ್ರಮಾಣದಲ್ಲಿ ಬೀಸಿದ ಗಾಳಿಯಿಂದಾಗಿ ಬೇವಿನಕಟ್ಟೆಯ ಮರ ಟೊಂಗೆ ಮುರಿದು ಬಿದ್ದಿದೆ. ಮಳೆ ಪ್ರಮಾಣಕ್ಕಿಂತ ಹೆಚ್ಚು ಬಿರುಗಾಳಿ ಜೋರಾಗಿತ್ತು. ಅರಸನಾಳು ಗ್ರಾಮದಲ್ಲಿರುವ ರಂಗಮಂದಿರದ ಚಾವಣಿ ಕಿತ್ತುಹೋಗಿದೆ.</p>.<p>ಸ್ಥಳಕ್ಕೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಆನಂದ ನಾಯ್ಕ, ಗ್ರಾಮ ಲೆಕ್ಕಿಗ ರಾಜಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುಧಾಕರ ಬಂದು ಪರಿಶೀಲಿಸಿದ್ದಾರೆ.</p>.<p><strong>ತಂಪೆರೆದ ಮಳೆ</strong></p>.<p><strong>ಸಂತೇಬೆನ್ನೂರು:</strong> ಸಂತೇಬೆನ್ನೂರು ಸೇರಿದಂತೆ ಹೋಬಳಿಯ ಹಲವೆಡೆ ಭಾನುವಾರ ಸಂಜೆ ಮಳೆಯ ಸಿಂಚನ ತಂಪೆರೆಯಿತು. ಒಂದು ವಾರದಿಂದ ತಾಪಮಾನ ಹೆಚ್ಚಿತ್ತು. ಬಿರು ಬಿಸಿಲಿಗೆ ಬಳಲಿದ ಮನಗಳಿಗೆ ಮಳೆ ಸಂತಸ ನೀಡಿತು. ಕೇವಲ 15 ನಿಮಿಷ ಕೆಲವೆಡೆ ಉತ್ತಮ ಮಳೆ ಆಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಪನಹಳ್ಳಿ: </strong>ಭಾನುವಾರ ಸಂಜೆ ಬೀಸಿದ ಭಾರಿ ಬಿರುಗಾಳಿಗೆ ತಾಲ್ಲೂಕಿನ ಅರಸನಾಳು ನವಗ್ರಾಮದ ಒಂಬತ್ತು ಮನೆಗಳ ಚಾವಣಿ ಹಾರಿಹೋಗಿದ್ದು, ಅಪಾರ ಪ್ರಮಾಣದ ನಷ್ಟವಾಗಿದೆ.</p>.<p>ಯರಬಳ್ಳಿ ಮಂಜುಳಮ್ಮ, ಕರಿಯಮ್ಮ ನೆರ್ಕಿ, ಹಡಪದ ಗಂಗಮ್ಮ, ಕುರುವಪ್ಪನವರ ಬಸಮ್ಮ, ಸುಶೀಲಮ್ಮ ಭೀಮಪ್ಪ, ಹುಲಿಕಟ್ಟಿ ನಾಗರಾಜ, ನಿಂಗನಗೌಡರ ಮಾಳಮ್ಮನವರ, ಕಮ್ಮಾರ ಶಾಂತಮ್ಮ, ಬುಕಪ್ಪರ ಬಸಪ್ಪ ಅವರ ಮನೆ ಚಾವಣಿ ಕಿತ್ತು ಹೋಗಿದೆ. ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.</p>.<p>ಸಂಜೆ 6.30ರ ಸುಮಾರಿಗೆ ಭಾರಿ ಪ್ರಮಾಣದಲ್ಲಿ ಬೀಸಿದ ಗಾಳಿಯಿಂದಾಗಿ ಬೇವಿನಕಟ್ಟೆಯ ಮರ ಟೊಂಗೆ ಮುರಿದು ಬಿದ್ದಿದೆ. ಮಳೆ ಪ್ರಮಾಣಕ್ಕಿಂತ ಹೆಚ್ಚು ಬಿರುಗಾಳಿ ಜೋರಾಗಿತ್ತು. ಅರಸನಾಳು ಗ್ರಾಮದಲ್ಲಿರುವ ರಂಗಮಂದಿರದ ಚಾವಣಿ ಕಿತ್ತುಹೋಗಿದೆ.</p>.<p>ಸ್ಥಳಕ್ಕೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಆನಂದ ನಾಯ್ಕ, ಗ್ರಾಮ ಲೆಕ್ಕಿಗ ರಾಜಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುಧಾಕರ ಬಂದು ಪರಿಶೀಲಿಸಿದ್ದಾರೆ.</p>.<p><strong>ತಂಪೆರೆದ ಮಳೆ</strong></p>.<p><strong>ಸಂತೇಬೆನ್ನೂರು:</strong> ಸಂತೇಬೆನ್ನೂರು ಸೇರಿದಂತೆ ಹೋಬಳಿಯ ಹಲವೆಡೆ ಭಾನುವಾರ ಸಂಜೆ ಮಳೆಯ ಸಿಂಚನ ತಂಪೆರೆಯಿತು. ಒಂದು ವಾರದಿಂದ ತಾಪಮಾನ ಹೆಚ್ಚಿತ್ತು. ಬಿರು ಬಿಸಿಲಿಗೆ ಬಳಲಿದ ಮನಗಳಿಗೆ ಮಳೆ ಸಂತಸ ನೀಡಿತು. ಕೇವಲ 15 ನಿಮಿಷ ಕೆಲವೆಡೆ ಉತ್ತಮ ಮಳೆ ಆಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>